ರಾಜ್ಯ

ಪೋಲೀಸರಿಗೆ ಬೆದರಿಕೆ ಹಾಕಿ ಕರ್ತವ್ಯಕ್ಕೆ ಅಡ್ಡಿ: ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ವಿರುದ್ಧ ಎಫ್ಐಆರ್ ದಾಖಲು

Raghavendra Adiga

ಬಾಗಲಕೋಟೆ: ಪೋಲೀಸ್ ಠಾಣೆಗೆ ನುಗ್ಗಿ ಬೆದರಿಕೆ ಹಾಕುವ ಮೂಲಕ ಪೋಲೀಸ್ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದ ಹುನಗುಂದ ಮಾಜಿ ಶಾಸಕ, ಕಾಂಗ್ರೆಸ್​ ಮುಖಂಡ  ವಿಜಯಾನಂದ ಕಾಶಪ್ಪನವರ್ ಅವರ ವಿರುದ್ಧ  ಎಫ್ಐಆರ್ ದಾಖಲಾಗಿದೆ.

ವಿಜಯಾನಂದ ಕಾಶಪ್ಪನವರ್ ಪೋಲೀಸರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಮಾತ್ರವಲ್ಲದೆ ಪ್ರಕರಣವೊಂದರ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ತಮ್ಮ ಬೆಂಬಲಿಗರಿಗೆ ನೋಟೀಸ್ ನೀಡಿದ್ದ ಪೋಲೀಸರಿಗೆ ಪೋಲೀಸ್ ಠಣೆಗೆ ನುಗ್ಗಿ ಬೆದರಿಕೆ ಹಾಕಿದ್ದಾರೆ ಎಂದು ಇಳಕಲ್ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹುನಗುಂದ ಸರ್ಕಲ್ ಇನ್ಸ್‌ಪೆಕ್ಟರ್ ಅಯ್ಯನಗೌಡ ಪಾಟೀಲ್ ನೇತೃತ್ವದಲ್ಲಿ ಕಾಶಪ್ಪನವರ್  ಹಾಗೂ ಇತರೆ ಮೂವರ ವಿರುದ್ಧ ಸೆಕ್ಷನ್ 143, 147, 353, 504, 506 ಅಡಿಯಲ್ಲಿ ಎಫ್ಐಆರ್ ದಾಖಲು ಮಾಡಲಾಗಿದೆ.

SCROLL FOR NEXT