ರಾಜ್ಯ

ಹಳೇ ವೈಷಮ್ಯದಿಂದ ಯುವಕನ ಕೊಲೆ; ಸ್ನೇಹಿತರ ಬಂಧನ 

Shilpa D

ಬೆಂಗಳೂರು: ಹಳೆ ದ್ವೇಷದ ಹಿನ್ನೆಲೆಯಲ್ಲಿ ಯುವಕನೋರ್ವನನ್ನು ಬರ್ಬರವಾಗಿ ಕೊಲೆ‌ ಮಾಡಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. 

27 ವರ್ಷದ ಮಣಿ ಕೊಲೆಯಾದ ಯುವಕ. ಸಂತೋಷ್, ಅಲೆಕ್ಸಾಂಡರ್, ವಿಜಯ್, ದಿಲೀಪ್ ಹಾಗೂ ವಿಶಾಲ್ ಬಂಧಿತ ಆರೋಪಿಗಳು. ಆ.3ರ ಮಧ್ಯ ರಾತ್ರಿ ಬಿಟಿಎಂ ಲೇಔಟ್ ನ2ನೇ ಹಂತದ ಎನ್ ಎಸ್ ಪಾಳ್ಯದಲ್ಲಿ ಮಣಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು.

ಕೊಲೆಯಾಗಿರುವ ಮಣಿಯ ತಮ್ಮ ಲೋಕೇಶ್ ಹಾಗೂ ಆರೋಪಿಗಳು ಸ್ನೇಹಿತರಾಗಿದ್ದರು. ಕ್ಷುಲ್ಲಕ ಕಾರಣಕ್ಕಾಗಿ ಆರೋಪಿ ಹಾಗೂ ಲೋಕೇಶ್ ಮಧ್ಯೆ ಜಗಳವಾಗಿತ್ತು. ಈ ಗಲಾಟೆಯಲ್ಲಿ ಮಧ್ಯ ಪ್ರವೇಶಿಸಿದ ಮಣಿ, ತಮ್ಮ ಸಹೋದರನ ಪರವಾಗಿ ಜಗಳ ಮಾಡಿಕೊಂಡಿದ್ದನು. ಇದೇ ಕಾರಣದಿಂದ ಆರೋಪಿಗಳು ಮಣಿಯನ್ನು ಕೊಲೆಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣದ ಜಾಡು ಹಿಡಿದ ಮೈಕೋ ಲೇಔಟ್ ಠಾಣೆ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

SCROLL FOR NEXT