ಮಂಡ್ಯ: ಬೈಕ್ಗಳ ನಡುವೆ ಡಿಕ್ಕಿ ಸಂಭವಿಸಿ ಪೊಲೀಸ್ ಪೇದೆ ಸಾವಿಗೀಡಾಗಿ,ಎಎಸೈ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮದ್ದೂರು ತಾಲೂಕಿನ ತೊರೆಶೆಟ್ಟಹಳ್ಳಿ ಗ್ರಾಮದ ಬಳಿ ನಡೆದಿದೆ.
ಅರುಣ್(೩೦ ವರ್ಷ) ಮೃತ ಡಿಎಆರ್ ಪೇದೆಯಾಗಿದ್ದು ಎಎಸೈ ಬಾಳಯ್ಯ ತೀವ್ರವಾಗಿ ಗಾಯಗೊಂಡಿದ್ದಾರೆ. ತೊಪ್ಪನಹಳ್ಳಿಯ ವ್ಯಕ್ತಿಯೊಬ್ಬರ ಅಂಗರಕ್ಷಕರಾಗಿ ಕೆಲಸ ಮಾಡುತ್ತಿದ್ದ ಡಿಎಆರ್ ಪೇದೆ ಅರುಣ್ ಅವರು ಎಎಸೈ ಬಾಳಯ್ಯ ಅವರೊಟ್ಟಿಗೆ ತಮ್ಮ ಬೈಕ್ನಲ್ಲಿ ಇಂದು ಬೆಳಿಗ್ಗೆ ಮದ್ದೂರಿನಿಂದ ಕೆಸ್ತೂರು ಕಡೆಗೆ ಹೋಗುತ್ತಿದ್ದರು.
ಈ ವೇಳೆ ರಸ್ತೆಗೆ ಅಡ್ಡ ಬಂದ ಮತ್ತೊಂದು ಬೈಕ್ ಡಿಕ್ಕಿ ಹೊಡೆದಿದೆ,ಪರಿಣಾಮವಾಗಿ ಸ್ಥಳದಲ್ಲೇ ಗನ್ ಮ್ಯಾನ್ ಅರುಣ್ ಸಾವಿಗೀಡಾದರೆ, ಗಾಯಗೊಂಡ ಎಎಸೈ ಬಾಳಯ್ಯ ಅವರನ್ನು ಮದ್ದೂರು ಪಟ್ಟಣದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೆಸ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ: ನಾಗಯ್ಯ