ರಾಜ್ಯ

ರಾಜ್ಯ ಸರ್ಕಾರ 'ಲವ್ ಜಿಹಾದ್' ನಿಷೇಧಿಸುವುದು ಖಂಡಿತ: ಸಚಿವ ಆರ್ ಅಶೋಕ್ 

Sumana Upadhyaya

ಬೆಂಗಳೂರು: ರಾಜ್ಯ ಸರ್ಕಾರ ಲವ್ ಜಿಹಾದ್ ನ್ನು ನಿಷೇಧ ಮಾಡಿಯೇ ತೀರುತ್ತದೆ ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದ್ದಾರೆ. 

ಬೆಂಗಳೂರಿನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಪ್ರೀತಿ, ಪ್ರೇಮದ ಹೆಸರಿನಲ್ಲಿ ನಾಟಕವಾಡಿ ಲವ್ ಜಿಹಾದ್ ಮಾಡುವವರನ್ನು ಸರ್ಕಾರ ಜೈಲಿಗೆ ಕಳುಹಿಸುವುದು ಖಂಡಿತ ಎಂದರು.

ಲವ್ ಜಿಹಾದ್ ವಿಚಾರದಲ್ಲಿ ಸರ್ಕಾರ ಕಾಯ್ದೆ ತರಲು ಮುಂದಾದರೆ ವಿರೋಧಿಸುವುದಾಗಿ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ಆರ್ ಅಶೋಕ್, ಲವ್ ಜಿಹಾದ್ ನ್ನು ವಿರೋಧಿಸಲು ಸಿದ್ದರಾಮಯ್ಯ ಯಾರು, ಅವರು ಸರ್ಕಾರ ನಡೆಸುತ್ತಿದ್ದಾರೆಯೇ, ಈಗ ರಾಜ್ಯದಲ್ಲಿರುವುದು ಬಿಜೆಪಿ ಸರ್ಕಾರ, ನಮ್ಮ ಸರ್ಕಾರ ಲವ್ ಜಿಹಾದ್ ನ್ನು ನಿಷೇಧಿಸುವ ಕಾನೂನು ಜಾರಿಗೆ ತರುವುದು ಶತಃಸಿದ್ಧ ಎಂದರು.

SCROLL FOR NEXT