ರಾಜ್ಯ

ಬೆಂಗಳೂರು: ಸ್ಕೂಟರ್‌ಗೆ ಲಾರಿ ಡಿಕ್ಕಿ; ತಾಯಿ ಸಾವು, ಮಗ ಗಂಭೀರ

Nagaraja AB

ಬೆಂಗಳೂರು: ಸ್ಕೂಟರ್‌ವೊಂದಕ್ಕೆ ಅಡುಗೆ ಅನಿಲ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್‌ನಲ್ಲಿದ್ದ ತಾಯಿ ಮೃತಪಟ್ಟರೆ, ಮಗ ಸಣ್ಣ-ಪುಟ್ಟ ಗಾಯಗಳೊಂದಿಗೆ ಪಾರಾಗಿರುವ ದುರ್ಘಟನೆ  ಯಶವಂತಪುರ ಎಂಇಎಸ್ ರಿಂಗ್ ರಸ್ತೆಯಲ್ಲಿ ಶುಕ್ರವಾರ ರಾತ್ರಿ ನಡೆದಿದೆ.

ನೆಲಗದರನಹಳ್ಳಿಯ  ಮುತ್ಯಾಲಮ್ಮ (45)ಮೃತಪಟ್ಟವರು. ಅವರ ಪುತ್ರ ಮುರಳಿ  ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾನೆ

ಮುತ್ಯಾಲಮ್ಮ ಅವರು ಜಾಲಹಳ್ಳಿಯ ಸಂಬಂಧಿಕರ ಮನೆಗೆ ರಾತ್ರಿ ಪುತ್ರ ಮುರಳಿಯ ಸ್ಕೂಟರ್‌ನಲ್ಲಿ ಹಿಂದೆ ಕುಳಿತುಕೊಂಡು ನೆಲಗದರನಹಳ್ಳಿಯಿಂದ  ಹೋಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. 


ಕೆಳಗೆ ಬಿದ್ದು ತಲೆಗೆ ಗಂಭೀರವಾಗಿ  ಗಾಯಗೊಂಡಿದ್ದ ಮುತ್ಯಾಲಮ್ಮ ಅವರನ್ನು ಕೂಡಲೇ ಎಂಎಸ್ ರಾಮಯ್ಯ ಆಸ್ಪತ್ರೆಗೆ  ಕರೆದೊಯ್ಯಲಾಯಿತಾದರೂ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಯಶವಂತಪುರ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

SCROLL FOR NEXT