ರಾಜ್ಯ

ಮೋದಿ, ಸಿಎಎ ವಿರೋಧಿಸುವ ಭರದಲ್ಲಿ ದೇಶವಿರೋಧಿ ಹಾಡು, ಇಬ್ಬರ ವಿರುದ್ಧ ಪ್ರಕರಣ ದಾಖಲು! 

Srinivas Rao BV

ಗಂಗಾವತಿ: ಪ್ರಧಾನಿ ನರೇಂದ್ರ ಮೋದಿ, ಸಿಎಎ ವಿರೋಧಿಸುವ ಭರದಲ್ಲಿ ದೇಶವಿರೋಧಿ ಹಾಡು ರಚಿಸಿ ವೈರಲ್ ಮಾಡಿದ್ದ ಇಬ್ಬರ ವಿರುದ್ಧ ಗಂಗಾವತಿ ಗ್ರಾಮೀಣ ಭಾಗದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಿಲ್ಲಾಡಳಿತದ ಸಹಯೋಗದಲ್ಲಿ ಜ.9-10 ರಂದು ಆಯೋಜಿಸಿದ್ದ ಆನೆಗೊಂದಿ ಉತ್ಸವದಲ್ಲಿ ಸಿರಾಜ್ ಬಿಸರಳ್ಳಿ ಎಂಬಾತ ಸಿಎಎ ವಿರುದ್ಧ ಹಾಡು ಬರೆದಿದ್ದ. ಇದೇ ಹಾಡನ್ನು ಸಾಮಾಜಿಕ ಜಾಲತಾಣದಲ್ಲಿ ಕನ್ನಡ ನೆಟ್.ಕಾಂ ನ ರಾಜಬಕ್ಸಿ ಎಂಬುವವರು ಹಂಚಿಕೊಂಡಿದ್ದರು. 

ಸಿಎಎ ಗೆ ಪ್ರಧಾನಿ ಯಾವಾಗ ದಾಖಲೆಗಳನ್ನು ಒದಗಿಸುತ್ತಾರೆ ಎಂಬ ಊಹಾತ್ಮಕ ಪ್ರಶ್ನೆ ಹಾಡಿನಲ್ಲಿತ್ತು. ಸರ್ಕಾರಿ ವೇದಿಕೆಯನ್ನು ದುರ್ಬಳಕೆ ಮಾಡಿಕೊಂಡು ದೇಶವಿರೋಧಿ ಹಾಡು ರಚಿಸಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ಎಸ್ ಪಿ ಗೆ ದೂರು ನೀಡಿತ್ತು. ಈ ಹಿನ್ನೆಲೆಯಲ್ಲಿ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ. 
 

SCROLL FOR NEXT