ರಾಜ್ಯ

ಆರ್.ಎಸ್.ಎಸ್. ಮುಖಂಡ, ಉದ್ಯಮಿ ಮಂಜೇಶ್ವರ ಪದ್ಮನಾಭ ಕಾಮತ್ ನಿಧನ

Raghavendra Adiga

ಮಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ(ಆರ್.ಎಸ್.ಎಸ್.) ಮುಖಂಡ  ಉದ್ಯಮಿ, ಮಂಜೇಶ್ವರ ಪದ್ಮನಾಭ ಕಾಮತ್ (94) ನಿಧನರಾಗಿದ್ದಾರೆ.

ಮದನಂತೇಶ್ವರ ದೇವಸ್ಥಾನದ ಮಾಜಿ ಟ್ರಸ್ಟಿಯಾಗಿದ್ದ ಕಾಮತ್ ಭಾನುವಾರ ಬೆಳಗ್ಗೆ ನಗರದಲ್ಲಿರುವ ಸ್ವಗೃಹದಲ್ಲಿ ನಿಧನರಾಗಿದ್ದಾರೆ. 

ಮೃತ ಕಾಮತ್ ತುರ್ತು ಪರಿಸ್ಥಿತಿಯ ವೇಳೆ ಒಂದೂವರೆ ವರ್ಷದ ಕಾಲ ಕೇರಳ ಕಣ್ಣೂರು ಜೈಲಿನಲ್ಲಿ ಸೆರೆಮನೆ ವಾಸ ಅನುಭವಿಸಿದ್ದರು. 

ಮಂಜೇಶ್ವರ ವ್ಯಾಪ್ತಿಯಲ್ಲಿ ಭಾರತೀಯ ಜನತಾ ಪಕ್ಷವನ್ನು ಕಟ್ಟಿ ಬೆಳೆಸಿದ್ದ ಕಾಮತ್ ಟ್ರಾನ್ಸ್‌ಪೋರ್ಟ್ ಸೇರಿದಂತೆ ವಿವಿಧ ಉದ್ಯಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

ಮೃತರು ಪುತ್ರ ಮೋಹನ್‌ದಾಸ್ ಕಾಮತ್ ಕುವೈಟ್ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

SCROLL FOR NEXT