ರಾಜ್ಯ

ಗಂಗಾವತಿ: ಕ್ಷುಲ್ಲಕ ಕಾರಣಕ್ಕೆ ತಾಯಿ-ತಂದೆಯನ್ನು ಕೊಲೆ ಮಾಡಿದ ಪುತ್ರ

Srinivasamurthy VN

ಗಂಗಾವತಿ: ಕ್ಲುಲ್ಲಕ ಕಾರಣಕ್ಕೆ ತಂದೆ ಮತ್ತು ತಾಯಿ ಮಲಗಿದ ಸಂದರ್ಭದಲ್ಲಿ  ಸ್ವತಃ ಪುತ್ರನೇ ಕೊಲೆ‌ಮಾಡಿದ ಹೃದಯ ವಿದ್ರಾವಕ ಘಟನೆ ಕನಕಗಿರಿ ಪಟ್ಟಣದಲ್ಲಿ ನಡೆದಿದೆ.

ರಾತ್ರಿ ಬೀಳುತ್ತಿದ್ದ ಜಿಟಿಜಿಟಿ ಮಳೆಯ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ಹೀಗಾಗಿ ಘಟನೆ ತಕ್ಷಣಕ್ಕೆ ಬೆಳಕಿಗೆ ಬಂದಿಲ್ಲ. ಸಹಜವಾಗಿ ಮಂಗಳವಾರ ಬೆಳಗ್ಗೆ ಪಕ್ಕದ ಮನೆಯವರಿಂದ ಈ ಘಟನೆ ಬೆಳಿಕಿಗೆ ಬಂದಿದೆ.

ಘಟನೆಯಲ್ಲಿ ಪುತ್ರ ರಮೇಶ ಎಂಬಾತ, ತಂದೆ ಗಿರಿಯಪ್ಪ (59)ಹಾಗೂ ತಾಯಿ ಅಕ್ಕಮ್ಮ (55) ಅವರನ್ನು ಕೊಲೆ ಮಾಡಿದ್ದಾನೆ. ಕೊಲೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ, ಕೊಲೆಗಾರ ಪುತ್ರ ಮಾನಸಿಕ ಅಸ್ವಸ್ಥನೆ ಅಥವಾ ಪಾನಮತ್ತನಾಗಿ ಈ ಕೃತ್ಯ ಎಸಗಿದ್ದಾನೆಯೇ ಎಂಬುವುದರ ಬಗ್ಗೆ ಪೊಲೀಸ್ ತನಿಖೆಯಿಂದ  ಗೊತ್ತಾಗಬೇಕಿದೆ. 

ಗ್ರಾಮೀಣ ಸಿಪಿಐ ಸುರೇಶ ತಳವಾರ ನೇತೃತ್ವದಲ್ಲಿ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಕನಕಗಿರಿ ಪೊಲೀಸರು, ಆರೋಪಿ ರಮೇಶನನ್ನು ಬಂಧಿಸಿದ್ದಾರೆ. ಪೊಲೀಸರ ಮೃತ ಶವಗಳನ್ನು ಮರಣೋತ್ತರ ಪರೀಕ್ಷೆ ನಡೆಸಿ ಬಳಿಕ ಅಂತ್ಯಕ್ರಿಯೆಗಾಗಿ ಕುಟುಂಬಿಕರಿಗೆ ಹಸ್ತಾಂತರಿಸಿದರು.

ವರದಿ: ಎಂ.ಜೆ. ಶ್ರೀನಿವಾಸ

SCROLL FOR NEXT