ಸತ್ತ ಹುಲಿ ದೇಹ 
ರಾಜ್ಯ

ಬಂಡೀಪುರದಲ್ಲಿ ಹೆಣ್ಣು ಹುಲಿಯ ಸಾವು ಅಸ್ವಾಭಾವಿಕ: ಕೇರಳ-ಕರ್ನಾಟಕ ಸರ್ಕಾರದಿಂದ ತನಿಖೆ

ಕೇರಳದ ವಯನಾಡ್ ವನ್ಯಜೀವಿ ಅಭಯಾರಣ್ಯದಲ್ಲಾದ ಹುಲಿಯ ಸಾವು ಸ್ವಾಭಾವಿಕವಲ್ಲ ಎಂದು ಬಂಡೀಪುರ ಹುಲಿ ಮೀಸಲು ಪ್ರದೇಶದ ಕ್ಯಾಮೆರಾಗಳ ಚಿತ್ರಗಳಿಂದ ಬಹಿರಂಗವಾಗಿದೆ. 

ಹುಬ್ಬಳ್ಳಿ: ಕೇರಳದ ವಯನಾಡ್ ವನ್ಯಜೀವಿ ಅಭಯಾರಣ್ಯದಲ್ಲಾದ ಹುಲಿಯ ಸಾವು ಸ್ವಾಭಾವಿಕವಲ್ಲ ಎಂದು ಬಂಡೀಪುರ ಹುಲಿ ಮೀಸಲು ಪ್ರದೇಶದ ಕ್ಯಾಮೆರಾಗಳ ಚಿತ್ರಗಳಿಂದ ಬಹಿರಂಗವಾಗಿದೆ. 

5-6 ವರ್ಷ ವಯಸ್ಸಿನ  ಹುಲಿ ಸಾವನ್ನಪ್ಪಿರುವುದು ಫೋಟೋಗಳಲ್ಲಿ ಸೆರೆಯಾಗಿದೆ.  ಕಿಡಿಗೇಡಿಗಳ ಬಲೆಗೆ ಬಿದ್ದಿದ್ದ ಹುಲಿಗೆ ನಂತರ ಉಂಟಾದ ಸೋಂಕಿನಿಂದಾಗಿ  ಹುಲಿ ಸಾವನ್ನಪ್ಪಿದೆ , ಏಪ್ರಿಲ್ 13 ರಂದು ಅರ್ದದಷ್ಟು ಕೊಳೆತು ಹೋದ ಸ್ಥಿತಿಯಲ್ಲಿ ಹುಲಿಯ ಶವ ಕೇರಳದ ವಯನಾಡ್ ಅಭಯಾರಣ್ಯದ ಕುರ್ಚಿಯಾಟ್ ವಲಯದಲ್ಲಿ ಸಿಕ್ಕಿತ್ತು.

ಹುಲಿಯ ದೇಹದ ಮೇಲೆ ಯಾವುದೇ ಗಾಯಗಳಿರಲಿಲ್ಲ, ಹೀಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಸ್ವಾಭಾವಿಕ ಸಾವು ದಾಖಲಿಸಿದ್ದರು, ಆದರೆ ಅರಣ್ಯದ ಕ್ಯಾಮೆರಾದಲ್ಲಿ ಸೆರೆಯಾದ ಫೋಟೋಗಳನ್ನು ಕೂಲಂಕುಷವಾಗಿ ಪರಿಶೀಲಿಸಿದಾಗ ಹುಲಿಯ ಸಾವು ಸ್ವಾಭಾವಿಕವಲ್ಲ ಎಂಬುದು ಬೆಳಕಿಗೆ  ಬಂದಿದೆ.

2019ರ ಡಿಸೆಂಬರ್ ನಿಂದ ಮಾರ್ಚ್ 2020 ವರೆಗೆ ಈ ಹುಲಿ ಸಂಚರಿಸಿರುವುದು ಬಂಡೀಪುರ ಅಭಯಾರಣ್ಯದ ಎನ್ ಬೇಗೂರು ಮತ್ತು ಗುಂಡೆ ಅರಣ್ಯ ಪ್ರದೇಶದ ಕ್ಯಾಮೆರಾದಲ್ಲಿ ಪತ್ತೆಯಾಗಿದೆ.

ಮಾರ್ಚ್ 2020 ಮೊದಲ ವಾರದಲ್ಲೆ ಸೆರೆಯಾಗಿರುವ ಫೋಟೋದಲ್ಲಿ ಹುಲಿಗೆ ಕತ್ತಿನ ಭಾಗದಲ್ಲಿ ಗಾಯದಿಂದ ಸೋಂಕು ಉಂಟಾಗಿರುವುದು ಕಂಡು ಬಂದಿದೆ.

ಕಿಡಿಗೇಡಿಗಳು ಅದನ್ನು ಬೇಟೆಯಾಡಲು ಹಾಕಿದ್ದ ಉರುಳಿನಿಂದ ಅದರ ಕುತ್ತಿಗೆ ಭಾಗದಲ್ಲಿ ಗಾಯವಾಗಿದೆ ಎಂದು ಹಿರಿಯ ಅರಣ್ಯ ಅದಿಕಾರಿಯೊಬ್ಬರು ತಿಳಿಸಿದ್ದಾರೆ. ಹೀಗಾಗಿ ಕರ್ನಾಟಕ ಮತ್ತು ಕೇರಳ ಸರ್ಕಾರ ತನಿಖೆಗೆ ಆದೇಶಿಸಿವೆ. ಈಗಾಗಲೇ ಎಫ್ ಐ ಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿರುವ ಕೇರಳ ಸರ್ಕಾರ ಕರ್ನಾಟಕಕ್ಕೂ ತನಿಖೆ ನಡೆಸುವಂತೆ ಸೂಚಿಸಿದೆ,

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

ಶಿಬು ಸೊರೇನ್ 'ರಾಜ್ಯದ ಪಿತಾಮಹ' ಎಂದು ಘೋಷಿಸುವಂತೆ ಜೆಎಂಎಂ ಆಗ್ರಹ

Indian Stock Market: ಸತತ ಕುಸಿತ, ಬರೊಬ್ಬರಿ ಶೇ.1ರಷ್ಟು ಕುಸಿದ Sensex, Nifty 50, ರೂಪಾಯಿ ಮೌಲ್ಯ ಇಳಿಕೆ!

SCROLL FOR NEXT