ಆರೋಗ್ಯ ಸಚಿವರಿಗೆ ಸನ್ಮಾನ ಮಾಡಲು ನಡೆಯಿತು ಭರ್ಜರಿ ಕಾರ್ಯಕ್ರಮ: ಸಾಮಾಜಿಕ ಅಂತರಕ್ಕೆ ಇಲ್ಲಿ ಅರ್ಥವೇ ಇರಲಿಲ್ಲ! 
ರಾಜ್ಯ

ಆರೋಗ್ಯ ಸಚಿವರಿಗೆ ಸನ್ಮಾನ ಮಾಡಲು ನಡೆಯಿತು ಭರ್ಜರಿ ಕಾರ್ಯಕ್ರಮ: ಸಾಮಾಜಿಕ ಅಂತರಕ್ಕೆ ಇಲ್ಲಿ ಅರ್ಥವೇ ಇರಲಿಲ್ಲ! 

ಕೊರೋನ ಭೀತಿ ರಾಜ್ಯವನ್ನು ಎಡಬಿಡದೇ ಕಾಡುತ್ತಿದೆ, ಇಂತಹ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಜನತೆಯಲ್ಲಿ ಅರಿವು ಮೂಡಿಸಬೇಕ್ದಿದ ಜವಾಬ್ದಾರಿ ಆರೋಗ್ಯ ಸಚಿವರದ್ದು. ಆದರೆ

ಚಿತ್ರದುರ್ಗ: ಕೊರೋನ ಭೀತಿ ರಾಜ್ಯವನ್ನು ಎಡಬಿಡದೇ ಕಾಡುತ್ತಿದೆ, ಇಂತಹ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಜನತೆಯಲ್ಲಿ ಅರಿವು ಮೂಡಿಸಬೇಕ್ದಿದ ಜವಾಬ್ದಾರಿ ಆರೋಗ್ಯ ಸಚಿವರದ್ದು. ಆದರೇನು ಮಾಡೋದು, ಆರೋಗ್ಯ ಸಚಿವರು ಭಾಗವಹಿಸಿದ್ದ ಕಾರ್ಯಕ್ರಮದಲ್ಲೇ ಸಾಮಾಜಿಕ ಅಂತರಕ್ಕೆ ಅರ್ಥವೇ ಇಲ್ಲದ ಚಿತ್ರಣವೊಂದು ಚಿತ್ರದುರ್ಗದಲ್ಲಿ ವೇದಾವತಿ ನದಿಗೆ ಗಂಗಾಪೂಜೆ ಸಲ್ಲಿಸುವ ವೇಳೆ ಕಂಡುಬಂದಿದೆ.

ಚಿತ್ರದುರ್ಗದ ಪರಶುರಾಮಪುರದಲ್ಲಿ ಬೃಹತ್ ಸೇಬಿನ ಹಾರ ತಯಾರಿಸಿ ಕ್ರೇನ್ ಸಹಾಯದಿಂದ ಅದನ್ನು ಶ್ರೀರಾಮುಲು ಅವರಿಗೆ ಹಾಕುವ ಮೂಲಕ ಸಚಿವರಿಗೆ ಸನ್ಮಾನ ಮಾಡಲಾಯಿತು ಈ ವೇಳೆ  ಸ್ವತಃ ಆರೋಗ್ಯ ಸಚಿವರೇ ಸಾಮಾಜಿಕ ಅಂತರ ಕಾಯ್ದುಕೊಳ್ಳಲಿಲ್ಲ, ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಕೆ ಮಾಡುವ ನಿಯಮಗಳನ್ನೂ ಪಾಲನೆ ಮಾಡಲಿಲ್ಲ. ರಾಮುಲು ಅವರೊಂದಿಗೆ ಚಿತ್ರದುರ್ಗದ ಶಾಸಕ, ಜಿಹೆಚ್ ತಿಪ್ಪಾರೆಡ್ಡಿ, ಎಂಪಿ ಎ ನಾರಾಯಣ ಸ್ವಾಮಿ ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದರು. ಇವರೂ ಸಹ ಮಾಸ್ಕ್ ಗಳನ್ನು ಧರಿಸಿರಲಿಲ್ಲ.

ಆರೋಗ್ಯ ಸಚಿವ ಶ್ರೀರಾಮುಲು ಹಾಗೂ ಚಳ್ಳಕೆರೆ ಕಾಂಗ್ರೆಸ್ ನ ಶಾಸಕ ಟಿ ರಘುಮೂರ್ತಿ ಚಳ್ಳಕೆರೆ, ಮೊಳಕಾಲ್ಮೂರು ತಾಲೂಕುಗಳ ಕೆರೆಗಳಿಗೆ 0.50 ಟಿಎಂಸಿ ನೀರು ಹರಿಸುವುದಕ್ಕೆ ಶ್ರಮಿಸಿದ್ದರು. ವೇದಾವತಿ ನದಿಗೆ ಗಂಗಾಪೂಜೆ ಸಲ್ಲಿಸುವುದಕ್ಕಾಗಿ ಶ್ರೀರಾಮುಲು ಚಳ್ಳಕೆರೆ ತಾಲೂಕಿಗೆ ಜೂ.೦2 ರಂದು ಭೇಟಿ ನೀಡಿದ್ದರು.

ಚಳ್ಳಕೆರೆಯ ಬಿಸಿಎಂ ಹಾಸ್ಟೆಲ್ ಕಾಂಪ್ಲೆಸ್ ಹಾಗೂ ಪಕ್ಕದಲ್ಳೇ ಇರುವ ಕಲ್ಯಾಣದುರ್ಗಗಳಲ್ಲಿ 30 ಕ್ಕೂ ಹೆಚ್ಚು ಕೋವಿಡ್-19 ರೋಗಿಗಳಿರಬೇಕಾದರೆ ಸಚಿವರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಬೇಜವಾಬ್ದಾರಿತನದ ವರ್ತನೆ ತೋರಿರುವುದು ಆತಂಕಕ್ಕೆ ಕಾರಣವಾಗಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

ವಿದೇಶದಲ್ಲೂ ನಂದಿನಿ ತುಪ್ಪಕ್ಕೆ ಹೆಚ್ಚಿದ ಬೇಡಿಕೆ; ಅಮೆರಿಕಾ ಸೇರಿದಂತೆ ಮೂರು ರಾಷ್ಟ್ರಗಳಿಗೆ ರಫ್ತು..!

CLP ಸಭೆಯಲ್ಲಿ ಸರ್ವಾನುಮತದಿಂದ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಲಾಗಿತ್ತು, 50:50 ಒಪ್ಪಂದವಾಗಿಲ್ಲ: ಕೆ.ಜೆ. ಜಾರ್ಜ್ ಸ್ಪಷ್ಟನೆ

SCROLL FOR NEXT