ತೀರ್ಥಯಾತ್ರೆಗೆ ಬಂದಿದ್ದ ಬಾಲಕ ಕಾಲುಜಾರಿ ಸರೋವರದ ಪಾಲು 
ರಾಜ್ಯ

ತೀರ್ಥಯಾತ್ರೆಗೆ ಬಂದಿದ್ದ ಬಾಲಕ ಕಾಲುಜಾರಿ ಸರೋವರದ ಪಾಲು

ಗಂಗಾವತಿ:ಅಜ್ಜ ಹಾಗೂ ಅಜ್ಜಿಯ ಜೊತೆಗೆ ತೀರ್ಥಯಾತ್ರೆಗೆ ಬಂದಿದ್ದ ಬಾಲಕನೊಬ್ಬ ಕಾಲುಜಾರಿ ಸರೋವರದಲ್ಲಿ ಬಿದ್ದು ಸಾವನ್ನಪ್ಪಿದ ಘಟನೆ ತಾಲ್ಲೂಕಿನ ಆನೆಗೊಂದಿ ಸಮೀಪದ ಪಂಪಾಸರೋವರದಲ್ಲಿ ಶನಿವಾರ ಸಂಜೆ ಸಂಭವಿಸಿದೆ. 

ಮೃತ ಬಾಲಕನನ್ನು ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯ ಅಂಕಿತ್ ದಖಡ್ ತಂದೆ ಪರ್ವತಸಿಂಗ್ (10) ಎಂದು ಗುರುತಿಸಲಾಗಿದೆ. 

ತೀರ್ಥಯಾತ್ರೆಯ ಉದ್ದೇಶಕ್ಕೆ ತಾತ ಜಾನಕಿ ಲಾಲ್ ಹಾಗೂ ಅಜಿ ಕಾಂಚನಾ ಜೊತೆ ಈ ಬಾಲಕ ಬಂದಿದ್ದ. ಸರೋವರದ ಮೆಟ್ಟಿಲ ಮೇಲಿಳಿದು ನೀರು ತಲೆಯ ಮೇಲೆ ಪ್ರೋಕ್ಷಣೆ ಮಾಡಿಕೊಳ್ಳುವ ಸಂದರ್ಭದಲ್ಲಿ ಕಾಲು ಜಾರಿಗೆ ಎನ್ನಲಾಗಿದೆ. ಮುಳುಗು ತಜ್ಞರು ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ಹುಡಿಕಿದ ಬಳಿಕ ಬಾಲಕ ಶವ ಪತ್ತೆಯಾಗಿದೆ. ಶವ ಸಿಕ್ಕುತ್ತಿದ್ದಂತೆಯೇ ಅಜ್ಜ-ಅಜ್ಜಿಯರ ರೋಧನ ಮುಗಿಲು ಮುಟ್ಟಿತ್ತು. ಸ್ಥಳಕ್ಕೆ ತಹಶೀಲ್ದಾರ್ ಚಂದ್ರಕಾಂತ್ ಭೇಟಿ ನೀಡಿದ್ದಾರೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT