ಸಂಗ್ರಹ ಚಿತ್ರ 
ರಾಜ್ಯ

ಕೊರೋನಾದಿಂದ ಹಡಗಿನಲ್ಲಿ ಲಾಕ್: ಹೃದಯಾಘಾತದಿಂದ ಅಡುಗೆಯಾತ ಸಾವು!

ಮಹಾಮಾರಿ ಕೊರೋನಾದಿಂದ ಕಳೆದ 100 ದಿನಗಳಿಂದ ಯುನೈಟೆಡ್ ಕಿಂಗ್‌ಡಂನ ಟಿಲ್ಬರಿ ಬಂದರಿನಲ್ಲಿ ಸಿಲುಕಿದ್ದ ಎಂವಿ ಆಸ್ಟೋರಿಯಾ ಹಡಗಿನಲ್ಲಿ ಅಡಿಗೆ ಕೆಲಸದಲ್ಲಿದ್ದ ವ್ಯಕ್ತಿಯೋರ್ವ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಬೆಂಗಳೂರು: ಮಹಾಮಾರಿ ಕೊರೋನಾದಿಂದ ಕಳೆದ 100 ದಿನಗಳಿಂದ ಯುನೈಟೆಡ್ ಕಿಂಗ್‌ಡಂನ ಟಿಲ್ಬರಿ ಬಂದರಿನಲ್ಲಿ ಸಿಲುಕಿದ್ದ ಎಂವಿ ಆಸ್ಟೋರಿಯಾ ಹಡಗಿನಲ್ಲಿ ಅಡಿಗೆ ಕೆಲಸದಲ್ಲಿದ್ದ ವ್ಯಕ್ತಿಯೋರ್ವ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಮಂಗಳವಾರ ರಾತ್ರಿ ಆಸ್ಟೋರಿಯಾ ಸಿಬ್ಬಂದಿಯನ್ನು ಮತ್ತೊಂದು ಹಡಗು ವಾಸ್ಕೋ ಡಾ ಗಾಮಾಕ್ಕೆ ಸ್ಥಳಾಂತರಿಸಲಾಗಿತ್ತು. ಈ ವೇಳೆ 43 ವರ್ಷದ ಬಾಲಾಜಿ ಕೃಷ್ಣಕುಮಾರ್ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. 

100 ದಿನಗಳಿಂದ ಹಡಗಿನಲ್ಲಿ ಲಾಕ್ ಆಗಿದ್ದರಿಂದ ಖಿನ್ನತೆಗೆ ಒಳಗಾಗಿದ್ದರು, ಚೆನ್ನೈನ ತಂಬರಂನಲ್ಲಿ ತಮ್ಮ ಕುಟುಂಬವನ್ನು ಸೇರಲು ಹಪಹಪಿಸುತ್ತಿದ್ದರು ಎಂದು ಸಿಬ್ಬಂದಿ ಸದಸ್ಯರು ತಿಳಿಸಿದ್ದಾರೆ. 

ಮಾರ್ಚ್ 9ರಿಂದ 168 ಸಿಬ್ಬಂದಿ ಎಸೆಕ್ಸ್‌ನಲ್ಲಿ ಸಿಕ್ಕಿಬಿದ್ದಿದ್ದು, ಅವರನ್ನು ಭಾರತಕ್ಕೆ ವಾಪಸ್ ಕಳುಹಿಸುವಂತೆ ಪದೇ ಪದೇ ಮನವಿ ಮಾಡಲಾಗಿತ್ತು. ಗೋವಾ, ಕೇರಳ, ಮಹಾರಾಷ್ಟ್ರ, ನವದೆಹಲಿ ಮತ್ತು ತಮಿಳುನಾಡಿನ ಅಡುಗೆಯವರು, ಬಾರ್‌ಟೆಂಡರ್‌ಗಳು ಮತ್ತು ಭದ್ರತಾ ಸಿಬ್ಬಂದಿ ಹಡಗಿನಲ್ಲಿ ಸಿಲುಕಿದ್ದಾರೆ ಎಂದು ಜೂನ್ 3ರಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನಲ್ಲಿ ವರದಿ ಭಿತ್ತರವಾಗಿತ್ತು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

ಪಶ್ಚಿಮ ಬಂಗಾಳ ವೈದ್ಯಕೀಯ ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಕೇಸ್: ಮೂವರ ಬಂಧನ

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

SCROLL FOR NEXT