ರಾಜ್ಯ

ಒಂಟೆ ಸಾಕುವ ವ್ಯಕ್ತಿಯ ಪುತ್ರನಿಗೆ ಕೊರೋನಾ: ಮೈಸೂರು ಅರಮನೆ ಸಂಪೂರ್ಣ ಸ್ಯಾನಿಟೈಸ್

Manjula VN

ಮೈಸೂರು: ಮೈಸೂರು ಅರಮನೆಯಲ್ಲಿ ಒಂಟೆ ಸಾಕುವ ವ್ಯಕ್ತಿ ಪುತ್ರನಿಗೆ ಕೊರೋನಾ ವೈರಸ್ ದೃಢಪಟ್ಟ ಹಿನ್ನೆಲೆಯಲ್ಲಿ ಶುಕ್ರವಾರ ಸಂಪೂರ್ಣ ಅರಮನೆಯನ್ನು ಸ್ಯಾನಿಟೈಸ್ ಮಾಡಲಾಯಿತು. 

ಅರಮನೆ ಬ್ರಹ್ಮಪುರಿ ದ್ವಾರದ ಬಳಿಯ ಕ್ವಾಟ್ರಸ್ ನಲ್ಲಿ ನೆಲೆಸಿ ಒಂಟೆ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ವ್ಯಕ್ತಿ ಪುತ್ರನಿಗೆ ಗುರುವಾರವಷಅಟೇ ಕೊರೋನಾ ಸೋಂಕು ಇರುವುದು ದೃಢಪಟ್ಟಿತ್ತು. 

ಈ ಹಿನ್ನೆಲೆಯಲ್ಲಿ ಶುಕ್ರವಾರ ಅರಮನೆಯ ಒಳಾಂಗಣದ ಸುತ್ತಮುತ್ತ, ಅರಮನೆ ಆಡಳಿತ ಕಚೇರಿ ಸೇರಿದಂತೆ ಹಲವೆಡೆ ಸೋಂಕು ನಿವಾರಕ ಔಷಧಿ ಸಿಂಪಡಿಸಿ ಸ್ಯಾನಿಟೈಸ್ ಮಾಡಲಾಯಿತು. 

ಶುಕ್ರವಾರ, ಶನಿವಾರ ಮತ್ತು ಭಾನುವಾರ ಸೇರಿದಂತೆ ಮೂರು ದಿನ ಅರಮನೆಗೆ ಪ್ರವಾಸಿಗರು ಹಾಗೂ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದ್ದು, ಸೋಮವಾರದಿಂದ ಮರಳಿ ಅವಕಾಶ ಕಲ್ಪಿಸಲಾಗುತ್ತಿದೆ. ಇನ್ನು ಸೋಂಕಿತ ವ್ಯಕ್ತಿಯ ಸಂಪರ್ಕದಲ್ಲಿದ್ದ ಜನರನ್ನು ಕ್ವಾರಂಟೈನ್ ಮಾಡಿ ಕೊರೋನಾ ಪರೀಕ್ಷೆಗೊಳಪಡಿಸಲಾಗುತ್ತಿದೆ. 

SCROLL FOR NEXT