ಸಂಗ್ರಹ ಚಿತ್ರ 
ರಾಜ್ಯ

ಕೊರೋನಾ ಎಫೆಕ್ಟ್: ಕಳ್ಳರಿಗೂ ಭೀತಿ ಹುಟ್ಟಿಸಿದ ವೈರಸ್, ನಗರದಲ್ಲಿ ಅಪರಾಧ ಸಂಖ್ಯೆಗಳು ಗಣನೀಯ ಇಳಿಕೆ

ಇಡೀ ದೇಶವನ್ನೇ ಬಚ್ಚಿ ಬೀಳಿಸುತ್ತಿರುವ ಕೊರೋನಾ ವೈರಸ್'ಗೆ ಇದೀಗ ಸರಗಳ್ಳತನ, ದರೋಡೆ, ಕೊಲೆಯಂತಹ ಅಪರಾಧ ಕೃತ್ಯಗಳಲ್ಲಿ ಪಾಲ್ಗೊಳ್ಳುತ್ತಿದ್ದ ಕಳ್ಳರನ್ನೂ ಭೀತಿಗೊಳಗಾಗವಂತೆ ಮಾಡಿದೆ. ವೈರಸ್ ರಾಜ್ಯದಲ್ಲಿ ಕಾಲಿಡುತ್ತಿದ್ದಂತೆಯೇ ಹೆದರಿರುವ ಕಳ್ಳರು, ದರೋಡೆಕೋರರು ಮನೆಗಳಲ್ಲಿಯೇ ಕುಳಿತಂತೆ ಕಂಡುಬಂದಿದ್ದು...

ಬೆಂಗಳೂರು: ಇಡೀ ದೇಶವನ್ನೇ ಬಚ್ಚಿ ಬೀಳಿಸುತ್ತಿರುವ ಕೊರೋನಾ ವೈರಸ್'ಗೆ ಇದೀಗ ಸರಗಳ್ಳತನ, ದರೋಡೆ, ಕೊಲೆಯಂತಹ ಅಪರಾಧ ಕೃತ್ಯಗಳಲ್ಲಿ ಪಾಲ್ಗೊಳ್ಳುತ್ತಿದ್ದ ಕಳ್ಳರನ್ನೂ ಭೀತಿಗೊಳಗಾಗವಂತೆ ಮಾಡಿದೆ. ವೈರಸ್ ರಾಜ್ಯದಲ್ಲಿ ಕಾಲಿಡುತ್ತಿದ್ದಂತೆಯೇ ಹೆದರಿರುವ ಕಳ್ಳರು, ದರೋಡೆಕೋರರು ಮನೆಗಳಲ್ಲಿಯೇ ಕುಳಿತಂತೆ ಕಂಡುಬಂದಿದ್ದು, ಇದರ ಪರಿಣಾಮ ವೈರಸ್ ಬೆಳಕಿಗೆ ಬಂದ ಬಳಿಕ ನಗರದಲ್ಲಿ ಅಪರಾಧ ಕೃತ್ಯಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ ಎಂದು ವರದಿಗಳು ತಿಳಿಸಿವೆ. 

ಕೆಲ ದಿನಗಳಿಂದ ಸಳ್ಳತನ, ದರೋಡೆ ಹಾಗೂ ವಾಹನ ಕಳ್ಳತನದಂತಹ ಪ್ರಕರಣಗಳು ಗಣನೀಯವಾಗಿ ಕಡಿಮೆಯಾಗಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಪ್ರಮುಖವಾಗಿ ಬೆಂಗಳೂರು ನಗರದಲ್ಲಿ ಶೇ.25ರಷ್ಟು ದರೋಡ ಪ್ರಕರಣಗಳು ಕಡಿಮೆಯಾಗಿವೆ ಎಂದು ತಿಳಿಸಿದ್ದಾರೆ. 

ವೈರಸ್ ನಿಂದಾಗಿ ಜನರು ಅನಿವಾರ್ಯವಾಗಿಯೇ ಮನೆಯಲ್ಲಿರಬೇಕಾದ ಪರಿಸ್ಥಿತಿ ಎದುರಾಗಿರುವ ಹಿನ್ನೆಲೆಯಲ್ಲಿ ಕಳ್ಳರೂ ಕೂಡ ತಮ್ಮ ಯೋಜನೆಗಳನ್ನು ಮುಂದೂಡಿ. ಮನೆಯಲ್ಲಿಯೇ ಇರುವಂತಾಗಿದೆ ಎಂದಿದ್ದಾರೆ. 

ಕೇವಲ ಕೊರೋನಾ ವೈರಸ್ ನಿಂದಲೇ ಅಪರಾಧ ಕೃತ್ಯಗಳು ಕಡಿಮೆಯಾಗಿವೆ ಎಂದು ಹೇಳಲು ಸಾಧ್ಯವಿಲ್ಲ. ಇದಕ್ಕೆ ಬೇರೆ ಕಾರಣಗಳೂ ಕೂಡ ಇರಬಹುದು. ಮನೆಗಳಿಂದ ಜನರು ಹೊರಗ ಬರುವುದು ಕಡಿಮೆಯಾದರೆ, ಸಾಮಾನ್ಯವಾಗಿಯೇ ದರೋಡೆ ಪ್ರಕರಣಗಳೂ ಕೂಡ ಕಡಿಮೆಯಾಗುತ್ತವೆ. ಮಹಿಳೆಯರು ಕೂಡ ಮನೆಯಿಂದ ಅತ್ಯಂತ ವಿರಳವಾಗಿ ಹೊರಗೆ ಬರುತ್ತಿದ್ದರೆ. ಕಳೆದೆರಡು ವಾರಗಳಿಂದ ಸರಗಳ್ಳತನ ಪ್ರಕರಣಗಳು ವರದಿಯಾಗಿಲ್ಲ ಎಂದು ಮತ್ತೊಬ್ಬ ಪೊಲೀಸ್ ಅಧಿಕಾರಿ ಹೇಳಿದ್ದಾರೆ. 

ಕಳ್ಳರು ಹಾಗೂ ದರೋಡೆಕೋರರಿಗೂ ವೈರಸ್ ಭೀತಿ ಹುಟ್ಟಿಸಿದೆ. ವೈರಸ್ ಹಬ್ಬುತ್ತಿರುವುದರಿಂದ ಕಳ್ಳತನಕ್ಕಿದು ಸಕಾಲವಲ್ಲ ಎಂಬುದು ಅವರಿಗೂ ಗೊತ್ತಿದೆ ಎಂದು ಡಿಸಿಪಿ ವಿಭಾಗದ ಪೊಲೀಸ್ ಒಬ್ಬರು ತಿಳಿಸಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

ಬಿಕಿನಿ ಧರಿಸಿರುವ ಮಹಿಳೆಯರ ಜೊತೆಗೆ ಸ್ಟೀಫನ್ ಹಾಕಿಂಗ್! Epstein ಫೈಲ್ಸ್ ನಲ್ಲಿ ಪೋಟೋ ಬಿಡುಗಡೆ

'The Kerala Story 2: Goes Beyond' ಬಿಡುಗಡೆಗೆ ಕೇರಳ ಹೈಕೋರ್ಟ್ ತಡೆ

ಅಪ್ರಾಪ್ತ ಬಾಲಕಿಯೊಂದಿಗೆ ಅನುಚಿತ ವರ್ತನೆ: ಪೋಕ್ಸೋ ಕೇಸ್ ದಾಖಲಾಗುತ್ತಿದಂತೆ ಮಲ್ಲಿಕಾರ್ಜುನ ಮುತ್ಯಾ video ರಿಲೀಸ್!

ನೀವು ಪಡೆದ IMF ಬೇಲ್ಔಟ್‌ಗಿಂತ 2 ಪಟ್ಟು ಹೆಚ್ಚು; ಜಾಗಬಿಟ್ಟು ಹೋಗುವುದೇ ಪಾಕ್​ಗಿರುವ ಒಂದೇ ಆಯ್ಕೆ: ವಿಶ್ವಸಂಸ್ಥೆಯಲ್ಲಿ ಭಾರತ ವಾಗ್ದಾಳಿ!

SCROLL FOR NEXT