ಸಂಗ್ರಹ ಚಿತ್ರ 
ರಾಜ್ಯ

100 ರೂ ಕೇಳಿದ್ರೆ 500 ಕೊಡುತ್ತೆ ಈ ಎಟಿಎಂ, ಬರೊಬ್ಬರಿ 1.50 ಲಕ್ಷ ರೂ ಹೆಚ್ಚುವರಿ ಹಣ ಪಡೆದ ಗ್ರಾಹಕರು!

ಕೊಡಗಿನ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಅಚ್ಚರಿಯೊಂದು ನಡೆದಿದೆ  ಎಟಿಎಂವೊಂದರಲ್ಲಿ 100 ರೂಪಾಯಿಗೆ 500 ಮುಖಬೆಲೆಯ ನೋಟು ಗಳು ಬಂದಿದ್ದು, ಹಣ ಪಡೆಯಲು ಜನರು ಮುಗಿಬಿದ್ದ ಘಟನೆ ಬೆಳಕಿಗೆ ಬಂದಿದೆ.

ಮಡಿಕೇರಿ: ಕೊಡಗಿನ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಅಚ್ಚರಿಯೊಂದು ನಡೆದಿದೆ  ಎಟಿಎಂವೊಂದರಲ್ಲಿ 100 ರೂಪಾಯಿಗೆ 500 ಮುಖಬೆಲೆಯ ನೋಟು ಗಳು ಬಂದಿದ್ದು, ಹಣ ಪಡೆಯಲು ಜನರು ಮುಗಿಬಿದ್ದ ಘಟನೆ ಬೆಳಕಿಗೆ ಬಂದಿದೆ.
 
ಹೌದು, ನಗರದ ಎಟಿಎಂ 100 ರೂ.ಗೆ ಬದಲಾಗಿ 500 ರೂ ನೋಟುಗಳನ್ನು ವಿತರಿಸಲು ಪ್ರಾರಂಭಿಸಿದಾಗ ಮಡಿಕೇರಿಯ ಜನರು ನಿಜಕ್ಕೂ ಆಶ್ಚರ್ಯಚಕಿತರಾಗಿದ್ದರು. ಎಟಿಎಂ ಯಂತ್ರದಲ್ಲಿನ ದೋಷದ ಸುದ್ದಿ ಹರಡಿದ ತಕ್ಷಣ, ಜನರು ದೀರ್ಘ ಸರತಿ ಸಾಲಿನಲ್ಲಿ ನಿಂತು ಹಣ ಎಣಿಸಿಕೊಳ್ಳಲು ಮುಂದಾದರು.  ಕೆನರಾ ಬ್ಯಾಂಕ್ ಸಿಬ್ಬಂದಿಗೆ ವಿಷಯ ತಿಳಿದು ಎಟಿಎಂನಿಂದ ಎಲ್ಲಾ ಹಣವನ್ನು ಹಿಂತೆಗೆದುಕೊಂಡಿದ್ದಾರೆ.
 
 ಬ್ಯಾಂಕ್ ಅಧಿಕಾರಿಗಳು ಕ್ರಮ ಕೈಗೊಳ್ಳುವ ಹೊತ್ತಿಗೆ ಅನೇಕ ಜನರು ಒಟ್ಟು 1.50 ಲಕ್ಷ ರೂಗಳನ್ನು ಎಟಿಎಂನಿಂದ ಪಡೆದುಕೊಂಡಿದ್ದಾರೆ.  ಯಂತ್ರದಲ್ಲಿ ಹಣವನ್ನು ಹಾಕುವ ಖಾಸಗಿ ಏಜೆನ್ಸಿಯ ಉದ್ಯೋಗಿ 500 ರೂಗಳನ್ನು 100 ರೂಗಳಲ್ಲಿ ತಪ್ಪಾಗಿ ಸೇರಿಸಿದ್ದರಿಂದ ಈ ಎಡವಟ್ಟಾಗಿದೆ.  ಕೆನರಾ ಬ್ಯಾಂಕ್ ಈಗ ತಮ್ಮ ಡೆಬಿಟ್ ಕಾರ್ಡ್‌ಗಳ ಮೂಲಕ ಹಣವನ್ನು ಹಿಂತೆಗೆದುಕೊಂಡ ಜನರ ವಿಳಾಸಗಳನ್ನು ಕಂಡುಹಿಡಿದು ಹಣವನ್ನು ಹಿಂದಿರುಗಿಸುವಂತೆ ವಿನಂತಿಸಿತು.

ಈ ಘಟನೆ ಕೆಲವು ದಿನಗಳ ಹಿಂದೆ ಮಡಿಕೇರಿಯ ಕೊಹಿನೂರ್ ರಸ್ತೆಯಲ್ಲಿನ ಎಟಿಎಂ ನಲ್ಲಿ ಸಂಭವಿಸಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಜನರು ಹಣವನ್ನು ಹಿಂದಿರುಗಿಸಲು ನಿರಾಕರಿಸಿದ್ದರಿಂದ ಬ್ಯಾಂಕ್ ಅಧಿಕಾರಿಗಳು ಜನವರಿ 7 ರಂದು ನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು.  ಪೊಲೀಸರು ತಾಕೀತು ಮಾಡಿದ ನಂತರ ಜನರು ದೋಷಯುಕ್ತ ಎಟಿಎಂ ನಿಂದ ಪಡೆದಿದ್ದ ಹಣವನ್ನು ಬ್ಯಾಂಕಿಗೆ ಹಿಂದಿರುಗಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT