ಸಾಂದರ್ಭಿಕ ಚಿತ್ರ 
ರಾಜ್ಯ

ಮಂಡ್ಯ: ಲೋಕಪಾವನಿ ನದಿಯಲ್ಲಿ ಗಾಡಿ, ಎತ್ತುಗಳ ಸಹಿತ ಕೊಚ್ಚಿಹೋದ ಯುವಕ

ಗಾಡಿ ಮತ್ತು ಎತ್ತುಗಳ ಮೈ ತೊಳೆಯಲು ನೀರಿಗಿಳಿದ ವೇಳೆ ಎತ್ತಿನ ಗಾಡಿ ಸಮೇತ ಯುವಕನೋರ್ವ ಕೊಚ್ಚಿ ಹೋಗಿರುವ ಘಟನೆ ಶ್ರೀರಂಗಪಟ್ಟಣ ತಾಲ್ಲೂಕಿನ ಬಾಬುರಾಯನಕೊಪ್ಪಲಿನ ಲೋಕಪಾವನಿ ನದಿಯಲ್ಲಿ ನಡೆದಿದೆ.

ಮಂಡ್ಯ: ಗಾಡಿ ಮತ್ತು ಎತ್ತುಗಳ ಮೈ ತೊಳೆಯಲು ನೀರಿಗಿಳಿದ ವೇಳೆ ಎತ್ತಿನ ಗಾಡಿ ಸಮೇತ ಯುವಕನೋರ್ವ ಕೊಚ್ಚಿ ಹೋಗಿರುವ ಘಟನೆ ಶ್ರೀರಂಗಪಟ್ಟಣ ತಾಲ್ಲೂಕಿನ ಬಾಬುರಾಯನಕೊಪ್ಪಲಿನ ಲೋಕಪಾವನಿ ನದಿಯಲ್ಲಿ ನಡೆದಿದೆ.

ಸೋಮಶೇಖರ್(೨೧) ಎಂಬ ಯುವಕನೇ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾನೆ.

ಸೋಮಶೇಖರ್ ತನ್ನ ಸ್ನೇಹಿತನೊಂದಿಗೆ ಗಾಡಿ ಸಮೇತ ಎತ್ತುಗಳ ಮೈ ತೋಳೆಯಲು ಲೋಕಪಾವನಿ ಸೇತುವೆ ಸಮೀಪದಲ್ಲಿ ನದಿಗೆ ಇಳಿದಿದ್ದಾರೆ. ಭಾನುವಾರ ರಾತ್ರಿ ಪಾಡಂವಪುರ ಹಾಗೂ ಶ್ರೀರಂಗಪಟ್ಟಣ ತಾಲ್ಲೂಕು ಸೇರಿದಂತೆ ಸುತ್ತಮುತ್ತ ಸುರಿದ ಭಾರಿ ಮಳೆಗೆ ನದಿಯಲ್ಲಿ ಅಪಾರ ಪ್ರಮಾಣದ ನೀರು ಏಕಾಏಕಿ ಹರಿದು ಬಂದಿತ್ತು. ಈ ನೀರಿನ ಸೆಳೆತಕ್ಕೆ ಗಾಡಿ, ಎತ್ತುಗಳು ಸೋಮಶೇಖರ್ ಹಾಗೂ ಮತ್ತೊಬ್ಬ ಸಹ ಕೊಚ್ಚಿ ಹೋಗಿದ್ದಾರೆ. 

ಈ ವೇಳೆ ನದಿಯಿಂದ ಎತ್ತುಗಳು ಗಾಡಿಯಿಂದ ಬಿಡಿಸಿಕೊಂಡು ದಡ ಸೇರಿವೆ. ಇನ್ನೊಬ್ಬ ಯುವಕನು ಸಹ ನದಿಯ ರಭಸದಲ್ಲಿ ಈಜಿ ದಡ ಸೇರಿದ್ದಾನೆ. ಆದರೆ ಸೋಮಶೇಖರ್ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋಗಿ ಕೆಲ ಅಂತರದ ದೂರದಲ್ಲೇ ನೀರಿನಲ್ಲಿ ಮುಳುಗಿ ಕಣ್ಮರೆಯಾಗಿದ್ದಾನೆ. 
ವಿಷಯ ತಿಳಿದು ಬಾಬುರಾಯನಕೊಪ್ಪಲು ಗ್ರಾಮಸ್ಥರು ನದಿಯಲ್ಲಿ ಹುಡುಕಾಟ ನಡೆಸಿ ಬಳಿಕ ಅಗ್ನಿಶಾಮಕದಳ ಹಾಗೂ ಶ್ರೀರಂಗಪಟ್ಟಣ ಟೌನ್ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳೀಯ ಮೀನುಗಾರರ ಸಹಾಯದಿಂದ ತೆಪ್ಪದಲ್ಲಿ ಹುಡುಕಾಟ ಆರಂಭಿಸಿದ್ದಾರೆ. ಘಟನೆಯಲ್ಲಿ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದ ಎತ್ತಿನಗಾಡಿ ಕಿಲೋ ಮೀಟರ್ ದೂರದಲ್ಲಿ ನದಿಯೊಳಗೆ ಪತ್ತೆಯಾಗಿದ್ದು, ಇದೀಗ ನಾಪತ್ತೆಯಾಗಿರುವ ಯುವಕನಿಗಾಗಿ ತೀವ್ರ ಶೋಧನೆ ನಡೆಸಲಾಗಿದೆ. ಈ ಸಂಬಂಧ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
-ನಾಗಯ್ಯ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

West Asia war: ಶಾಂತಿ ಒಪ್ಪಂದಕ್ಕೆ ‘NO’ ಎಂದ ಟ್ರಂಪ್; ಖಾರ್ಗ್ ದ್ವೀಪದ ಮೇಲೆ ಅಮೆರಿಕಾ ಕಣ್ಣು; ದಾಳಿ ಭೀತಿ ಮತ್ತಷ್ಟು ಹೆಚ್ಚಳ..!

'ಯಾರಿಗೆ ಟಿಕೆಟ್ ಕೊಟ್ಟರೂ ನಾಯಕರಿಂದ ಒಟ್ಟಾಗಿ ಕೆಲಸ ಮಾಡುವ ಭರವಸೆ: ಅಗತ್ಯಬಿದ್ರೆ ಸಮರ್ಥ್ ನಾಮಪತ್ರ ವಾಪಸ್'

ಸಮರ ವೀರ- ಭಾಷೆ ಬಳಕೆಯಲ್ಲಿ ಸಭ್ಯತನದ ಎಲ್ಲೆ ಮೀರದ ಚತುರ: ಖರ್ಗೆಗೆ ತಮ್ಮದೇ ದಾಟಿಯಲ್ಲಿ ಮಾರ್ಮಿಕ ಉತ್ತರ; ಮಾಗಿದ ದೇವೇಗೌಡರ 'ಸ್ಥಿತ ಪ್ರಜ್ಞೆ' ಅಪಾರ!

ದಾವಣಗೆರೆ: ಕಾಂಗ್ರೆಸ್‌ಗೆ ಅಭ್ಯರ್ಥಿ ಆಯ್ಕೆ ಕಗ್ಗಂಟು; ಮುಸ್ಲಿಂ ನಾಯಕರಿಂದ ಬಂಡಾಯದ ಎಚ್ಚರಿಕೆ- ಶಾಮನೂರು ಕುಟುಂಬ ಪರ ಡಿಸಿಎಂ ಬ್ಯಾಟಿಂಗ್

ಮುಖ್ಯರಸ್ತೆ ಬೀದಿ ವ್ಯಾಪಾರಕ್ಕೆ ಅವಕಾಶವಿಲ್ಲ: ವಾರಾನುಗಟ್ಟಲೆ ರಸ್ತೆಯಲ್ಲಿ ನಿಲ್ಲಿಸಲಾದ ಹಳೇಯ ವಾಹನಗಳು ಡಂಪ್ ; ಡಿ.ಕೆ. ಶಿವಕುಮಾರ್

SCROLL FOR NEXT