ಬೆಂಗಳೂರು: ನಾಡು-ನುಡಿಗಳಿಗಾಗಿ ಹೋರಾಡಿದ ಅಗ್ರಗಣ್ಯ ಸಾಹಿತಿ, ಪತ್ರಕರ್ತ ಅನಕೃ ಪುಣ್ಯಸ್ಮರಣೆಯಂದು ಅವರಿಗೆ ನಮನಗಳನ್ನು ಸಲ್ಲಿಸೋಣ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಮುಖ್ಯಮಂತ್ರಿ, ಕನ್ನಡ ಸಾಹಿತ್ಯಲೋಕದ ಕಾದಂಬರಿ ಸಾರ್ವಭೌಮ, ಕಥೆಗಾರ, ನಾಟಕಕಾರ ಮತ್ತು ಸಂಪಾದಕರಾಗಿಯೂ ಪ್ರಸಿದ್ಧರಾಗಿದ್ದ ಅರಕಲಗೂಡು ನರಸಿಂಹರಾಯ ಕೃಷ್ಣರಾಯ (ಅ.ನ.ಕೃ) ಅವರ ಪುಣ್ಯಸ್ಮರಣೆಯ ಸಂದರ್ಭದಲ್ಲಿ ನಾಡು, ನುಡಿಗಳಿಗಾಗಿ ಅಹರ್ನಿಶಿ ದುಡಿದ ಅನಕೃ ಅವರಿಂದ ಸ್ಪೂರ್ತಿ ಪಡೆಯೋಣ ಎಂದು ಹೇಳಿದ್ದಾರೆ.