ರಾಜ್ಯ

ಜನತಾ ಕರ್ಫ್ಯೂಗೆ ಅಭೂತಪೂರ್ವ ಬೆಂಬಲ: ಬಿಕೋ ಎನ್ನುತ್ತಿದ್ದ ರಸ್ತೆಗಳು, ಸ್ಮಾರಕಗಳ ಮುಂದೆ ಸೆಲ್ಫೀ ತೆಗೆದುಕೊಂಡ ಜನತೆ

Manjula VN

ಮೈಸೂರು: ಕೊರೋನಾ ವೈರಸ್'ನ್ನು ಮಟ್ಟ ಹಾಕಲು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕರೆ ನೀಡಿದ್ದ ಜನತಾ ಕರ್ಫ್ಯೂಗೆ ರಾಜ್ಯದಾದ್ಯಂತ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದ್ದು, ಸದಾಕಾಲ ಜನರಿಂದ ಗಿಜುಗುಡುತ್ತಿದ್ದ ಮೈಸೂರಿನ ಬಹುತೇಕ ರಸ್ತೆಗಳು ಹಾಗೂ ಸ್ಮಾರಕಗಳು ಭಾನುವಾರ ಬಿಕೋ ಎನ್ನುತ್ತಿದ್ದವು. 

ಜನರಿಲ್ಲದೆ ಬಿಕೋ ಎನ್ನುತ್ತಿದ್ದ ರಸ್ತೆಗಳು ಹಾಗೂ ಸ್ಮಾರಕಗಳನ್ನು ಆಶ್ಚರ್ಯಕರ ರೀತಿಯಲ್ಲಿ ನೋಡಿದ ಕೆಲವರು, ಸಿಕ್ಕಿದ್ದೇ ಚಾನ್ಸ್ ಎಂಬಂತೆ ಸೆಲ್ಫೀ ಕ್ಲಿಕ್ಕಿಸಿಕೊಂಡ ದೃಶ್ಯಗಳು ಕಂಡು ಬಂದಿತ್ತು. 

ಸಾಮಾನ್ಯವಾಗಿ ಮೈಸೂರಿನ ಕೆ.ಆರ್. ಸರ್ಕಲ್, ಚಾಮರಾಜ ಸರ್ಕಲ್ ಹಾಗೂ ದೇವರಾಜ ಮಾರುಕಟ್ಟೆ ಪ್ರದೇಶಗಳಲ್ಲಿ ಜನದಟ್ಟಣೆ ಹೆಚ್ಚಾಗಿಯೇ ಇರುತ್ತದೆ. ಈ ರಸ್ತೆಗಳಲ್ಲಿ ನಡೆದಾಡವುದೂ ಕೆಲಮೊಮ್ಮೆ ಕಷ್ಟಕರವಾಗಿರುತ್ತದೆ. ಆದರೆ, ಜನತಾ ಕರ್ಫ್ಯೂ ಹಿನ್ನೆಲಯಲ್ಲಿ ನಿನ್ನೆ ಈ ರಸ್ತೆಗಳು ಬಿಕೋ ಎನ್ನುತ್ತಿದ್ದವರು. ಹೀಗಾಗಿ ರಸ್ತೆಗಳಲ್ಲಿ ವಾಹನದಲ್ಲಿ ತೆರಳುತ್ತಿದ್ದ ಜನರು ಸೆಲ್ಫೀ ಕ್ಲಿಕ್ಕಿಸಿಕೊಳ್ಳಲು ಆರಂಭಿಸಿದ್ದರು. 

ಇದು ಅತ್ಯಂತ ವಿರಳ ಅವಕಾಶವೆಂದೇ ಹೇಳಬಹುದು. ಇಂತಹ ಐತಿಹಾಸಿಕ ನಗರದಲ್ಲಿ ಸದಾಕಾಲ ಜನದಟ್ಟಣೆ ಇಜ್ಜೇ ಇರುತ್ತದೆ. ಸ್ಮಾರಕಗಳಲ್ಲಿ ಯಾವಾಗಲೂ ವಿದೇಶಿ ಪ್ರವಾಸಿಗರು ಇದ್ದೇ ಇರುತ್ತದೆ. ಇಲ್ಲಿ ಫೋಟೋ ತೆಗೆದುಕೊಳ್ಳುವುದೇ ಹರಸಾಹಸವಾಗಿರುತ್ತದೆ. ಇದೀಗ ನನಗೆ ಅವಕಾಶ ಸಿಕ್ಕಿದ್ದು, ಫೋಟೋ ತೆಗೆದುಕೊಳ್ಳುತ್ತಿದ್ದೇನೆಂದು ಎಸ್ಎಸ್ಎಲ್'ಸಿ ವಿದ್ಯಾರ್ಥಿಯೊಬ್ಬ ಹೇಳಿದ್ದಾರೆ. 

ಇದರಂತೆ ಖಾಲಿಯಿದ್ದ ರಸ್ತೆಗೆ ದ್ವಿಚಕ್ರ ವಾಹನದಲ್ಲಿ ತಮ್ಮ ಇಬ್ಬರು ಮಕ್ಕಳೊಂದಿಗೆ ಬಂದಿರುವ ವ್ಯಕ್ತಿಯೊಬ್ಬ ಫೋಟೋ ತೆಗೆದುಕೊಳ್ಳಲು ಮುಂದಾಗಿದ್ದು, ಈ ವೇಳೆ ಸ್ಥಳದಲ್ಲಿ ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸ್ ಸಿಬ್ಬಂದಿಯೊಬ್ಬರು ಎಚ್ಚರಿಕೆ ನೀಡಿ, ಮನೆಗೆ ಕಳುಹಿಸಿದ ಘಟನೆಗಳೂ ಕೂಡ ಕಂಡು ಬಂದಿತ್ತು.

SCROLL FOR NEXT