ರಾಜ್ಯ

ಕೊಪ್ಪಳ: ಭತ್ತದ ಬೆಳೆ ನಷ್ಟಕ್ಕೆ ರೈತ ನೇಣಿಗೆ ಶರಣು

Srinivas Rao BV

ಕೊಪ್ಪಳ: ಸಾಲದ ಬಾಧೆ ತಾಳಲಾರದೇ ರೈತ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ. 

ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಚಳ್ಳೂರು ಗ್ರಾಮದಲ್ಲಿ ಹೇಮಂತರಾಜ್ ದೇಸಾಯಿ (40)ಮೃತ ರೈತ. ಬ್ಯಾಂಕ್ ಗಳಲ್ಲಿ ಹಾಗೂ ಕೈಗಡ ಸಾಲ ಮಾಡಿಕೊಂಡಿದ್ದರು ಎಂದು ತಿಳಿದುಬಂದಿದೆ. 

ಮನೆಯಲ್ಲಿ ಯಾರು ಇಲ್ಲದಾಗ ಹೇಮಂತರಾಜ್ ದೇಸಾಯಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ಕಾರಟಗಿ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.

SCROLL FOR NEXT