ಪಿಎಚ್ ಡಿ ಪಡೆದ ಮನುಕುಮಾರ್ 
ರಾಜ್ಯ

ಕಣ್ಣು ಹೋದರೂ ಕನಸು ಬಿಡದ‌ ಛಲದಂಕ: ಬ್ರೈಲ್​​ ಲಿಪಿ ಬಳಸದೆ ಪಿಎಚ್​ಡಿ ಪಡೆದ ವಿಶೇಷಚೇತನ

ಗುಂಡ್ಲುಪೇಟೆ ತಾಲೂಕಿನ ಹಂಗಳದ ಎಆರ್​​ಎಸ್ಐ ನಾಗಪ್ಪ ಅವರ ಪುತ್ರ ಮನುಕುಮಾರ್ ಈ ಸಾಧನೆ ಮಾಡಿದ ಜಿಲ್ಲೆಯ ವಿಶೇಷಚೇತನ ಯುವಕ. ಹುಟ್ಟಿನಿಂದಲೇ ಅಂಧತ್ವ ಪಡೆದ ಮನುಕುಮಾರ್ ಓದುವ ಆಸೆ ಬಿಡದೆ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪಿಎಚ್​ಡಿ ಪದವಿ ಪಡೆದಿದ್ದಾರೆ.

ಚಾಮರಾಜನಗರ: ಕಣ್ಣಿದ್ದವರೇ ಓದು ತಲೆಗೆ ಹತ್ತದೇ ಇಲ್ಲವೇ ನಿರಾಸಕ್ತಿಯಿಂದ ಅರ್ಧಕ್ಕೆ ವಿದ್ಯೆ ನಿಲ್ಲಿಸುವವರ ನಡುವೆ ಈ‌ ಅಂಧ ವ್ಯಕ್ತಿ ಮೈಸೂರು ವಿವಿಯಲ್ಲಿ ಮಹಾಪ್ರಬಂಧ ಮಂಡಿಸಿ ಪಿಎಚ್ಡಿಗೆ ಭಾಜನರಾಗಿದ್ದಾರೆ.

ಗುಂಡ್ಲುಪೇಟೆ ತಾಲೂಕಿನ ಹಂಗಳದ ಎಆರ್​​ಎಸ್ಐ ನಾಗಪ್ಪ ಅವರ ಪುತ್ರ ಮನುಕುಮಾರ್ ಈ ಸಾಧನೆ ಮಾಡಿದ ಜಿಲ್ಲೆಯ ವಿಶೇಷಚೇತನ ಯುವಕ. ಹುಟ್ಟಿನಿಂದಲೇ ಅಂಧತ್ವ ಪಡೆದ ಮನುಕುಮಾರ್ ಓದುವ ಆಸೆ ಬಿಡದೆ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪಿಎಚ್​ಡಿ ಪದವಿ ಪಡೆದಿದ್ದಾರೆ.

ಬ್ರೈಲ್​​ ಲಿಪಿ ಬಳಸದೆ ಪಿಎಚ್​ಡಿ ಪಡೆದ ವಿಶೇಷಚೇತನ
ಮೈವಿವಿಯ ಸಂಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಆರ್‌.ಎನ್‌.ದಿನೇಶ್ ಮಾರ್ಗದರ್ಶನದಲ್ಲಿ "ಚಾಮರಾಜನಗರ ಜಿಲ್ಲೆಯ ದಿವ್ಯಾಂಗ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯಲ್ಲಿ ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳ ಪಾತ್ರ-ಒಂದು ಅಧ್ಯಯನ" ಎಂಬ ವಿಷಯದಲ್ಲಿ ಮಹಾಪ್ರಬಂಧ  ಮಂಡಿಸಿ ಪಿಎಚ್ ಅಡಿ ಪದವಿ ಪಡೆದಿದ್ದಾರೆ. ಮೂರುವರೆ ವರ್ಷ 105 ಶಾಲೆಯ 354 ಮಕ್ಕಳನ್ನು ಅಧ್ಯಯನಕ್ಕೆ ಒಳಪಡಿಸಿ ಸಂಶೋಧನಾ ಪ್ರಬಂಧ ಬರೆದಿದ್ದಾರೆ.

ಬ್ರೈಲ್ ಲಿಪಿ ಬಳಸಲ್ಲ, ವಿಶೇಷ ಶಾಲೆಗೆ ಹೋಗಿಲ್ಲ:
ಮನುಕುಮಾರ್ ಅವರ ಏಕಾಗ್ರತೆಗೆ ಸಾಕ್ಷಿ ಎಂಬಂತೆ ಇಲ್ಲಿಯವರೆಗೂ ಅಂಧರು ಬಳಸುವ ಯಾವುದೇ ಸಾಧನವನ್ನು ಬಳಸದೇ ಸಾಮಾನ್ಯರಂತೆ ಓಡಾಟ ನಡೆಸುತ್ತಾರೆ. ಜೊತೆಗೆ, ಟೇಪ್ ರೆಕಾರ್ಡರ್, ಮೊಬೈಲ್ ಸಹಾಯದ ಮೂಲಕ ಧ್ವನಿ ಮುದ್ರಿಸಿಕೊಂಡು, ಆಡಿಯೋ ಪುಸ್ತಕಗಳನ್ನು  ಕೇಳಿ ಸಾಮಾನ್ಯ ಶಾಲೆಯಲ್ಲೇ ಕಲಿತು ಈ ಸಾಧನೆ ಮಾಡಿದ್ದಾರೆ

ವರದಿ: ಗುಳಿಪುರ ನಂದೀಶ. ಎಂ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

'ನಂಗೇ ಕೊಡಿ ಎಂದು ನಾನೇನು ಕೇಳಿಲ್ಲ..': ನೊಬೆಲ್ ಶಾಂತಿ ಪ್ರಶಸ್ತಿ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತು!

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

2nd test, Day 2: 518 ರನ್ ಗಳಿಗೆ ಭಾರತ ಇನ್ನಿಂಗ್ಸ್ ಡಿಕ್ಲೇರ್!

SCROLL FOR NEXT