ಚರಣ್ ರೆಡ್ಡಿ 
ರಾಜ್ಯ

ಹಿರಿಯ ಐಪಿಎಸ್ ಅಧಿಕಾರಿ ಎಡಿಜಿಪಿ ಚರಣ್ ರೆಡ್ಡಿ ನಿಧನ

ಸಿಐಡಿ ಎಡಿಜಿಪಿಯಾಗಿದ್ದ ಹಿರಿಯ ಐಪಿಎಸ್​ ಅಧಿಕಾರಿ ಚರಣ್​​ ರೆಡ್ಡಿ(56) ಶುಕ್ರವಾರ ಬೆಳಗ್ಗೆ ನಿಧನರಾಗಿದ್ದಾರೆ.

ಬೆಂಗಳೂರು: ಸಿಐಡಿ ಎಡಿಜಿಪಿಯಾಗಿದ್ದ ಹಿರಿಯ ಐಪಿಎಸ್​ ಅಧಿಕಾರಿ ಚರಣ್​​ ರೆಡ್ಡಿ(56) ಶುಕ್ರವಾರ ಬೆಳಗ್ಗೆ ನಿಧನರಾಗಿದ್ದಾರೆ.

ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅವರು ಕಳೆದ ತಿಂಗಳು ಮಹಾವೀರ್ ಜೈನ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೇ ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.

ಆಂಧ್ರ ಪ್ರದೇಶದವರಾದ ಚರಣ್​ ರೆಡ್ಡಿ 1993ರ ಬ್ಯಾಚ್ ನ ಐಪಿಎಸ್ ಅಧಿಕಾರಿಯಾಗಿದ್ದಾರೆ. ಬೆಂಗಳೂರು ಹೆಚ್ಚುವರಿ ಪೊಲೀಸ್ ಆಯುಕ್ತರಾಗಿ ಸೇವೆ ಸಲ್ಲಿಸಿದ್ದ ಅವರು, ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಲೋಕಾಯುಕ್ತ ಎಸ್.ಐ.ಟಿ. ಮುಖ್ಯಸ್ಥರಾಗಿದ್ದರು. ಐದು ವರ್ಷಗಳ ಕಾಲ ಸಿಬಿಐನಲ್ಲೂ ಕೆಲಸ ಮಾಡಿದ್ದರು. ಸದ್ಯ ಸಿಐಡಿ ಎಡಿಜಿಪಿ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.

ಕೆಲ ಹೊತ್ತಿನಲ್ಲಿ ಸಂಜಯ ನಗರದ ಮನೆಗೆ ಅವರ ಪಾರ್ಥಿವ ಶರೀರ ರವಾನೆಯಾಗಲಿದ್ದು, ನಂತರ ಅಂತಿಮ ವಿಧಿವಿಧಾನಗಳು ನಡೆಯಲಿವೆ ಎಂದು ಅವರ ಕುಟುಂಬದ ಸದಸ್ಯರು ತಿಳಿಸಿದ್ದಾರೆ.

ಚರಣ್ ರೆಡ್ಡಿ ನಿಧನದ ಹಿನ್ನೆಲೆ ಇಂದು ವನಿತಾ ಸಹಾಯವಾಣಿ ವತಿಯಿಂದ ನಡೆಯಬೇಕಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮ ಮುಂದೂಡಿಕೆಯಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಭಾರತದ ಹಿತಾಸಕ್ತಿಯನ್ನು ಮಾರಾಟ ಮಾಡಬೇಡಿ: ರಾಹುಲ್ ಪ್ರಶ್ನೆಗೆ ಪ್ರಾಮಾಣಿಕ ಉತ್ತರ ನೀಡಿ: ಪ್ರಧಾನಿ ಮೋದಿಗೆ ಸಿದ್ದರಾಮಯ್ಯ ಆಗ್ರಹ

ಪವರ್​ಫುಲ್ ಮ್ಯಾನ್ ಯತೀಂದ್ರ ನಮ್ಮ ಹೈಕಮಾಂಡ್ -ಗಣಿಗ ರವಿ: ಖರ್ಗೆ ಒಗ್ಗಟ್ಟಿನ ಪಾಠಕ್ಕೂ ಡೋಂಟ್ ಕೇರ್; ಇಮ್ಮಡಿಯಾದ ಕಾಂಗ್ರೆಸ್ ಬಣ ಬಡಿದಾಟ!

T20 ವಿಶ್ವಕಪ್ 2026: ಮುಜುಗರ ತಪ್ಪಿಸಿಕೊಳ್ಳಲು ಪಂದ್ಯ ಮುಕ್ತಾಯಕ್ಕೂ ಮೊದಲೇ ಮೈದಾನದಿಂದ ಕಾಲ್ಕಿತ್ತ Mohsin Naqvi!

'2048 ಬಂದ್ರೂ ಡಿಕೆ ಶಿವಕುಮಾರ್ ಸಿಎಂ ಆಗಲ್ಲ: ಏಕಂದ್ರೆ ನಾವು ಬಿಡಲ್ಲ; ಇನ್ನು ಮುಂದೆ ದೇಶವೂ ನಮ್ಮದೇ, ರಾಜ್ಯವೂ ನಮ್ಮದೇ'

4 ಕೋಟಿ ರೂ. ಮೌಲ್ಯದ ಗ್ರಾಹಕರ ಚಿನ್ನಾಭರಣ ಕದ್ದು, ಆನ್‌ಲೈನ್ ಬೆಟ್ಟಿಂಗ್‌: ಬ್ಯಾಂಕ್ ಮ್ಯಾನೇಜರ್ ಬಂಧನ, ಸಿಕ್ಕಿಬಿದ್ದಿದ್ದೇ ರೋಚಕ!

SCROLL FOR NEXT