ರಾಜ್ಯ

ಹಂಪಿಗೆ ಒಂದು ವಾರ ಪ್ರವಾಸಿಗರ ನಿಷೇಧ

Srinivas Rao BV

ಬಳ್ಳಾರಿ: ಕೊರೊನೊ ನಿಯಂತ್ರಣ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲಾಡಳಿತವು ಐತಿಹಾಸಿಕ ಹಂಪಿಗೆ ಪ್ರವಾಸಿಗರ ಭೇಟಿಯನ್ನು ನಾಳೆಯಿಂದ ಒಂದು ವಾರಗಳ ಕಾಲ ನಿಷೇಧಿಸಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಸ್ಪಷ್ಟಪಡಿಸಿದ್ದಾರೆ. 

ಅವರಿಂದು ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ, ಹಂಪಿಗೆ ವಿವಿಧ ದೇಶ ಮತ್ತು ರಾಜ್ಯಗಳಿಂದ ಪ್ರವಾಸಿಗರು ಆಗಮಿಸುತ್ತಿದ್ದು, ಅವರಿಂದ ಕೊರೊನೊ ಸೋಂಕು ಹರಡುವ ಸಾಧ್ಯತೆ ಹೆಚ್ಚು ಇರುವುದರಿಂದಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.
  
ಹಂಪಿಯಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಎಂದಿನಂತೆ ವಿರುಪಾಕ್ಷ ಮೊದಲಾದ ದೇವಸ್ಥಾನಗಳಲ್ಲಿ ನಡೆಯಲಿವೆ. ಆದರೆ, ದೇವಸ್ಥಾನ ಮತ್ತು ಶಿಲ್ಪ ಕಲಾ ಸ್ಮಾರಕಗಳ ವೀಕ್ಷಣಗೆ ಅವಕಾಶ  ನೀಡುವುದಿಲ್ಲ. ಹೊರಗಿನಿಂದ ಬರುವ ಜನರಿಗೂ ಹಂಪಿ ಪ್ರವೇಶ ನಿರಾಕರಿಸಲಾಗಿದೆ ಎಂದೂ ಹೇಳಿದರು.

SCROLL FOR NEXT