ಕೊರೋನಾಗೆ ರಾಜ್ಯ ಕಾಂಗ್ರೆಸ್ ಕೌನ್ಸಿಲರ್ ನಿಂದ ಮನೆ ಮದ್ದು! 
ರಾಜ್ಯ

ಕೊರೋನಾಗೆ ರಾಜ್ಯ ಕಾಂಗ್ರೆಸ್ ಕೌನ್ಸಿಲರ್ ನಿಂದ ಮನೆ ಮದ್ದು! 

ಮನುಕುಲ ಕೊರೋನಾ ಗುಣಪಡಿಸುವ ಲಸಿಕೆಗೆ ಕಾಯುತ್ತಿದ್ದರೆ, ರಾಜ್ಯ ಕಾಂಗ್ರೆಸ್ ಕೌನ್ಸಿಲರ್ ಒಬ್ಬರು ಕೊರೋನಾಗೆ ಮನೆ ಮದ್ದು ಸಲಹೆ ನೀಡಿದ್ದಾರೆ

ಬೆಂಗಳೂರು: ಮನುಕುಲ ಕೊರೋನಾ ಗುಣಪಡಿಸುವ ಲಸಿಕೆಗೆ ಕಾಯುತ್ತಿದ್ದರೆ, ರಾಜ್ಯ ಕಾಂಗ್ರೆಸ್ ಕೌನ್ಸಿಲರ್ ಒಬ್ಬರು ಕೊರೋನಾಗೆ ಮನೆ ಮದ್ದು ಸಲಹೆ ನೀಡಿದ್ದಾರೆ. 

ರವೀಂದ್ರ ಗತ್ತಿ ಅವರು ನೀಡಿರುವ ಮನೆ ಮದ್ದಿನ ವಿಡಿಯೋ ಸಲಹೆ ವೈರಲ್ ಆಗತೊಡಗಿದೆ. ಕಾಂಗ್ರೆಸ್ ನ ಕೌನ್ಸಿಲರ್ ನೀಡಿರುವ ಮನೆ ಮದ್ದು ಸಲಹೆ ಹೀಗಿದೆ: 90 ಎಂಎಲ್ ರಮ್ ಗೆ ಮೆ ಒಂದು ಟೀ ಸ್ಪೂನ್ ಮೆಣಸು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಕುಡಿಯಿರಿ. ಅರ್ಧ ಹುರಿದ ಎರಡು ಮೊಟ್ಟೆ, ಆಮ್ಲೆಟ್ ನ್ನು ತಿನ್ನಿ ಇದರಿಂದಾಗಿ ಕೊರೋನಾ ಕಣ್ಮರೆಯಾಗುತ್ತದೆ ಎಂದು ಉಲ್ಲಾಳದ ಟೌನ್ ನಲ್ಲಿರುವ ಕೌನ್ಸಿಲರ್ ಹೇಳಿದ್ದಾರೆ.  

ಕೋವಿಡ್ ಗಾಗಿ ತಾವು ಹಲವಾರು ಔಷಧಗಳನ್ನು ಪ್ರಯತ್ನಿಸಿದೆ ಆದರೆ ರಮ್ ಹಾಗೂ ಮೊಟ್ಟೆಗಳು ಮಾತ್ರ ಉತ್ತಮ ಫಲಿತಾಂಶ ನೀಡಬಲ್ಲದು ಎಂದು ಗತ್ತಿ ಹೇಳಿದ್ದಾರೆ. "ನಾನು ಇದನ್ನು ರಾಜಕಾರಣಿಯಾಗಿ ಸಲಹೆ ನೀಡುತ್ತಿಲ್ಲ, ಆದರೆ ಕೊರೋನಾ ಸಮಿತಿಯ ಸದಸ್ಯನಾಗಿ ಈ ಸಲಹೆ ನೀಡುತ್ತಿದ್ದೇನೆ ಎಂದು ರವೀಂದ್ರ ಗತ್ತಿ ತಿಳಿಸಿದ್ದಾರೆ.

ಬೆಂಗಳೂರು, ಮಡಿಕೇರಿಯಲ್ಲಿ ಹಲವು ಜನರು ರಮ್ ಕುಡಿಯುವವರಿದ್ದಾರೆ. ಆದರೆ ನಾನು ಕುಡಿಯುವುದಿಲ್ಲ, ಮೀನು ತಿನ್ನುವುದಿಲ್ಲ ಎಂದು ಗತ್ತಿ ಹೇಳಿದ್ದಾರೆ. 15 ವರ್ಷಗಳಿಂದ ಗತ್ತಿ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿದ್ದು, ಮಂಗಳೂರಿನ ಕಾಂಗ್ರೆಸ್ ನಾಯಕರು ಈ ಸಲಹೆ ಬಗ್ಗೆ ಚರ್ಚೆ ಮಾಡುವವರಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

ಕೃಷ್ಣಾ ಮೇಲ್ದಂಡೆ ಯೋಜನೆ-3: ಸರ್ವಪಕ್ಷ ನಾಯಕರೊಂದಿಗೆ ಶೀಘ್ರದಲ್ಲೇ ಸಭೆ; ಡಿಕೆ.ಶಿವಕುಮಾರ್

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

SCROLL FOR NEXT