ಬೆಂಗಳೂರು: ಯುಎಸ್ ಅಧ್ಯಕ್ಷ ಟ್ರಂಪ್ ಸ್ವಾಗತಕ್ಕೆ 15 ಅಡಿ ಉದ್ದದ ಗಾಳಿಪಟ ಸಿದ್ದ 
ರಾಜ್ಯ

ಬೆಂಗಳೂರು: ಯುಎಸ್ ಅಧ್ಯಕ್ಷ ಟ್ರಂಪ್ ಸ್ವಾಗತಕ್ಕೆ 15 ಅಡಿ ಉದ್ದದ ಗಾಳಿಪಟ ಸಿದ್ದ

ಡೊನಾಲ್ಡ್ ಟ್ರಂಪ್ ಭಾರತದ್ ಭೇಟಿಗೆ ಇಡೀ ದೇಶವೇ ಎದುರು ನೊಡುತ್ತಿರುವ ಈ ಸಮಯದಲ್ಲಿ ಅವರನ್ನು ಸ್ವಾಗತಿಸಲು ಸಿಲಿಕಾನ್ ಸಿಟಿ ಗಾಳಿಪಟ ಕಲಾವಿದರೊಬ್ಬರು ಟ್ರಂಪ್ ಸ್ವಾಗತಕ್ಕಾಗಿ  15 ಅಡಿ ಉದ್ದದ ವಿಶೇಷ ಗಾಳಿಪಟವನ್ನು ಹಾರಿಸಿದ್ದಾರೆ.

ಬೆಂಗಳೂರು: ಡೊನಾಲ್ಡ್ ಟ್ರಂಪ್ ಭಾರತದ್ ಭೇಟಿಗೆ ಇಡೀ ದೇಶವೇ ಎದುರು ನೊಡುತ್ತಿರುವ ಈ ಸಮಯದಲ್ಲಿ ಅವರನ್ನು ಸ್ವಾಗತಿಸಲು ಸಿಲಿಕಾನ್ ಸಿಟಿ ಗಾಳಿಪಟ ಕಲಾವಿದರೊಬ್ಬರು ಟ್ರಂಪ್ ಸ್ವಾಗತಕ್ಕಾಗಿ  15 ಅಡಿ ಉದ್ದದ ವಿಶೇಷ ಗಾಳಿಪಟವನ್ನು ಹಾರಿಸಿದ್ದಾರೆ.

ಕರ್ನಾಟಕದ ಅಂತರರಾಷ್ಟ್ರೀಯ ಗಾಳಿಪಟ ಕಲಾವಿದ ವಿ.ಕೆ.ರಾವ್ ಈ ವಿಶೇಷ ಗಾಳಿಪಟ ತಯಾರಿಸಿದ್ದಾರೆ.ಇದರಲ್ಲಿ ಟ್ರಂಪ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರಗಳಿದ್ದು  'ನಮಸ್ತೆ ಟ್ರಂಪ್' ಮತ್ತು 'ಭಾರತಕ್ಕೆ ಸ್ವಾಗತ' ಎಂಬ ಸಂದೇಶವಿದೆ.

"ನಾನು ಯುಎಸ್ ಅಧ್ಯಕ್ಷರನ್ನು ಸ್ವಾಗತಿಸಲು ಈ ವಿಶೇಷ ಗಾಳಿಪಟವನ್ನು ರಚಿಸಿದ್ದೇನೆ.  ಗಾಳಿಪಟವು 15 ಅಡಿ ಉದ್ದವಾಗಿದೆ" ಎಂದು ರಾವ್ಹೇಳಿದ್ದಾರೆ.

ಈ ಹಿಂದೆ ಪಂಜಾಬ್‌ನ ಅಮೃತಸರ ಮೂಲದ ಗಾಳಿಪಟ ತಯಾರಕರು ಟ್ರಂಪ್ ಅವರನ್ನು ಸ್ವಾಗತಿಸಲು ವಿಶೇಷ ಗಾಳಿಪಟಗಳನ್ನು ವಿನ್ಯಾಸಗೊಳಿಸಿದ್ದರು.

"ಡೊನಾಲ್ಡ್ ಟ್ರಂಪ್ ಭಾರತಕ್ಕೆ ಭೇಟಿ ನೀಡಲಿರುವ ಕಾರಣ, ಅವರನ್ನು ಸ್ವಾಗತಿಸಲು ನಾನು ಕೆಲವು ಗಾಳಿಪಟಗಳನ್ನು ಮಾಡಿದ್ದೇನೆ. ಪಿಎಂ ನರೇಂದ್ರ ಮೋದಿ ಮತ್ತು ಡೊನಾಲ್ಡ್ ಟ್ರಂಪ್ ಅವರ ಚಿತ್ರಗಳೊಂದಿಗೆ ಗಾಳಿಪಟ ತಯಾರಾಗಿದೆ" ಪ<ಜಾಬಿನ  ಜಗ್ಮೋಹನ್ ಕನೋಜಿಯಾ ಹೇಳಿದ್ದಾರೆ.

ಫೆಬ್ರವರಿ 24 ಮತ್ತು 25 ರಂದು ಭಾರತಕ್ಕೆ ಭೇಟಿ ನೀಡಲಿರುವ ಟ್ರಂಪ್ ಅವರನ್ನು ಸ್ವಾಗತಿಸಲು ದೇಶಾದ್ಯಂತ ಸಿದ್ಧತೆಗಳು ನಡೆಯುತ್ತಿವೆ.ಭೇಟಿಯ ವೇಳೆ ಟ್ರಂಪ್ ಅವರು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ರೋಡ್ ಶೋನಲ್ಲಿ ಭಾಗವಹಿಸಲಿದ್ದು, ಮೊಟೆರಾ ಕ್ರೀಡಾಂಗಣದಲ್ಲಿ ನಡೆಯಲಿರುವ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.

ಸೋಮವಾರ ಸಂಜೆ ಅಮೆರಿಕಾ ಅಧ್ಯಕ್ಷ ಮತ್ತು ಅವರ ಕುಟುಂಬ ಆಗ್ರಾದ ತಾಜ್‌ಮಹಲ್‌ಗೆ ಭೇಟಿ ನೀಡಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ, Indian Army ಹೆಲಿಕಾಪ್ಟರ್ ರಣರೋಚಕ ಕಾರ್ಯಾಚರಣೆ! video

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

'ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಿ': ಹರಿಯಾಣ BJP ಶಾಸಕ

SCROLL FOR NEXT