ದೀಪಕ್ ಹಾಗೂ ಆತನ ಪತ್ನಿ ಕುಸುಮಾ 
ರಾಜ್ಯ

ಪುಟ್ ಪಾತ್ ನಿಂದ ಸರ್ಕಾರದ ಅತಿಥಿ ಗೃಹದವರೆಗೂ ಸಾಗಿದ ವಲಸಿಗ ದಂಪತಿಯ ಕಥೆ!

ಲಾಕ್ ಡೌನ್ ಪರಿಣಾಮದಿಂದಾಗಿ ತೀವ್ರ ತೊಂದರೆ ಎದುರಿಸಿದ ವಲಸಿಗ ದಂಪತಿಯ ಕಥೆ ಸಂತೋಷದಲ್ಲಿ ಮುಕ್ತಾಯವಾಗಿದೆ. ಪುಟ್ ಪಾತ್ ನಲ್ಲಿದ್ದ ಜಾರ್ಖಂಡ್ ಮೂಲದ ದಂಪತಿಗಳನ್ನು ಪತ್ತೆ ಹಚ್ಚುವುದರ ಜೊತೆಗೆ ವೈದ್ಯಕೀಯ ನೆರವು ನೀಡಲಾಗಿದೆ. ಅಲ್ಲದೇ ಅವರಿಗೆ ಸರ್ಕಾರದ ಅತಿಥಿಗೃಹದಲ್ಲಿ ವಾಸ್ತವ್ಯಕ್ಕೆ ಅನುಕೂಲ ಮಾಡಿಕೊಡಲಾಗಿದೆ

ಬೆಂಗಳೂರು: ಲಾಕ್ ಡೌನ್ ಪರಿಣಾಮದಿಂದಾಗಿ ಉಳಿಯಲು ಮನೆ, ತಿನ್ನಲು ಅನ್ನವಿಲ್ಲದೆ ಪುಟ್ ಪಾತ್ ನಲ್ಲಿ  ತೀವ್ರ ತೊಂದರೆ ಎದುರಿಸಿದ ವಲಸಿಗ ದಂಪತಿಯ ಕಥೆ ಸಂತೋಷದಲ್ಲಿ ಮುಕ್ತಾಯವಾಗಿದೆ. ಪುಟ್ ಪಾತ್ ನಲ್ಲಿದ್ದ ಜಾರ್ಖಂಡ್ ಮೂಲದ ದಂಪತಿಗಳನ್ನು ಪತ್ತೆ ಹಚ್ಚುವುದರ ಜೊತೆಗೆ ವೈದ್ಯಕೀಯ ನೆರವು ನೀಡಲಾಗಿದೆ. ಅಲ್ಲದೇ ಅವರಿಗೆ ಸರ್ಕಾರದ ಅತಿಥಿಗೃಹದಲ್ಲಿ ವಾಸ್ತವ್ಯಕ್ಕೆ ಅನುಕೂಲ ಮಾಡಿಕೊಡಲಾಗಿದೆ

ದಾವಣಗೆರೆಯಲ್ಲಿ ಲಾಂಡ್ರಿಯಲ್ಲಿ ಕೆಲಸ ಮಾಡುತ್ತಿದ್ದ ದೀಪಕ್  ಮತ್ತು ಆತನ ಏಳು ತಿಂಗಳ ಗರ್ಭೀಣಿ ಕುಸುಮಾ ಈ ಜೋಡಿಯಾಗಿದ್ದಾರೆ. ಕುಸುಮಾಳನ್ನು ತವರಿಗೆ ಕಳುಹಿಸಲು ಎಲ್ಲಾ ರೀತಿಯ ವ್ಯವಸ್ಥೆ ಮಾಡಿದ ದೀಪಕ್ ಯಶವಂತಪುರ ರೈಲ್ವೆ ನಿಲ್ದಾಣಕ್ಕೆ ತೆರಳಿದ್ದರು ಆದರೆ, ಕೊರೋನಾವೈರಸ್ ಕಾರಣ ಲಾಕ್ ಡೌನ್ ಘೋಷಣೆಯಾಗಿ ರೈಲು ಸಂಚಾರ ಸ್ಥಗಿತಗೊಂಡಿದ್ದರಿಂದ  ಕೆಟ್ಟ ಪರಿಸ್ಥಿತಿ ಎದುರಾಯಿತು

ಏನು ಮಾಡಬೇಕೆಂದು ತೋಚದಂತಾದ ಈ ದಂಪತಿ, ಅಂತಿಮವಾಗಿ ಅತ್ತಿಬೆಲೆಯಲ್ಲಿರುವ ಕುಸುಮಾ ಸಂಬಂಧಿಕರ ಮನೆಗೆ ತೆರಳಿದ್ದಾರೆ. ಸಂಬಂಧಿಕರು ಕೆಲ ದಿನಗಳ ಕಾಲ ವಾಸ್ತವ್ಯಕ್ಕೆ ಅವಕಾಶ ನೀಡಿದ್ದಾರೆ. ಆದರೆ, ಲಾಕ್ ಡೌನ್ ನಿಂದಾಗಿ ಸಂಕಷ್ಟದಲ್ಲಿದ್ದ ಸಂಬಂಧಿಕರು ಕೂಡಾ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವಂತೆ ದೀಪಕ್ ಮತ್ತು ಕುಸುಮಾರಿಗೆ ತಿಳಿಸಿದ್ದಾರೆ. ಇದರಿಂದಾಗಿ ಏಲ್ಲಿಗೆ ಹೋಗುವುದು ಎಂಬುದು ತಿಳಿಯದೆ ಅತ್ತಿಬೆಲೆಯ ಜೈನ್ ದೇವಾಲಯದ ಬಳಿ ಪುಟ್ ಪಾತ್ ನಲ್ಲಿದ್ದರು. ಈ ದಂಪತಿಯನ್ನು ಗಮನಿಸಿದ ಕೆಲವರು ಪೋನ್ ನಂಬರ್ ನೊಂದಿಗೆ ಟ್ವೀಟ್ ಮಾಡಿದ್ದು, ಆಡಳಿತ ಸಂಸ್ಥೆಗಳು ಹಾಗೂ ಸಾರ್ವಜನಿಕರು ಸಹಾಯ ಮಾಡಲು ಮುಂದೆ ಬಂದಿದ್ದಾರೆ.

ಭಾಷೆ ಅರ್ಥವಾಗದೆ ಭಯಭೀತಿಗೊಂಡು ಪೋನ್ ಸ್ವೀಚ್ ಮಾಡಿ ಹತ್ತಿರದ ಕಟ್ಟಡವೊಂದರಲ್ಲಿ ಬಚ್ಚಿಟ್ಟದರು. ವಾರ್ತಾ ಇಲಾಖೆ ಮತ್ತು ಕಾರ್ಮಿಕ ಇಲಾಖೆ ಅಧಿಕಾರಿಗಳು ಅವರನ್ನು ಪತ್ತೆ ಹಚ್ಚಲು ತೆರಳಿದರೂ ಅವರು ಸಿಕ್ಕಿರಲಿಲ್ಲ. ಮಾರನೇ ದಿನ ದೀಪಕ್ ಪೋನ್ ಆನ್ ಮಾಡಿದ್ದಾರೆ. ನಂತರ ಮೊಬೈಲ್ ಟವರ್ ಮೂಲಕ ಅವರಿರುವ ಪ್ರದೇಶವನ್ನು ಪತ್ತೆ ಹಚ್ಚಲಾಯಿತು ಎಂದು ಕೊರೋನಾ ಯೋಧ ವಿಜಯ್ ಗ್ರೋವರ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದರು.

ದಂಪತಿಯನ್ನು ಮೊದಲಿಗೆ ವಾರ್ತಾ ಇಲಾಖೆಗೆ ಕರೆದೊಯ್ಯಲಾಯಿತು. ಕುಸಮಾಳನ್ನು ತಪಾಸಣೆ ಮಾಡಲು ಇಎಸ್ ಐನಿಂದ ವೈದ್ಯರೊಬ್ಬರನ್ನು ಕರೆಯಲಾಯಿತು ನಂತರ ಅವರು ಉಳಿದುಕೊಳ್ಳಲು ಸರ್ಕಾರದ ಅತಿಥಿ ಗೃಹದಲ್ಲಿ ಅವಕಾಶ ನೀಡಲಾಯಿತು. ಲಾಕ್ ಡೌನ್ ಮುಗಿಯುವವರೆಗೂ ಅಲ್ಲಿಯೇ ಉಳಿಯಲು ಅವಕಾಶ ಮಾಡಿಕೊಡಲಾಗಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

West-Asia war: 48 ಗಂಟೆಗಳಲ್ಲಿ ಹೋರ್ಮುಜ್ ಜಲಸಂಧಿ ತೆರೆಯದಿದ್ದರೆ ಇರಾನ್‌ನಲ್ಲಿ ನರಕ ಸೃಷ್ಟಿಸುತ್ತೇವೆ; Trump ಕೊನೇಯ ಎಚ್ಚರಿಕೆ!

IPL 2026: ಅಹಮದಾಬಾದ್ ಮೈದಾನದಲ್ಲಿ RR ವಿರುದ್ಧ ಅತ್ಯಧಿಕ ರನ್ ಚೇಸ್‌ನಲ್ಲಿ ಕೊನೆಯ ಓವರ್‌ನಲ್ಲಿ ಸೋತ Gujarat Titans

ವಿದೇಶಗಳ Mk-84 ಗೆ ಪರ್ಯಾಯ, ಆತ್ಮನಿರ್ಭರತೆಗೆ ಉತ್ತೇಜನ: ದೇಶೀಯವಾಗಿ 1000-kg ವಾಯುಬಾಂಬ್‌ ತಯಾರಿಸಲಿರುವ ಭಾರತ!

ಮಾಗಡಿ Congress ಶಾಸಕ ಹೆಚ್​​.ಸಿ ಬಾಲಕೃಷ್ಣಗೆ ಕೋರ್ಟ್ ಶಾಕ್​​: ಜಾಮೀನು ರಹಿತ ವಾರೆಂಟ್ ಜಾರಿ

'ನೀವೇನು ಸುರಕ್ಷಿತ ಅಲ್ಲ': ಟ್ರಂಪ್ 48 ಗಂಟೆಗಳ ಕೊನೆ ಎಚ್ಚರಿಕೆ ಬೆನ್ನಲ್ಲೆ CIA Station ಗೆ ಡ್ರೋನ್ ನುಗ್ಗಿಸಿ ಇರಾನ್; 1 ನಿಮಿಷದ ಅಂತರದಲ್ಲಿ 2 ಸ್ಫೋಟ!

SCROLL FOR NEXT