ರಾಜ್ಯ

ಚಾಮರಾಜನಗರ: ಫೋನ್ ಕರೆ ಬಂತೆಂದು ಹೋದ ವ್ಯಕ್ತಿ ಶವವಾಗಿ ಪತ್ತೆ!

Vishwanath S

ಚಾಮರಾಜನಗರ: ಗ್ರಾಮ ಪಂಚಾಯ್ತಿ ಬಿಲ್ ಕಲೆಕ್ಟರ್ ಅನುಮಾನಸ್ಪದವಾಗಿ ಮೃತಪಟ್ಟಿರುವ ಘಟನೆ ಚಾಮರಾಜನಗರ ತಾಲೂಕಿನ‌ ವೆಂಕಟಯ್ಯನ ಛತ್ರದಲ್ಲಿ ನಡೆದಿದೆ.

ಬಸವರಾಜು(35) ಮೃತಪಟ್ಟ ವ್ಯಕ್ತಿ. ಅದೇ ಗ್ರಾಮದ ಮಹಿಳೆಯೊಬ್ಬರ ಮನೆ ಮುಂದೆ ಶವವಾಗಿ ಪತ್ತೆಯಾಗಿದ್ದು, ಕುಟುಂಬಸ್ಥರು ಕೊಲೆ ಆರೋಪ ಮಾಡಿದ್ದಾರೆ. ಬುಧವಾರ ರಾತ್ರಿ ಫೋನ್ ಕರೆ ಬಂತೆಂದು ತೆರಳಿದ ಬಸವರಾಜು ಇಂದು ಬೆಳಗ್ಗೆ ಶವದ ರೂಪದಲ್ಲಿ ಮಹಿಳೆ ಮನೆಯ ಮುಂದೆ ಪತ್ತೆಯಾಗಿದ್ದಾರೆ.

ಸ್ಥಳಕ್ಕೆ ಚಾಮರಾಜನಗರ ಪೂರ್ವ ಠಾಣೆ ಪೊಲೀಸರು ಭೇಟಿ ನೀಡಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ.

ವರದಿ: ಗುಳಿಪುರ ನಂದೀಶ

SCROLL FOR NEXT