ಕೆ,ಸುಧಾಕರ್ ಮತ್ತು ಯಡಿಯೂರಪ್ಪ 
ರಾಜ್ಯ

ಕೊರೋನಾ ಅಂಕಿ ಅಂಶ: ಸಿಎಂ, ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಇಲಾಖೆಯಿಂದ ತದ್ವಿರುದ್ಧ ಮಾಹಿತಿ

410, 401, 390, ಇದು ಕೊರೋನಾ ಬಗ್ಗೆ ಸರ್ಕಾರ ನೀಡಿದ ವಿಭಿನ್ನ ಹೇಳಿಕೆಗಳು, ಸಿಎಂ, ವೈದ್ಯಕೀಯ ಶಿಕ್ಷಣ  ಇಲಾಖೆ  ಮತ್ತು ಆರೋಗ್ಯ ಇಲಾಖೆ ನೀಡಿರುವ ವೈವಿಧ್ಯಮಯವಾದ ಅಂಕಿ ಅಂಶಗಳು. 

ಬೆಂಗಳೂರು: 410, 401, 390, ಇದು ಕೊರೋನಾ ಬಗ್ಗೆ ಸರ್ಕಾರ ನೀಡಿದ ವಿಭಿನ್ನ ಹೇಳಿಕೆಗಳು, ಸಿಎಂ, ವೈದ್ಯಕೀಯ ಶಿಕ್ಷಣ  ಇಲಾಖೆ  ಮತ್ತು ಆರೋಗ್ಯ ಇಲಾಖೆ ನೀಡಿರುವ ವೈವಿಧ್ಯಮಯವಾದ ಅಂಕಿ ಅಂಶಗಳು. 

ಭಾನುವಾರ ಮಧ್ಯಾಹ್ನ ತಮ್ಮನ್ನು ಭೇಟಿ ಮಾಡಿದ ಕಾಂಗ್ರೆಸ್ ನಿಯೋಗಕ್ಕೆ ಸಿಎಂ ಯಡಿಯೂರಪ್ಪ ಕೊರೋನಾ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ರಾಜ್ಯದಲ್ಲಿ 410 ಸೋಂಕಿತರು ಎಂದು ಹೇಳಿದ್ದಾರೆ.

ಶನಿವಾರ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಬುಲೆಟಿನ್ ನಲ್ಲಿ 384 ಕೇಸ್ ಎಂದು ಹೇಳಿತ್ತು. ಮತ್ತೆ ರಾಜ್ಯ ಆರೋಗ್ಯ ಇಲಾಖೆಯ ದೈನಂದಿನ ಮಧ್ಯಾಹ್ನ ಬುಲೆಟಿನ್ ನಂತರ ಸಿಎಂ ಈ ಮಾಹಿತಿ ನೀಡಿದ್ದಾರೆ. ಇದಾದ ನಂತರ ವೈದ್ಯಕೀಯ ಸಚಿವ ಡಾ.ಕೆ ಸುಧಾಕರ್ ಭಾನುವಾರ ಸಂಜೆ ನೀಡಿದ್ದ ಅಂಕಿ ಅಂಶಗಳ ಪ್ರಕಾರ ರಾಜ್ಯದಲ್ಲಿ 401 ಕರೋನಾ ಪ್ರಕರಣಗಳು. 

401 ಸರಿಯಾದ ಅಂಕಿ ಅಂಶ, ಬಾಯ್ತಪ್ಪಿನಿಂದ ಸಿಎಂ 410 ಎಂದು ಹೇಳಿದ್ದಾರೆ ಎಂದು ಮುಖ್ಯಮಂತ್ರಿಳ ಕಚೇರಿ ಸ್ಪಷ್ಟ ಪಡಿಸಿದೆ, ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ ಆರು ಹೊಸ ಪ್ರಕರಣಗಳು ಪತ್ತೆಯಾಗಿದ್ದು ಒಟ್ಟಾರೆ 390 ಕೇಸ್, ಸಿಎಂ ಹೇಳಿದ್ದಕ್ಕಿಂತ 20 ಹಾಗೂ ಸುಧಾಕರ್ ಹೇಳಿದ್ದಕ್ಕಿಂತ 11 ಕೇಸ್ ಕಡಿಮೆ.

ಸುಧಾಕರ್ ಅವರು ವಿವಿಧ ಪ್ರಯೋಗಾಲಯಳಿಂದ ಮಾಹಿತಿ ಪಡೆದು ಹೇಳಿದ್ದಾರೆ., ಅವರು ಹೇಳಿದ ಅಂಕಿ ಅಂಶವೇ ನಿಜವಾದದ್ದು, ಆರೋಗ್ಯ ಇಲಾಖೆಗೆ ಪ್ರಯೋಗಾಲಯಗಳಿಂದ ಮಾಹಿತಿ ಬರುತ್ತದೆ. ಹೀಗಾಗಿ ಸುಧಾಕರ್ ಹೇಳಿದ 401 ಕರೆಕ್ಟ್ ಎಂದು ಸಿಎಂ ಕಚೇರಿ ಸಮರ್ಥಿಸಿಕೊಂಡಿದೆ. 

ಸಿಎಂ ಮತ್ತು ಆರೋಗ್ಯ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣಗಳಲ್ಲಿ ಸಂವಹನ ಕೊರತೆಯೋ ಅಥವಾ ಸಾರ್ನಜನಿಕರ ಕಣ್ತಪ್ಪಿಸಲು ನಿಜವಾದ ಅಂಕಿ ಅಂಶಗಳನ್ನು ಮರೆ ಮಾಚಲಾಗುತ್ತಿದೆಯೆ ಎಂಬ ಸಂಶಯಕ್ಕೆ ಕಾರಣವಾಗಿದೆ.,
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?