ಸಿಸಿಟಿವಿ ದೃಶ್ಯ 
ರಾಜ್ಯ

ಮಂಗಳೂರಲ್ಲಿ ಅಮಾನವೀಯ ಕೃತ್ಯ: ಲಾಡ್ಜ್ ನಲ್ಲಿದ್ದ ತಂದೆಯನ್ನು ಕಾಲು ಹಿಡಿದು ಹೊರಕ್ಕೆ ಎಳೆದುಕೊಂಡು ಬಂದ ಮಗ!

ಕಡಲ ನಗರಿ ಮಂಗಳೂರಿನಲ್ಲಿ ನಡೆದ ಅಮಾನವೀಯ ಘಟನೆಯೊಂದರಲ್ಲಿ ಮಗನೊಬ್ಬ  ಲಾಡ್ಜ್‌ನಲ್ಲಿ ತಂಗಿದ್ದ ತಂದೆಯನ್ನು ಮೊದಲ ಮಹಡಿಯಿಂದ ಕಾಲುಗಳನ್ನು ಹಿಡಿದು ದರದರನೆ ನೆಲಮಹಡಿಯವರೆಗೆ ಎಳೆದೊಯ್ದಿದ್ದಾನೆ. ಮಂಗಳೂರು ದೇರಳಕಟ್ಟೆ  ಖಾಸಗಿ ಲಾಡ್ಜ್‌ನಲ್ಲಿ ಜೂನ್ 29 ರ ಸೋಮವಾರ ಈ ಘಟನೆ ನಡೆದಿದೆ.

ಮಂಗಳೂರು: ಕಡಲ ನಗರಿ ಮಂಗಳೂರಿನಲ್ಲಿ ನಡೆದ ಅಮಾನವೀಯ ಘಟನೆಯೊಂದರಲ್ಲಿ ಮಗನೊಬ್ಬ  ಲಾಡ್ಜ್‌ನಲ್ಲಿ ತಂಗಿದ್ದ ತಂದೆಯನ್ನು ಮೊದಲ ಮಹಡಿಯಿಂದ ಕಾಲುಗಳನ್ನು ಹಿಡಿದು ದರದರನೆ ನೆಲಮಹಡಿಯವರೆಗೆ ಎಳೆದೊಯ್ದಿದ್ದಾನೆ. ಮಂಗಳೂರು ದೇರಳಕಟ್ಟೆ  ಖಾಸಗಿ ಲಾಡ್ಜ್‌ನಲ್ಲಿ ಜೂನ್ 29 ರ ಸೋಮವಾರ ಈ ಘಟನೆ ನಡೆದಿದೆ.

15 ದಿನಗಳ ಹಿಂದೆ ಮುಂಬೈನಿಂದ ಮಂಗಳೂರಿಗೆ ಬಂದಿದ್ದರಿಂದ ತಂದೆ ಖಾಸಗಿ ಲಾಡ್ಜ್‌ನಲ್ಲಿದ್ದರು. ಅವರಿಗೆ ಲಾಡ್ಜ್‌ಗೆ ತೆರಳುವ ಮುನ್ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು. ತಂದೆ ಮತ್ತು ಮಗ ಇಬ್ಬರೂ ಉಪ್ಪಳ ಮೂಲದವರು ಮತ್ತು ಮಗನ ಅಮಾನವೀಯ ಕ್ರಿಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ.

ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದ್ದು ಸ್ಥಳೀಯರೂ ಕೂಡ ಈ ಕೃತ್ಯಕ್ಕೆ ತಡೆಯೊಡ್ಡಲಿಲ್ಲ ಎನ್ನುವುದು ಖೇದದ ಸಂಗತಿ.

ಘಟನೆಯ ನಂತರ ಮಗ ನಾಪತ್ತೆಯಾಗಿದ್ದಾಗಿ ವರದಿಯಾಗಿದೆ. ಸಾರ್ವಜನಿಕರು ಪ್ರಥಮ ಚಿಕಿತ್ಸೆ ನೀಡುವ ಮೂಲಕ ನೊಂದ ತಂದೆಗೆ ಸಹಾಯ ಮಾಡಿದರು.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

ಭಾರತದ ಮೇಲೆ ಸುಂಕಾಸ್ತ್ರ ಜಾರಿ: ಮತ್ತೆ ಇಂಡೋ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಛರಿಸಿದ ಡೊನಾಲ್ಡ್ ಟ್ರಂಪ್

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

SCROLL FOR NEXT