ಸಂಗ್ರಹ ಚಿತ್ರ 
ರಾಜ್ಯ

100 ರೂ ಕೇಳಿದ್ರೆ 500 ಕೊಡುತ್ತೆ ಈ ಎಟಿಎಂ, ಬರೊಬ್ಬರಿ 1.50 ಲಕ್ಷ ರೂ ಹೆಚ್ಚುವರಿ ಹಣ ಪಡೆದ ಗ್ರಾಹಕರು!

ಕೊಡಗಿನ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಅಚ್ಚರಿಯೊಂದು ನಡೆದಿದೆ  ಎಟಿಎಂವೊಂದರಲ್ಲಿ 100 ರೂಪಾಯಿಗೆ 500 ಮುಖಬೆಲೆಯ ನೋಟು ಗಳು ಬಂದಿದ್ದು, ಹಣ ಪಡೆಯಲು ಜನರು ಮುಗಿಬಿದ್ದ ಘಟನೆ ಬೆಳಕಿಗೆ ಬಂದಿದೆ.

ಮಡಿಕೇರಿ: ಕೊಡಗಿನ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಅಚ್ಚರಿಯೊಂದು ನಡೆದಿದೆ  ಎಟಿಎಂವೊಂದರಲ್ಲಿ 100 ರೂಪಾಯಿಗೆ 500 ಮುಖಬೆಲೆಯ ನೋಟು ಗಳು ಬಂದಿದ್ದು, ಹಣ ಪಡೆಯಲು ಜನರು ಮುಗಿಬಿದ್ದ ಘಟನೆ ಬೆಳಕಿಗೆ ಬಂದಿದೆ.
 
ಹೌದು, ನಗರದ ಎಟಿಎಂ 100 ರೂ.ಗೆ ಬದಲಾಗಿ 500 ರೂ ನೋಟುಗಳನ್ನು ವಿತರಿಸಲು ಪ್ರಾರಂಭಿಸಿದಾಗ ಮಡಿಕೇರಿಯ ಜನರು ನಿಜಕ್ಕೂ ಆಶ್ಚರ್ಯಚಕಿತರಾಗಿದ್ದರು. ಎಟಿಎಂ ಯಂತ್ರದಲ್ಲಿನ ದೋಷದ ಸುದ್ದಿ ಹರಡಿದ ತಕ್ಷಣ, ಜನರು ದೀರ್ಘ ಸರತಿ ಸಾಲಿನಲ್ಲಿ ನಿಂತು ಹಣ ಎಣಿಸಿಕೊಳ್ಳಲು ಮುಂದಾದರು.  ಕೆನರಾ ಬ್ಯಾಂಕ್ ಸಿಬ್ಬಂದಿಗೆ ವಿಷಯ ತಿಳಿದು ಎಟಿಎಂನಿಂದ ಎಲ್ಲಾ ಹಣವನ್ನು ಹಿಂತೆಗೆದುಕೊಂಡಿದ್ದಾರೆ.
 
 ಬ್ಯಾಂಕ್ ಅಧಿಕಾರಿಗಳು ಕ್ರಮ ಕೈಗೊಳ್ಳುವ ಹೊತ್ತಿಗೆ ಅನೇಕ ಜನರು ಒಟ್ಟು 1.50 ಲಕ್ಷ ರೂಗಳನ್ನು ಎಟಿಎಂನಿಂದ ಪಡೆದುಕೊಂಡಿದ್ದಾರೆ.  ಯಂತ್ರದಲ್ಲಿ ಹಣವನ್ನು ಹಾಕುವ ಖಾಸಗಿ ಏಜೆನ್ಸಿಯ ಉದ್ಯೋಗಿ 500 ರೂಗಳನ್ನು 100 ರೂಗಳಲ್ಲಿ ತಪ್ಪಾಗಿ ಸೇರಿಸಿದ್ದರಿಂದ ಈ ಎಡವಟ್ಟಾಗಿದೆ.  ಕೆನರಾ ಬ್ಯಾಂಕ್ ಈಗ ತಮ್ಮ ಡೆಬಿಟ್ ಕಾರ್ಡ್‌ಗಳ ಮೂಲಕ ಹಣವನ್ನು ಹಿಂತೆಗೆದುಕೊಂಡ ಜನರ ವಿಳಾಸಗಳನ್ನು ಕಂಡುಹಿಡಿದು ಹಣವನ್ನು ಹಿಂದಿರುಗಿಸುವಂತೆ ವಿನಂತಿಸಿತು.

ಈ ಘಟನೆ ಕೆಲವು ದಿನಗಳ ಹಿಂದೆ ಮಡಿಕೇರಿಯ ಕೊಹಿನೂರ್ ರಸ್ತೆಯಲ್ಲಿನ ಎಟಿಎಂ ನಲ್ಲಿ ಸಂಭವಿಸಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಜನರು ಹಣವನ್ನು ಹಿಂದಿರುಗಿಸಲು ನಿರಾಕರಿಸಿದ್ದರಿಂದ ಬ್ಯಾಂಕ್ ಅಧಿಕಾರಿಗಳು ಜನವರಿ 7 ರಂದು ನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು.  ಪೊಲೀಸರು ತಾಕೀತು ಮಾಡಿದ ನಂತರ ಜನರು ದೋಷಯುಕ್ತ ಎಟಿಎಂ ನಿಂದ ಪಡೆದಿದ್ದ ಹಣವನ್ನು ಬ್ಯಾಂಕಿಗೆ ಹಿಂದಿರುಗಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

ವಿದೇಶದಲ್ಲೂ ನಂದಿನಿ ತುಪ್ಪಕ್ಕೆ ಹೆಚ್ಚಿದ ಬೇಡಿಕೆ; ಅಮೆರಿಕಾ ಸೇರಿದಂತೆ ಮೂರು ರಾಷ್ಟ್ರಗಳಿಗೆ ರಫ್ತು..!

CLP ಸಭೆಯಲ್ಲಿ ಸರ್ವಾನುಮತದಿಂದ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಲಾಗಿತ್ತು, 50:50 ಒಪ್ಪಂದವಾಗಿಲ್ಲ: ಕೆ.ಜೆ. ಜಾರ್ಜ್ ಸ್ಪಷ್ಟನೆ

SCROLL FOR NEXT