ಕೊರೋನಾ ಭೀತಿ: ಮಂಗಳೂರು ಬಂದರಿನಲ್ಲಿ ತಡೆಹಿಡಿಯಲಾಗಿದ್ದ ಹಡಗು ಬಿಡುಗಡೆ 
ರಾಜ್ಯ

ಕೊರೋನಾ ಭೀತಿ: ಮಂಗಳೂರು ಬಂದರಿನಲ್ಲಿ ತಡೆಹಿಡಿಯಲಾಗಿದ್ದ ಹಡಗು ಬಿಡುಗಡೆ

ಕೊರೋನಾ ವೈರಸ್ ವಿಶ್ವದಾದ್ಯಂತ ಭೀತಿ ಹುಟ್ಟಿಸಿರುವ ಹಿನ್ನೆಲೆಯಲ್ಲಿ ಮಂಗಳೂರು ಬಂದರಿನಲ್ಲಿ ತಡೆಹಿಡಿಯಲಾಗಿದ್ದ ಮಸ್ಕತ್'ನ ಹಡಗನ್ನು ಇದೀಗ ಬಿಡುಗಡೆ ಮಾಡಲಾಗಿದೆ. 

ಬೆಂಗಳೂರು: ಕೊರೋನಾ ವೈರಸ್ ವಿಶ್ವದಾದ್ಯಂತ ಭೀತಿ ಹುಟ್ಟಿಸಿರುವ ಹಿನ್ನೆಲೆಯಲ್ಲಿ ಮಂಗಳೂರು ಬಂದರಿನಲ್ಲಿ ತಡೆಹಿಡಿಯಲಾಗಿದ್ದ ಮಸ್ಕತ್'ನ ಹಡಗನ್ನು ಇದೀಗ ಬಿಡುಗಡೆ ಮಾಡಲಾಗಿದೆ. 

ಫೆಬ್ರವರಿ 29 ರಂದು ದುಬೈನಿಂದ ಹೊರಟ ಎಂಎಸ್'ಸಿ ಲಿರಿಕಾ ಎಂಬ ಹೆಸರಿನ ಹಡಕು ಮಸ್ಕತ್, ಓಮನ್ ಮಾರ್ಗವಾಗಿ ಮಂಗಳೂರು ತಲುಪಿತ್ತು. ಶನಿವಾರ ಮಂಗಳೂರಿನ ಅಂತರಾಷ್ಟ್ರೀಯ ಬಂದರಿಗೆ ಪ್ರವೇಶ ಪಡೆಯಲು ಅನುಮತಿ ಕೇಳಿದ್ದು, ಆದರೆ, ಹಡಗಿನಲ್ಲಿ ಓರ್ವ ಸ್ಪಾನಿಶ್ ಹಾಗೂ  ಇಟಲಿ ದೇಶದ ಪ್ರಜೆಯಿದ್ದ ಕಾರಣಕ್ಕಾಗಿ ಹಗಡು ಬಂದರು ಪ್ರವೇಶ ಮಾಡಲು ಎನ್ಎಂಪಿಟಿ ಅಧಿಕಾರಿಗಳು ಅನುಮತಿ ನೀಡಿರಲಿಲ್ಲ. ಕೊರೋನಾ ಸೋಂಕು ಮುಂಜಾಗ್ರತಾ ಕ್ರಮವಾಗಿ ಈ ನಿರ್ಧಾರವನ್ನು ಅಧಿಕಾರಿಗಲು ತೆಗೆದುಕೊಂಡಿದ್ದರು. 

ಸಮುದ್ರದಲ್ಲಿ ಹಡಗನ್ನು ನಿಲ್ಲಿಸಲಾದ ಸ್ಥಳಕ್ಕೇ ತರಳಿದ ವೈದ್ಯರ ತಂಡ ಹಡಗಿನಲ್ಲಿದ್ದ ಐವರನ್ನು ಎನ್ಎಂಪಿಟಿಗೆ ಕರೆ ತಂದಿದೆ. ಆದರೆ, ಹಡಗು ಬಂದರು ಪ್ರವೇಶ ಮಾಡದಂತೆ ತಡೆಹಿಡಿಯಲಾಗಿದೆ. ಕೊರೋನಾ ಭೀತಿ ಹಿನ್ನೆಲೆಯಲ್ಲಿ ಮಾರ್ಚ್ 31ರ ವರೆಗೂ ಯಾವುದೇ ವಿದೇಶಿ ಹಡಗುಗಳಿಗೆ ಭಾರತದ ಬಂದರು ಪ್ರವೇಶವನ್ನು ನಿಷೇಧಿಸಲಾಗಿದೆ. 

ಇದೀಗ ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಬಳಿಕ ಹಡಗನ್ನು ಬಿಡುಗಡೆ ಮಾಡಲಾಗಿದ್ದು, ಕಳೆದ ರಾತ್ರಿಯೇ ಹಡಗು ಸಂಚಾರ ಆರಂಭಿಸಿದೆ ಎಂದು ವರದಿಗಳು ತಿಳಿಸಿವೆ. 

ಈ ನಡುವೆ ಕೊರೋನಾ ಭೀತಿಯಿಂದಾಗಿ ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮವನ್ನು ಬಂದ್ ಮಾಡಲಾಗಿದ್ದು, ಪ್ರತಿಷ್ಟಿತ ಬೊನ್ಸಾಯಿ ಉದ್ಯಾನವನ, ಶುಕವನ ಮತ್ತು ವಿಶ್ವವಸ್ತ್ರ ಮ್ಯೂಸಿಯಂಗಳೂ ಬಂದ್ ಆಗಿವೆ ಎಂದು ತಿಳಿದುಬಂದಿದೆ. 

ಕೊರೋನಾ ವೈರಸ್ ಹಂಪಿಯ ಹೋಳಿ ಹಬ್ಬದ ಸಂಭ್ರಮದ ಮೇಲೂ ಕೂಡ ಕರಿಛಾಯೆ ಮೂಡಿದಿಸಿದೆ. ಬಳ್ಳಾರಿ ಮತ್ತು ಹೊಸಪೇಟೆ ರೈಲ್ವೇ ವಿಲ್ದಾಣಗಳಲ್ಲಿ ಪ್ರವಾಸಿಗರ ಮೇಲೆ ಕಣ್ಗಾವಲಿರಿಸುವುದಾಗಿ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. 

ಇದರಂತೆ ಜನನಿಬಿಡ ಪ್ರದೇಶಗಳಲ್ಲಿ ಹೋಳಿ ಹಬ್ಬ ಆಚರಿಸದಂತೆ ಬೆಳಗಾವಿ ಪೊಲೀಸ್ ಆಯುಕ್ತ ಬಿ.ಎಸ್.ಲೋಕೇಶ್ ಕುಮಾರ್ ಅವರು ಜನರ ಬಳಿ ಮನವಿ ಮಾಡಿಕೊಂಡಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT