ರಾಜ್ಯ

ದಾವಣಗೆರೆ: ಭಿಕ್ಷೆ ಬೇಡುತ್ತಿದ್ದ ತಾಯಿ, ಮಗ ಅಪಘಾತದಲ್ಲಿ ಸಾವು

Shilpa D

ದಾವಣಗೆರೆ: ಭಿಕ್ಷೆ ಬೇಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ವಿಕಲಚೇತನರಿಬ್ಬರಿಗೆ ಕ್ರೇನ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕಿನ ನಲ್ಲೂರು ಗ್ರಾಮದ ಬಳಿ ಸಂಭವಿಸಿದೆ.

 ರುಕ್ಸಾನಾ (40), ಸಲೀಂ(10), ಮೃತ ತಾಯಿ, ಮಗ. ಚನ್ನಗಿರಿ ಪಟ್ಟಣದಿಂದ ನಲ್ಲೂರಿಗೆ ಕ್ರೇನ್ ತೆರಳುತ್ತಿದ್ದಾಗ ಅದೇ ರಸ್ತೆ ಬದಿಯಲ್ಲಿ ವ್ಹೀಲ್ ಚೇರ್ನಲ್ಲಿ ಭಿಕ್ಷೆ ಬೇಡುತ್ತಿದ್ದ ವಿಕಲಚೇತನ ಮಹಿಳೆ ಮತ್ತು ಆಕೆಯ ಮಗುವಿಗೆ ಕ್ರೇನ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರೂ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಪೊಲೀಸರು‌ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

SCROLL FOR NEXT