ರಾಜ್ಯ

ಕೊಡಗು: ಪ್ರವಾಹ ಸಂತ್ರಸ್ತರಿಗೆ 463 ಮನೆಗಳ ಹಸ್ತಾಂತರ

Manjula VN

ಮಡಿಕೇರಿ: ಭೂಕುಸಿತ ಹಾಗೂ ಪ್ರವಾಹಕ್ಕೆ ಗುರಿಯಾಗಿರುವ ಕೊಡಗು ಜಿಲ್ಲೆಯಲ್ಲಿ 'ಪರಿಹಾರ ಕೇಂದ್ರ'ಕ್ಕಾಗಿ ಶಾಶ್ವತ ಕಟ್ಟಡ ನಿರ್ಮಿಸಲು ಶೀಘ್ರದಲ್ಲೇ 10 ಕೋಟಿ ರೂ.ಗಳ ಅನುದಾನವನ್ನು ಬಿಡುಗಡೆ ಮಾಡಲಾಗುವುದು ಎಂದು ಕರ್ನಾಟಕ ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.

ಶುಕ್ರವಾರದ ಅಧಿಕೃತ ಪ್ರಕಟಣೆಯ ಪ್ರಕಾರ, ಸೋಮವಾರಪೇಟೆಯ ಜಂಬೂರಿನಲ್ಲಿ ಪ್ರವಾಹ ಪೀಡಿತರಿಗೆ ಹೊಸದಾಗಿ ನಿರ್ಮಿಸಿದ ಮನೆಗಳನ್ನು ಸಚಿವರು ಗುರುವಾರ ಸಂಜೆ ಸಾಂಕೇತಿಕವಾಗಿ ಹಸ್ತಾಂತರಿಸಿದರು.

'ಪರಿಹಾರ ಕೇಂದ್ರ' ಖಾಲಿ ಇದ್ದಾಗಲೆಲ್ಲಾ ಅದನ್ನು ಸರ್ಕಾರಿ ಸಭೆಗಳಿಗೆ ಬಳಸಲಾಗುವುದು ಎಂದ ಸಚಿವರು, "ಮುಂಜಾಗ್ರತಾ ಕ್ರಮವಾಗಿ ನಾಲ್ಕು ಎನ್‌ಡಿಆರ್‌ಎಫ್ ತಂಡಗಳು ಆಗಮಿಸಿವೆ ಮತ್ತು ಕೊಡಗು, ದಕ್ಷಿಣ ಕನ್ನಡ, ಬೆಳಗಾವಿ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಮಾನ್ಸೂನ್ ಅಂತ್ಯದವರೆಗೆ ಬೀಡುಬಿಡುತ್ತವೆ" ಎಂದು ಹೇಳಿದರು.

SCROLL FOR NEXT