ರಾಜ್ಯ

ರಾಯಚೂರು: ವಿದ್ಯುತ್‍ ಸ್ಪರ್ಶಿಸಿ ತಂದೆ, ಮಗ ದುರ್ಮರಣ

Vishwanath S

ರಾಯಚೂರು: ರಾಯಚೂರು ತಾಲ್ಲೂಕಿನ ದಿನ್ನಿ ಗ್ರಾಮದಲ್ಲಿ ಶುಕ್ರವಾರ ಭಾರಿ ಮಳೆ ನಂತರ ತಮ್ಮ ಮನೆಯ ವಿದ್ಯುತ್ ತಂತಿಯನ್ನು ಬದಲಿಸುವಾಗ ತಂದೆ ಮತ್ತು ಮಗ ವಿದ್ಯುತ್‍ ಸ್ಪರ್ಶದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ.ಮೃತರನ್ನು ಮಹೇಶ್ (47) ಮತ್ತು ನವೀನ್ (16) ಎಂದು ಗುರುತಿಸಲಾಗಿದೆ.

ಗ್ರಾಮದಲ್ಲಿ ಭಾರಿ ಮಳೆಯಿಂದಾಗಿ ಮನೆಯ ವಿದ್ಯುತ್‍ ವೈರ್‍ ಗಳು ಸುಟ್ಟುಹೋದ ಕಾರಣ ಶುಕ್ರವಾರ ಬೆಳಿಗ್ಗೆ 6 ಗಂಟೆ ಸುಮಾರಿಗೆ ಮಹೇಶ್ ವಿದ್ಯುತ್ ವೈರ್‍ ಅನ್ನು ಬದಲಾಯಿಸಲು ಪ್ರಯತ್ನಿಸಿದಾಗ ಈ ದುರಂತ ಸಂಭವಿಸಿದೆ.

ಅವರ ಮನೆಯುದ್ದಕ್ಕೂ ಹಾದುಹೋಗುವ 11 ಕಿಲೋ ವ್ಯಾಟ್‍ ತಂತಿಯಿಂದ ವಿದ್ಯುತ್ ಸ್ಪರ್ಶಕ್ಕೆ ಒಳಗಾದ ಮಹೇಶ್‍ ಸ್ಥಳದಲ್ಲೇ ಮೃತಪಟ್ಟಿದ್ದಾರೆ. 

ತಂದೆಯನ್ನು ಉಳಿಸಲು ಹೋದ ನವೀನ್‍ ಸಹ ವಿದ್ಯುತ್‍ ಸ್ಪರ್ಶದಿಂದ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕುರಿತಂತೆ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

SCROLL FOR NEXT