ರಾಜ್ಯ

ಕಲಬುರಗಿ: ಮಳೆ ನೀರಲ್ಲಿ ಕೊಚ್ಚಿಹೋದ ಬಾಲಕ

Raghavendra Adiga

ಕಲಬುರಗಿ: ಕಲಬುರಗಿ ಜಿಲ್ಲೆ ಭೀಮಳ್ಳಿ ಸಮೀಪ ಹರಿಯುತ್ತಿದ್ದ ಮಳೆ ನೀರಿನಲ್ಲಿ ಬೈಕ್ ಸವಾರಿಗೆ ಮುಂದಾದಾಗ ಹನ್ನೆರಡು ವರ್ಷದ ಬಾಲಕ ನೀರಲ್ಲಿ ಕೊಚ್ಚಿ ಹೋಗಿದ್ದು ಇನ್ನೊಬ್ಬ ಯುವಕ ಬಚಾವ್ ಆಗಿದ್ದಾನೆ.

ಮೃತ ಬಾಲಕನನ್ನು ಜಿಲ್ಲೆಯ ಡಬರಾಬಾದ್ ಗ್ರಾಮದ ಚಿರು (12) ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು ವಿಶ್ವರಾಧ್ಯ (22) ಎಂಬ ಯುವಕನ್ನು ರಕ್ಷಿಸಲಾಗಿದೆ,

ಮಳೆ ನೀರಿನಿಂದ ತುಂಬಿ ತುಳುಕುತ್ತಿರುವ ಬೋಸಗಾ ಕೆರೆ ವೀಕ್ಷಣೆಗಾಗಿ ಈ ಇಬ್ಬರೂ ಬೈಕ್ ನಲ್ಲಿ ತೆರಳಿದ್ದು ಮರಳುವಾಗ ಭೀಮಳ್ಳಿ ಬಳಿಯ ಹಳ್ಳ ದಾಟುವಾಗ ನೀರಿನ ರಭಸಕ್ಕೆ ಬೈಕ್ ಸವಾರರು ಕೊಚ್ಚಿ ಹೋಗಿದ್ದಾರೆ.ಆದರೆ ವಿಶ್ವರಾಧ್ಯ  ಳೀಯರ ನೆರವಿನಿಂದ ಬದುಕಿದ್ದಾನೆ. 

ಘಟನೆ ಮಾಹಿತಿ ಪಡೆದ ಕಲಬುರಗಿ ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

SCROLL FOR NEXT