ಹೊಸಪೇಟೆ: ಬಗೆ ಹರಿಯದೆ ಕಗ್ಗಂಟಾಗಿ ಉಳಿದ ಮೈಲಾರ ಲಿಂಗೇಶ್ವರ ದೇವಸ್ಥಾನದ ವಿವಾದ 
ರಾಜ್ಯ

ಹೊಸಪೇಟೆ: ಬಗೆ ಹರಿಯದೆ ಕಗ್ಗಂಟಾಗಿ ಉಳಿದ ಮೈಲಾರ ಲಿಂಗೇಶ್ವರ ದೇವಸ್ಥಾನದ ವಿವಾದ

ಮೈಲಾರ ಲಿಂಗೇಶ್ವರ ದೇವಸ್ಥಾನದ ವಿವಾದ ಬಗೆಹರಿಯದೆ ದೇವಸ್ಥಾನದ ಆಡಳಿತಾಧಿಕಾರಿ ಮತ್ತು ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ನಡುವೆ ಹಗ್ಗ ಜಗ್ಗಾಟ ಮುಂದುವರೆದಿದೆ. 

ಹೊಸಪೇಟೆ: ಮೈಲಾರ ಲಿಂಗೇಶ್ವರ ದೇವಸ್ಥಾನದ ವಿವಾದ ಬಗೆಹರಿಯದೆ ದೇವಸ್ಥಾನದ ಆಡಳಿತಾಧಿಕಾರಿ ಮತ್ತು ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ನಡುವೆ ಹಗ್ಗ ಜಗ್ಗಾಟ ಮುಂದುವರೆದಿದೆ. 

ವೆಂಕಪ್ಪಯ್ಯ ಒಡೆಯರ್ ತನಗೆ ಬೇಕಾದ ಕಾರ್ಣಿಕದ ಗೊರವಯ್ಯನನ್ನೇ ನೇಮಕ ಮಾಡಯವಂತೆ ಪಟ್ಟು ಹಿಡಿದಿದ್ದಾರೆ. 
ಕಳೆದ ಮೂರು ವರ್ಷಗಳ ಹಿಂದೆ ಬಳ್ಳಾರಿ ಜಿಲ್ಲಾಡಳಿತ ನೇಮಕಮಾಡಿದ ರಾಮಪ್ಪ ಗೊರವಯ್ಯನೇ ಕಾರ್ಣಿಕ ನುಡಿಯುತಿದ್ದಾನೆ ಈ ವರ್ಷ ಗೊರವಯ್ಯ ರಾಮಪ್ಪನನ್ನ ಬದಲಿಸುವಂತೆ ಪಟ್ಟು ಹಿಡಿದು ಧರ್ಮದರ್ಶಿ ವೆಂಕಪ್ಪಯ್ಯ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. 

ಆದರೆ ರಾಮಪ್ಪ ಅವರನ್ನೇ ಕಾರ್ಣಿಕದ ಗೊರವಯ್ಯನನ್ನಾಗಿ ಮುಂದುವರೆಸುವಂತೆ ಧಾರವಾಡ ಹೈಕೋರ್ಟ್ ಆದೇಶ ನೀಡಿತ್ತು. ರಾಮಪ್ಪ ಪರ ಆದೇಶಕ್ಕೆ ವೆಂಕಪ್ಪಯ್ಯ ಒಡೆಯರ್ ಅಸಮಾಧಾನಗೊಂಡಿದ್ದು ಕಂಕಣ ಕಟ್ಟಿ ಜಾತ್ರೆಗೆ ಚಾಲನೆ ನೀಡುವುದನ್ನು ನಿರಾಕರಿಸಿದ್ದಾರೆ. 

"ನನ್ನ ಮತಿಗೆ ಬೆಲೆ ಸಿಗದಿದ್ದರೆ ಕಂಕಣ ಕಟ್ಟುವುದಿಲ್ಲ ಜಾತ್ರೆಗೆ ಚಾಲನೆ ನೀಡುವುದಿಲ್ಲ" ಎಂದು ಪಟ್ಟು ಹಿಡಿದು ಕುಳಿತಿದ್ದಾರೆ. ದೇವಸ್ಥಾನದ ಆಡಳಿತಾಧಿಕಾರಿಗಳು ವೆಂಕಪ್ಪಯ ಒಡೆಯರ್ ಮನವಲಿಕೆಗೆ ಯತ್ನಿಸುತ್ತಿದ್ದಾರೆ. 

ಕಳೆದ ವರ್ಷವೂ ಧರ್ಮದರ್ಶಿಗಳು ಇದೇ ರೀತಿ ಪಟ್ಟು ಹಿಡಿದಿದ್ದರ ಪರಿಣಾಮ ದೇವಸ್ಥಾನದ ಅರ್ಚಕರಿಂದ ಕಂಕಣ ಕಟ್ಟಿಸಿ ಜಾತ್ರೆಗೆ ಚಾಲನೆ ನೀಡಿತ್ತು

ಈ ಬಾರಿ ಕೂಡ ದೇವಸ್ಥಾನದ ಅರ್ಚಕರು ಕಂಕಣ ಕಟ್ಟುವಂತೆ ಜಿಲ್ಲಾಡಳಿತ ಆದೇಶ ನೀಡಿದೆಯಾದರೂ ಅದನ್ನು ದೇವಸ್ಥಾನದ ಅರ್ಚಕರು ವಿರೋಧಿಸಿದ್ದಾರೆ. ಜಿಲ್ಲಾಡಳಿತ ಈಗಿರುವ ಅರ್ಚಕರನ್ನ ಬದಲಿಸಿ ಬೇರೆ ಅರ್ಚಕರನ್ನ ನೇಮಿಸಿ ಜಾತ್ರೆಗೆ ಚಾಲನೆ ನೀಡಲು ಸಿದ್ದತೆ ನಡೆಸಿದೆ. ಫೆಬ್ರವರಿ 11  ರಂದು ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವ ನಡೆಯಲಿದ್ದು, ಇಂದಿನಿಂದಲೇ ದೇವಸ್ಥಾನದಲ್ಲಿ ಧಾರ್ಮಿಕ ಆಚರಣೆಗಳು ಪ್ರಾರಂಭವಾಗಲಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

US ವಲಸೆ ನೀತಿ ಮತ್ತಷ್ಟು ಕಠಿಣ: ಅರ್ಜಿದಾರರಿಗೆ ಟ್ರಂಪ್‌ ಸರ್ಕಾರ ಶಾಕ್‌: ವಿಶ್ವದಾದ್ಯಂತ VISA ಸಂದರ್ಶನಗಳಿಗೆ ಬ್ರೇಕ್‌!

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಡವರ ಬದುಕಿಗೆ ಬೆಲೆ ಏರಿಕೆ ಬರೆ: ‘ಅಚ್ಛೇ ದಿನ್ ಆಯ್ತು ದುಬಾರಿ ದಿನ್: ಅಗತ್ಯ ವಸ್ತುಗಳ ಬೆಲೆ ಏರಿಕೆ ಬೆನ್ನಲ್ಲೇ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!