ರಾಜ್ಯ

ಕಲ್ಪತರು ನಾಡಲ್ಲಿ ಮೋದಿ ಮೇನಿಯಾ: ಕಾರ್ಯಕ್ರಮಕ್ಕೆ ಹರಿದುಬಂದಿದ್ದ ಜನಸಾಗರ

Manjula VN

ತುಮಕೂರು: 2 ದಿನಗಳ ಕರ್ನಾಟಕ ಪ್ರವಾಸದಲ್ಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ಮೊದಲನೇ ದನ ಕಲ್ಪತರು ನಾಡು ತುಮಕೂರಿನಲ್ಲಿ ಸುತ್ತಾಟ ನಡೆಸಿದ್ದು, ರೈತರ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ರೈತರು ಸೇರಿದಂತೆ ಲಕ್ಷಾಂತರ ಮಂದಿ ಪಾಲ್ಗೊಂಡಿದ್ದರು. 

ಕಾರ್ಯಕ್ರಮ ಅದ್ಭುತವಾಗಿತ್ತು. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಪ್ರಧಾನಮಂತ್ರಿಗಳ ಭಾಷಣ, ರೈತರಿಗಾಗಿ ಘೋಷಣೆ ಮಾಡಿದ ಯೋಜನೆಗಳು ಬಹಳ ಸಂತಸ ತಂದಿದೆ ಎಂದು ಕುಣಿಗಲ್ ತಾಲೂಕು ನಿವಾಸಿ ಚಿಕ್ಕರಂಗಯ್ಯ ಅವರು ಹೇಳಿದ್ದಾರೆ. 

ಕಾರ್ಯಕ್ರಮದ ವೇಳೆ ಮದ್ಯಪಾನಕ್ಕೆ ನಿಷೇಧ ಹೇರಿದ್ದು ಒಳ್ಳೆಯ ಬೆಳವಣಿಗೆ ಎಂದು ಹಾರೋಗೆರೆ ನಿವಾಸಿ ಶಂಕರ್ ಅವರು ತಿಳಿಸಿದ್ದಾರೆ. 

SCROLL FOR NEXT