ಹಂಪಿ ಸ್ಮಾರಕ 
ರಾಜ್ಯ

ತೆರೆದ ಹಂಪಿ ವಿರೂಪಾಕ್ಷ ದೇವಾಲಯ: ಸ್ಮಾರಕ ವೀಕ್ಷಣೆಗೆ ಇಲ್ಲ ಅವಕಾಶ

ಹಂಪಿಯ ವಿರೂಪಾಕ್ಷ ದೇವಾಲಯ ತೆರೆದಿದ್ದು ಭಕ್ತಾದಿಗಳ ದರ್ಶನಕ್ಕೆ ಅವಕಾಶ ನೀಡಲಾಗಿದೆ, ಆದರೆ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹಂಪಿ ಸ್ಮಾರಕ ವೀಕ್ಷಣೆಗೆ ಪ್ರವಾಸಿಗರು ಇನ್ನೂ  ಕಾಯಬೇಕಾಗಿದೆ.

ಹುಬ್ಬಳ್ಳಿ: ಹಂಪಿಯ ವಿರೂಪಾಕ್ಷ ದೇವಾಲಯ ತೆರೆದಿದ್ದು ಭಕ್ತಾದಿಗಳ ದರ್ಶನಕ್ಕೆ ಅವಕಾಶ ನೀಡಲಾಗಿದೆ, ಆದರೆ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹಂಪಿ ಸ್ಮಾರಕ ವೀಕ್ಷಣೆಗೆ ಪ್ರವಾಸಿಗರು ಇನ್ನೂ  ಕಾಯಬೇಕಾಗಿದೆ.ಹಂಪಿಯಲ್ಲಿನ ಸ್ಮಾರಕಗಳನ್ನು ಇನ್ನೂ ಮೂರು ತಿಂಗಳ ಕಾಲ ತೆರೆಯದಿರಲು ಪ್ರವಾಸಿಗರು ಹೆಚ್ಚು ಸಮಯ ಕಾಯಬೇಕಾಗುತ್ತದೆ. ಮುಂದಿನ ಮೂರು ತಿಂಗಳವರೆಗೆ ಪ್ರವಾಸಿಗರಿಗೆ ದೇವಾಲಯ ಸಂಕೀರ್ಣವನ್ನು ತೆರೆಯುವ ಸಾಧ್ಯತೆಯಿಲ್ಲ ಎಂದು  ಹಂಪಿ ವಿಶ್ವ ಪರಂಪರೆಯ ಪ್ರದೇಶ ನಿರ್ವಹಣಾ ಪ್ರಾಧಿಕಾರದ (ಎಚ್‌ಡಬ್ಲ್ಯುಎಚ್‌ಎಎಂಎ) ಮೂಲಗಳು ತಿಳಿಸಿವೆ. 

ಇನ್ನೂ ಆರು ತಿಂಗಳು ಹಂಪಿ ತೆರೆಯುವ ಉದ್ದೇಶವಿರಲಿಲ್ಲ, ಆದರೆ ಸರ್ಕಾರದ ನಿರ್ಧಾರಕ್ಕೆ ನಾವು ಮನ್ನಣೆ ನೀಡಬೇಕಾಗಿದೆ, ಸರ್ಕಾರ ದೇವಾಲಯ ತೆರೆಯಲು ಅನುಮತಿ ನೀಡಿದೆ ಆದರೆ ಸ್ಮಾರಕ ತೆರೆಯಲು ಯಾವುದೇ ಸೂಚನೆ ನೀಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಂಪಿಯ ಬಡವಿ ಲಿಂಗ ದೇವಾಲಯವನ್ನು ಲಾಕ್ ಡೌನ್ ಸಮಯದಲ್ಲೂ ತೆರೆದು ದೈನಂದಿನ ಪೂಜಾ ಕಾರ್ಯ ಕೈಗೊಳ್ಳಲಾಗಿತ್ತು. ಕಲ್ಲಿನ ರಥ ಸೇರಿದಂತೆ ಉಳಿದಂತೆ ತುಂಗಭದ್ರ ನದಿ ದಂಡೆ ಮೇಲಿನ ಹಲವು ಸ್ಮಾರಕಗಳ ದರ್ಶನಕ್ಕೆ ಇನ್ನೂ ಕೆಲ ದಿನಗಳ ಕಾಲ ಅವಕಾಶವಿಲ್ಲ ಎಂದು ಹೇಳಿದ್ದಾರೆ,

ಟೇಕ್‌ಅವೇಗಳಿಗೆ ಅನುಮತಿ ನೀಡಿದ್ದರೂ, ಪ್ರವಾಸಿಗರಿಲ್ಲದ ಕಾರಣ ಹಂಪಿಯ ಸುತ್ತಮುತ್ತಲಿನ ರೆಸ್ಟೋರೆಂಟ್‌ಗಳು ಮುಚ್ಚಲ್ಪಟ್ಟಿವೆ. ಮೈಸೂರು ಗೋಕರ್ಣ ಸೇರಿದಂತೆ ಅತಿ ಹೆಚ್ಚಿನ ಪ್ರವಾಸಿಗರನ್ನು ಹಂಪಿ ಹೊಂದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

ಸಮಸ್ತ ಜನರಿಗೆ ಸುಗಮ ಆಡಳಿತ, ಶುದ್ಧ ನೀರಿನ ಪೂರೈಕೆ: ಸ್ವಚ್ಚತೆ- ಸಂಚಾರ ವ್ಯವಸ್ಥೆಗೆ ಸಿಎಂ ಸಿದ್ದರಾಮಯ್ಯ ಕಟ್ಟಪ್ಪಣೆ

ಸಿದ್ದರಾಮಯ್ಯ ಮೇಲೆ ತೂಗುಗತ್ತಿ: ಅಧಿಕಾರದಲ್ಲಿ ಉಳಿಯಲು ಸಂಪುಟ ಪುನಾರಚನೆ ಕಸರತ್ತು; ಬಿಹಾರ-ಕೇರಳ ಚುನಾವಣೆಯತ್ತ ಡಿಕೆಶಿ ಚಿತ್ತ!

ವೀರೇಂದ್ರ ಪಪ್ಪಿ ಕರ್ಮಕಾಂಡ ನೋಡುತ್ತಿದ್ದರೆ CM- DCM ಇನ್ಯಾವ ಪರಿ ಲೂಟಿ ಮಾಡಿ ಹೈಕಮಾಂಡ್ ಗೆ ಕಪ್ಪ ನೀಡುತ್ತಿರಬೇಡಾ?

ಈ ಬಾರಿ ನಾನು ಸಚಿವನಾಗುವ ಭರವಸೆ ಇದೆ: ಸಂಪುಟ ವಿಸ್ತರಣೆಯೇ ನವೆಂಬರ್ ಕ್ರಾಂತಿಯಿರಬಹುದು; ಸಲೀಂ ಅಹ್ಮದ್

SCROLL FOR NEXT