ರಾಜ್ಯ

ಚಾಲಕನ ನಿಯಂತ್ರಣ ತಪ್ಪಿ ಕಾಲುವೆಗೆ ಉರುಳಿದ ಕಾರು: ಓರ್ವ ವ್ಯಕ್ತಿಯ ಮೃತದೇಹ ಪತ್ತೆ

Srinivas Rao BV

ಹೊಸಪೇಟೆ: ಚಾಲಕನ ನಿಯಂತ್ರಣ ತಪ್ಪಿದ ಕಾರು ತುಂಗಭದ್ರ ಹೆಚ್.ಎಲ್.ಸಿ.ಕಾಲುವೆಗೆ ಉರುಳಿದ ಪ್ರಕರಣ ಬಳ್ಳಾರಿಯ ಹೊಸಪೇಟೆಯ ಕಮಲಾಪುರದ ಬಳಿ ವರದಿಯಾಗಿದೆ. 

ಕಾರಿನಲ್ಲಿದ್ದ ಎನ್ಎಸ್ ಕಬಾಡೆ ಸಾವನ್ನಪ್ಪಿದ್ದು, ಮೃತ ದೇಹ ಪತ್ತೆಯಾಗಿದೆ. ಕಳೆದ ಮೂರು ದಿನಗಳ ಹಿಂದೆ ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲೂಕಿನ ಮಲ್ಪನಗುಡಿ ತಾಂಡ ಬಳಿಯ ಕಾಲುವೆಗೆ ಕಾರು ಉರುಳಿತ್ತು.

ಕಾಲುವೆಯಲ್ಲಿದ್ದ ಕಾರನ್ನ ಸ್ಥಳೀಯರ ನೆರವಿನೊಂದಿಗೆ ಮೇಲಕ್ಕೆತ್ತಿದ್ದ ಅಗ್ನಿ ಶಾಮಕ ಹಾಗೂ ಪೊಲೀಸ್ ಸಿಬ್ಬಂದಿಗಳು, ಕಾರಿನಲ್ಲಿದ್ದ ಚಾಲಕಕ, ಮಾಲಿಕ ಪತ್ತೆಯಾಗಿರಲಿಲ್ಲ, ಹೊಸಪೇಟೆ ಗ್ರಾಮೀಣ ಪೊಲೀಸ್ ಠಾಣೆಯ ವ್ಯಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

SCROLL FOR NEXT