ರಾಜ್ಯ

ಸಿಸಿಬಿಯಿಂದ ಶಂಕಿತ ಪ್ರತ್ಯೇಕ ಖಲಿಸ್ತಾನ ಬೆಂಬಲಿಗನ ಬಂಧನ

Shilpa D

ಬೆಂಗಳೂರು:  ಪಂಜಾಬ್ ನಿಂದ ಪಲಾಯನಗೈದು ನಗರದಲ್ಲಿ ತಲೆತಪ್ಪಿಸಿಕೊಂಡಿದ್ದ ಶಂಕಿತ ಪ್ರತ್ಯೇಕ ಖಲಿಸ್ತಾನ ಬೆಂಬಲಿಗನನ್ನು ಕೇಂದ್ರೀಯ ಅಪರಾಧ ವಿಭಾಗದ ಪೊಲೀಸರು (ಸಿಸಿಬಿ) ಬಂಧಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಫೆಬ್ರವರಿ 2019ರಲ್ಲಿ ಆಂತರಿಕ ಭದ್ರತಾ ವಿಭಾಗ ಬಂಧಿತ ಜರ್ನೆಲ್ ಸಿಂಗ್ ಸಿಧು ವಿರುದ್ಧ ಪ್ರಕರಣ ದಾಖಲಿಸಿದ ನಂತರ ಪಂಜಾಬ್ ಪೊಲೀಸರಿಗೆ ಈತ ಬೇಕಾಗಿದ್ದ. ಅಂದಿನಿಂದ ಈತನಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದರು. 

ಬಾಗ್ಮನೆ ಟೆಕ್ ಪಾರ್ಕ್ ನಲ್ಲಿ ಕೆಲಸ ಮಾಡುತ್ತಿದ್ದ ಬಂಧಿತ ಕಳೆದ ನಾಲ್ಕು ದಿನಗಳಿಂದ ಪಿ.ಜಿ.ಯೊಂದರಲ್ಲಿ ನೆಲೆಸಿದ್ದ.  ಈತನ ಸುಳಿವಿಗಾಗಿ ಪಂಜಾಬ್ ಪೊಲೀಸರು ತಮ್ಮನ್ನು ಭೇಟಿಯಾಗಿದ್ದರು. ಅದರಂತೆ ಆತನನ್ನು ಬಂಧಿಸಿ ಪಂಜಾಬ್ ಪೊಲೀಸರಿಗೆ ಒಪ್ಪಿಸಲಾಗಿದೆ.’ ಎಂದು ಪೊಲೀಸರು ತಿಳಿಸಿದ್ದಾರೆ.

SCROLL FOR NEXT