ರಾಜ್ಯ

ಕರಗ ಉತ್ಸವಕ್ಕೆ ಕೊರೋನಾ ಅಡ್ಡಿಯಾಗದು, ಸಂಪ್ರದಾಯದಂತೆ ಆಚರಣೆ; ಮೇಯರ್ ಗೌತಮ್ ಕುಮಾರ್

Manjula VN

ಬೆಂಗಳೂರು: ರಾಜ್ಯದಲ್ಲಿ ಕಾಣಿಸಿಕೊಂಡಿರುವ ಕೊರೋನಾ ವೈರಾಣು ಸೋಂಕು ಭೀತಿಯ ನಡುವೆಯೂ ಈ ವರ್ಷದ ಐತಿಹಾಸಿಕ ಕರಗ ಉತ್ಸವ ವಿಜೃಂಭಣೆಯಿಂದ ನಡೆಯಲಿದೆ ಎಂದು ಮೇಯರ್ ಗೌತಮ್ ಕುಮಾರ್ ಜೈನ್ ಹೇಳಿದ್ದಾರೆ.

ಅವರು ಕರಗ ಆಚರಣೆ ಸಮಿತಿಯವರು ಹಾಗೂ ಅಧಿಕಾರಿಗಳ ಜೊತೆ ಬುಧವಾರ ಸಭೆ ನಡೆಸಿದ ಅವರು, ಉತ್ಸವದ ವೇಳೆ ಕೊರೋನಾ ಸೋಂಕು ಹಾಗೂ ಕಾಲರಾ ಹಬ್ಬದಂತೆ ತಡೆಯಲು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಚರ್ಚೆ ನಡೆಸಿದರು.

ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಈ ವರ್ಷವೂ ಎಂದಿನಂತೆ ಕರಗ ನಡೆಯಲಿದೆ. ಕರಗ ಮಹೋತ್ಸವ ಒಂದು ಸಂಪ್ರದಾಯಿಕ, ಪಾರಂಪಾರಿಕವಾದ ಆಚರಣೆ. ಅದನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ. ಪಾಲಿಕೆ ವತಿಯಿಂದ ಇದಕ್ಕೆ ಎಲ್ಲಾ ಸಿದ್ದತೆಗಳನ್ನ ಮಾಡಿಕೊಳ್ಳಲಾಗುತ್ತಿದೆ ಎಂದರು.

SCROLL FOR NEXT