ಮಾಜಿ ಸಿಎಂ ಕುಮಾರಸ್ವಾಮಿ, ನಿಜಗುಣಾನಂದ ಶ್ರೀ 
ರಾಜ್ಯ

ನಿಮ್ಮನ್ನೆಲ್ಲಾ ಸಂಹಾರ ಮಾಡಿಯೇ ಮಾಡ್ತೇವೆ! ಮಾಜಿ ಸಿಎಂ ಕುಮಾರಸ್ವಾಮಿ, ನಿಜಗುಣಾನಂದ ಶ್ರೀ ಸೇರಿ 15 ಮಂದಿಗೆ ಜೀವ ಬೆದರಿಕೆ

ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ಬೆಳಗಾವಿ ಬೈಲೂರು ಮಠದ ನಿಜಗುಣಾನಂದ ಶ್ರೀ,ಗಳು ಸೇರಿದಂತೆ ಹದಿನೈದು ಮಂದಿಗೆ ಅಪರಿಚಿತರಿನಿಂದ ಜೀವ ಬೆದರಿಕೆ ಪತ್ರ ಬಂದಿದೆ ಎಂದು ವರದಿಯಾಗಿದೆ. 

ಬೆಂಗಳೂರು: ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ಬೆಳಗಾವಿ ಬೈಲೂರು ಮಠದ ನಿಜಗುಣಾನಂದ ಶ್ರೀ,ಗಳು ಸೇರಿದಂತೆ ಹದಿನೈದು ಮಂದಿಗೆ ಅಪರಿಚಿತರಿನಿಂದ ಜೀವ ಬೆದರಿಕೆ ಪತ್ರ ಬಂದಿದೆ ಎಂದು ವರದಿಯಾಗಿದೆ.

ಕುಮಾರಸ್ವಾಮಿ, ನಿಜಗುಣಾನಂದ ಶ್ರೀ, ನಿಡುಮಾಮಿಡಿ ವೀರಭದ್ರ ಚೆನ್ನಮಲ್ಲ ಸ್ವಾಮೀಜಿ, ದಿನೇಶ್ ಅಮೀನ್ ಮಟ್ಟು, ಪ್ರಕಾಶ್ ರೈ, ಬಿಟಿ ಲಲಿತಾ ನಾಯಕ್, ಬೃಂದಾ ಜಾರಟ್, ಮತ್ತೂ ಅನೇಕರಿಗೆ ಇದೇ ಜನವರಿ ೨೯ರಂದು "ಸಂಹಾರ" ಮಾಡುವೆನೆಂದು ದಾವಣಗೆರೆಯಿಂದ ಅಪರಿಚಿತನೊಬ್ಬ ಪತ್ರ ರವಾನಿಸಿದ್ದಾನೆ.

ನಿಜಗುಣಾನಂದ ಶ್ರೀಗಳಿಗೆ ಬಂದ ಪತ್ರದಲ್ಲಿ "ಶ್ರೀಗಳೇ ನಿಮ್ಮನ್ನೂ, ನಿಮ್ಮೊಡನಿರುವ ಧರ್ಮದ್ರೋಹಿಗಳನ್ನು ದೇಶದ್ರೋಹಿಗಳನ್ನು ಇದೇ ಜನವರಿ ೨೯ರಂದು ಸಂಹಾರ ಮಾಡಲು ಮಹೂರ್ತ ನಿಗದಿಯಾಗಿದೆ. ನಿಮ್ಮ ಅಂತಿಮ ಯಾತ್ರೆಗೆ ಸಿದ್ದವಾಗಿರಿ, ನೀವು ಮಾತ್ರವಲ್ಲ ಸ್ವಾಮಿಗಳೇ ನಿಮ್ಮೊಡನೆ ಅಂತಿಮ ಯಾತ್ರೆಗೆ ಇವರನ್ನೂ ಸಿದ್ದಗೊಳಿಸಿ, ಇವರೆಲ್ಲರಿಗೆ ನೀವೇ ಹೇಳಿರಿ" ಎಂದು ಹದಿನೈದು ಮಂದಿಯ ಹೆಸರನ್ನು ಸೂಚಿಸಲಾಗಿದೆ.

ಇದಲ್ಲದೆ ಕಡೆಯಲ್ಲಿ ಇವರನ್ನೆಲ್ಲಾ ಸಂಹಾರ ಮಾಡಿಯೇ ಮಾಡುವೆವು ಎಂದೂ ಸೂಚಿಸಿದೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

US tariff: ಚೀನಾ ಮೇಲೆ ಅಮೆರಿಕ ಶೇ.100 ರಷ್ಟು ಸುಂಕ; ಭಾರತಕ್ಕೆ ಎಚ್ಚರಿಕೆಯ ಗಂಟೆ!

ಮಂಗಳೂರು: Muslim ಕ್ಯಾಬ್ ಚಾಲಕನಿಗೆ 'ಭಯೋತ್ಪಾದಕ' ಎಂದು ಕರೆದಿದ್ದ ಕೇರಳ ನಟನ ಬಂಧನ!

2nd Test, Day 2: ವಿಂಡೀಸ್ ವಿರುದ್ಧ ಶತಕ, ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಿದ ಶುಭ್ ಮನ್ ಗಿಲ್!

ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ?

ಅಯೋಧ್ಯೆಯಲ್ಲಿ ಮತ್ತೊಂದು 'ನಿಗೂಢ' ಸ್ಫೋಟ: ಸಾವಿನ ಸಂಖ್ಯೆ 6ಕ್ಕೆ ಏರಿಕೆ, Video Viral

SCROLL FOR NEXT