ವಲಸೆ ಕಾರ್ಮಿಕ ಬಾಲಕಿಯನ್ನು ಆರೋಗ್ಯ ಕಾರ್ಯಕರ್ತೆ ತಪಾಸಣೆ ಮಾಡುತ್ತಿರುವ ಚಿತ್ರ 
ರಾಜ್ಯ

ಕೋವಿಡ್-19 ಪಾಸಿಟಿವ್ ಇದ್ದರೂ ತಲೆಮರೆಸಿಕೊಳ್ಳುತ್ತಿದ್ದವರಿಗೆ ಶಾಕಿಂಗ್ ನ್ಯೂಸ್!

ಕೋವಿಡ್ -19 ಪಾಸಿಟಿವ್ ಮಾಹಿತಿ ತಿಳಿಯುತ್ತಿದ್ದಂತೆ ತಿಳಿಯುತ್ತಿದ್ದಂತೆ ತಲೆಮರೆಸಿಕೊಳ್ಳುತ್ತಿದ್ದ ಜನರ ಸಂಖ್ಯೆ ಹೆಚ್ಚಾಗುತಿತ್ತು. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಬಿಬಿಎಂಪಿ ಹೊಸ ಕಾರ್ಯತಂತ್ರವೊಂದನ್ನು ಅನುಸರಿಸುತ್ತಿದೆ. 

ಬೆಂಗಳೂರು: ಕೋವಿಡ್ -19 ಪಾಸಿಟಿವ್ ಮಾಹಿತಿ ತಿಳಿಯುತ್ತಿದ್ದಂತೆ ತಿಳಿಯುತ್ತಿದ್ದಂತೆ ತಲೆಮರೆಸಿಕೊಳ್ಳುತ್ತಿದ್ದ ಜನರ ಸಂಖ್ಯೆ ಹೆಚ್ಚಾಗುತಿತ್ತು. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಬಿಬಿಎಂಪಿ ಹೊಸ ಕಾರ್ಯತಂತ್ರವೊಂದನ್ನು ಅನುಸರಿಸುತ್ತಿದೆ. 

ಇನ್ನು ಮುಂದೆ ಆರೋಗ್ಯ ಇಲಾಖೆ ಅಧಿಕಾರಿಗಳು ಕೋವಿಡ್-19 ಪರೀಕ್ಷೆಗೆ ಒಳಪಟ್ಟವರಿಗೆ ಪಾಸಿಟಿವ್ ಅಥವಾ ನೆಗೆಟಿವ್ ಎಂದು ಹೇಳುವುದಿಲ್ಲ, ವರದಿ ಬಂದಿದೆ, ಬಂದು ಸಂಗ್ರಹಿಸಿಕೊಳ್ಳಿ ಎಂದಷ್ಟೇ ಹೇಳುವುದಾಗಿ ಬಿಬಿಎಂಪಿ ಆಯುಕ್ತ ಬಿಹೆಚ್ ಅನಿಲ್ ಕುಮಾರ್ ಹೇಳಿದರು.

ಪರೀಕ್ಷಾ ವರದಿ ಸಂಗ್ರಹಿಸಿಕೊಳ್ಳಲು ಬರುತ್ತಿದ್ದಂತೆ ಪಾಸಿಟಿವ್ ಇದ್ದವರನ್ನು ಆಸ್ಪತ್ರೆಗೆ ಕಳುಹಿಸಲಾಗುವುದು, ನೆಗೆಟಿವ್ ಹೊಂದಿದ್ದವರನ್ನು ಮನೆಗೆ ವಾಪಸ್ ಕಳುಹಿಸಲಾಗುವುದು ಎಂದು ಅವರು ತಿಳಿಸಿದರು.

ಕೊರೋನಾ ಸೋಂಕು ಹೊಂದಿರುವವರನ್ನು  ಕರೆತರಲು ಆರೋಗ್ಯ ಇಲಾಖೆ ಸಿಬ್ಬಂದಿ ತೆರಳಿದಾಗ ಅವರೊಂದಿಗೆ ಬಾರದೆ ಅನೇಕ ಮಂದಿ ತಪ್ಪಿಸಿಕೊಳ್ಳುತ್ತಿದ್ದಾರೆ. ಇದರಿಂದ ಸೋಂಕು ಹರಡುತ್ತಿದ್ದು, ಸೋಂಕಿತರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಸಾಂಸ್ಥಿಕ ಕ್ವಾರಂಟೈನ್ ನಲ್ಲಿರುವ ಕೆಲವರು ತಪ್ಪಾದ ಫೋನ್ ನಂಬರ್ ಕೊಟ್ಟರೆ, ಮತ್ತೆ ಕೆಲವರ ಮೊಬೈಲ್ ಸ್ವೀಚ್ಢ್ ಆಫ್ ಆಗಿರುತ್ತದೆ. ಕೆಲ ಜನರು ತಪ್ಪಾದ ವಿಳಾಸ ನೀಡಿರುತ್ತಾರೆ. ಉತ್ತಮ ಸಂವಹನಕ್ಕಾಗಿ ಇಲಾಖೆಯಿಂದ ಪರ್ಯಾಯ ವಿಳಾಸದ ಮಾಹಿತಿಯನ್ನು ಪಡೆಯಲಾಗುತ್ತಿದೆ ಎಂದು ಅವರು ಹೇಳಿದರು.

ಇತರ ರಾಜ್ಯಗಳಿಂದ ಬಂದವರು ಹಾಗೂ ಐಎಲ್ ಐ, ಸಾರಿ ರೋಗಿಗಳಿಂದ ನಗರದಲ್ಲಿ ಸೋಂಕಿನ ಪ್ರಕರಣ ಹೆಚ್ಚಾಗುತ್ತಿದೆ. ಆದಾಗ್ಯೂ, ಇಂತಹ ಪ್ರಕರಣಗಳು ವಿರಳವಾಗಿವೆ. ಪಾದರಾಯನಪುರ, ಹೊಂಗಸಂದ್ರದಲ್ಲಿ ಇದ್ದಂತೆ ಇಲ್ಲ ಎಂದು ಸ್ಪಷ್ಪಪಡಿಸಿದರು. 

ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಪರೀಕ್ಷೆ ಮಾಡುತ್ತಿರುವುದರಿಂದ ನಗರದಲ್ಲಿ ಹೆಚ್ಚಾಗಿ ಸೋಂಕು ಪ್ರಕರಣಗಳು ಕಂಡುಬರುತ್ತಿವೆ. ಇದನ್ನು ತಡೆಗಟ್ಟುವಲ್ಲಿ ಸರ್ಕಾರ ಮಾತ್ರವಲ್ಲ, ಜನರ ಪಾತ್ರವೂ ಪ್ರಮುಖವಾಗಿದೆ ಎಂದು ಅನಿಲ್ ಕುಮಾರ್ ತಿಳಿಸಿದರು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರದ ಕಚೇರಿಯ ಕಟ್ಟಡದ ಮೆಟ್ಟಿಲು ಕುಸಿತ; ಬಿಜೆಪಿ ಶಾಸಕ ವೇದ ಪ್ರಕಾಶ್ ಗುಪ್ತಾ ಕೂದಲೆಳೆ ಅಂತರದಲ್ಲಿ ಪಾರು! video

1,000 ಟನ್‌ ಕ್ರೋಢೀಕರಣ ಗುರಿ; ಮನೆಯ ಚಿನ್ನ ಠೇವಣಿ ಇಡಲು ಉತ್ತೇಜನ; ಹೊಸ Gold Monetisation Scheme ಘೋಷಿಸಲಿರುವ ಕೇಂದ್ರ

SIR ಪರಿಷ್ಕರಣೆ ವೇಳೆ ಮತ್ತೊಂದು ದುರಂತ: ಹೃದಯಾಘಾತದಿಂದ ಬೀದರ್‌ನಲ್ಲಿ BLO ಸಾವು

ಚನ್ನಪಟ್ಟಣದ ಶಾಸಕ ಸಿಪಿ ಯೋಗೇಶ್ವರ್ ಪುತ್ರನ ಸೈನಿಕ-2 ಟೀಸರ್ ಬಿಡುಗಡೆ!

Video: 'ಅವನು ನನ್ನ ಆತ್ಮೀಯ, ಅದ್ಭುತ ಗೆಳೆಯ': ದಿನೇಶ್ ಕಾರ್ತಿಕ್ ನೆನೆದು ತುಂಬಿದ ವೇದಿಕೆಯಲ್ಲಿ ಕಣ್ಣೀರು ಹಾಕಿದ Murali Vijay