ರಾಜ್ಯ

ಗಂಗಾವತಿ: ಮೂವರು ಅಂತರಾಜ್ಯ ಕಳ್ಳರ ಬಂಧನ, 12 ಲಕ್ಷ ಮೌಲ್ಯದ ಬೆಳ್ಳಿ-ಬಂಗಾರ ವಶಕ್ಕೆ

Srinivas Rao BV

ಗಂಗಾವತಿ: ನಗರದ ನಾನಾ ಕಡೆಗಳಲ್ಲಿ ಇತ್ತೀಚೆಗೆ ನಡೆದ ಐದು ಮನೆಗಳ ಕಳ್ಳತನಕ್ಕೆ ಸಂಬಂಧಿಸಿದಂತೆ ಮೂವ್ವರು ಅಂತರಾಜ್ಯ ಕಳ್ಳರನ್ನು ಬಂಧಿಸಿರುವ ಶಹರ ಪೊಲೀಸರು, ಅವರಿಂದ 12 ಲಕ್ಷ ಮೌಲ್ಯದ ಬಂಗಾರ ಮತ್ತು ಬೆಳ್ಳಿಯ ಸಮಾಗ್ರಿ ವಶಕ್ಕೆ ಪಡೆದಿದ್ದಾರೆ. 

ಬಂಧಿತ ಆರೋಪಿಗಳನ್ನು ಮಹಾರಾಷ್ಟ್ರ ಸೊಲ್ಲಾಪರದ ಅಭಿಜಿತ್ ಜಾಧವ ಮೌಲಾಲಿಜಾಧವ, ಸಚೀನ್ ಗಾಯಕ್ವಾಡ್ ಸಂಭಾಜಿ ಗಾಯಾಕ್ವಾಡ್ ಹಾಗೂ ಹುಸೇನ್ ಗಾಯಕ್ವಾಡ್ ಶಿವಾಜಿ ಗಾಯಕ್ವಾಡ್ ಎಂದು ಗುರುತಿಸಲಾಗಿದೆ.

ಗಂಗಾವತಿಯ ಜಯನಗರ, ಸತ್ಯನಾರಾಯಣ ಪೇಟೆ, ವಡ್ಡರಹಟ್ಟಿಯ ವೆಂಕಟೇಶ್ವರ ಕಾಲೋನಿಗಳಲ್ಲಿ ಕಳೆದ ಜನವರಿ ಮತ್ತು ಫೆಬ್ರವರಿ ತಿಂಗಳಲ್ಲಿ ನಡೆದ ಸರಣಿ ಕಳ್ಳತನ ಪ್ರಕರಣಗಳಲ್ಲಿ ಈ ಕಳ್ಳರು ನಗನಾಣ್ಯ ಕಳ್ಳತನ ಮಾಡಿ ಜನರಲ್ಲಿ ಭೀತಿ ಉಂಟು ಮಾಡಿದ್ದರು.

SCROLL FOR NEXT