ರಾಜ್ಯ

ಬೆಂಗಳೂರು: ಪತ್ನಿ ಕೊಲೆ ಮಾಡಿ ಆತ್ಮಹತ್ಯೆ ಎಂದು ಬಿಂಬಿಸಿದ್ದ ಪತಿ ಪೊಲೀಸ್ ವಶಕ್ಕೆ

Raghavendra Adiga

ಬೆಂಗಳೂರು:  ಬೆಂಗಳೂರು:  ಹೆಂಡತಿಯನ್ನು ಕೊಲೆ ಮಾಡಿ ಆತ್ಮಹತ್ಯೆ ಎಂದು ಬಿಂಬಿಸಿದ್ದ ಪತಿಯನ್ನು ಬೊಮ್ಮನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಸುರೇಶ್(32) ಬಂಧಿತ ಆರೋಪಿ. ಜೂ. 7 ರಂದು ಕುಡಿದ ಅಮಲಿನಲ್ಲಿ ಜಗಳ ತಾರಕ್ಕಕೇರಿದ ಪರಿಣಾಮ ಆರೋಪಿ ಸುರೇಶ್ ತನ್ನ ಹೆಂಡತಿ ವೆಂಕಟಲಕ್ಷ್ಮಿಯ ಕತ್ತು ಸೀಳಿ ಶ್ರೀನಿವಾಸ್ ಲೇಔಟ್ ನಲ್ಲಿರುವ ಮನೆಯಲ್ಲಿ ಕೊಲೆ ಮಾಡಿದ್ದನು.

ಬಳಿಕ ಆಕೆಯ ಮೊಬೈಲ್ ಫೋನ್ ತೆಗೆದುಕೊಂಡ ಸುರೇಶ್ ಅದರಿಂದ, ಹಣಕಾಸಿನ ತೊಂದರೆಯಿಂದಾಗಿ ನಾನು ಸಾಯುತ್ತಿದ್ದೇನೆ. ನನ್ನ ಸಾವಿಗೆ ನಾನೇ ಕಾರಣ ಎಂದು ತನ್ನ ಮೊಬೈಲ್ ಗೆ ಮೆಸೇಜ್ ಕಳುಹಿಸಿಕೊಂಡಿದ್ದನು. ನಂತರ ಅದೇ ಮೆಸೇಜ್ ಅನ್ನು ಪೊಲೀಸರಿಗೂ ತೋರಿಸಿ ತನಿಖೆಯ ದಿಕ್ಕು ತಪ್ಪಿಸುವುದಕ್ಕೆ ಯತ್ನ ಮಾಡಿದ್ದನು. 

ಟೈಲರಿಂಗ್ ವೃತ್ತಿಯಲ್ಲಿದ್ದ ಸುರೇಶ್ ದುಡಿಮೆ ಹಣ ಸಂಸಾರಕ್ಕೆ ಸಾಕಾಗುತ್ತಿರಲಿಲ್ಲ. ಇದರಿಂದಾಗಿ ಪತ್ನಿ ಜತೆ ಆಗಾಗ ಜಗಳ ನಡೆಯುತ್ತಿತ್ತು. ಪತ್ನಿ ವೆಂಕಟಲಕ್ಷ್ಮಿ "ನೀನು ಹಣ ಮಾಡಿಲ್ಲ ಜಾಗ ಖರೀದಿಸಿಲ್ಲ" ಎಂದು ಪದೇ ಪದೇ ಕಿರಿಕ್ ಮಾಡುತ್ತಿದ್ದಳು. ಇದರಿಂದಾಗಿ ಬೇಸತ್ತ ಪತಿ ಪತ್ನಿಯ ಕೊಲೆಗೆ ಮುಂದಾಗಿದ್ದಾನೆ.

ಮರಣೋತ್ತರ ಪರೀಕ್ಷೆಯ ವರದಿಯು ವೆಂಕಟಲಕ್ಷ್ಮಿಯದು ಆತ್ಮಹತ್ಯೆಯಲ್ಲ, ಕೊಲೆ ಎಂದು ಸಾಬೀತಾಗಿದೆ. ಕಡೆಗೆ ಪೋಲೀಸರು ಆರೋಪಿ ಪತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಾನು ಕೊಲೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. 

SCROLL FOR NEXT