ರಾಜ್ಯ

ಇಂದಿನಿಂದ ಬೆಂಗಳೂರಿನಿಂದ ಯಾವುದೇ ಸ್ಥಳಗಳಿಗೆ ಬಸ್ ಓಡಾಟವಿಲ್ಲ: ಕೆಎಸ್ ಆರ್ ಟಿಸಿ

Sumana Upadhyaya

ಬೆಂಗಳೂರು: ಕಳೆದ ಆರು ದಿನಗಳಿಂದ ಬೆಂಗಳೂರು ಹಾಗೂ ರಾಜ್ಯದ ವಿವಿಧ ವಿಭಾಗಗಳಿಂದ ಅಂದಾಜು 1 ಲಕ್ಷದ 8 ಸಾವಿರದ 300 ಕಾರ್ಮಿಕರನ್ನು ಅವರವರ ಊರುಗಳಿಗೆ ಸ್ಥಳಾಂತರ ಮಾಡಲಾಗಿದೆ. ಅದಕ್ಕಾಗಿ 3 ಸಾವಿರದ 610 ಬಸ್ಸುಗಳನ್ನು ಕಾರ್ಯಾಚರಣೆ ಮಾಡಲಾಗಿದೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ತಿಳಿಸಿದೆ.

ನಿನ್ನೆ ಬೆಳಗ್ಗೆ 8 ಗಂಟೆಯಿಂದ ಸಾಯಂಕಾಲ 6.40ರವರೆಗೆ ಒಟ್ಟು 185 ಬಸ್ಸುಗಳನ್ನು ರಾಜ್ಯದ 43 ಸ್ಥಳಗಳಿಗೆ ಕಾರ್ಯಚರಣೆ ಮಾಡಲಾಗಿರುತ್ತದೆ.ಬೆಂಗಳೂರು ನಗರ ಕೆಂಪು ವಲಯದಲ್ಲಿರುವುದರಿಂದ ಇಂದಿನಿಂದ ಯಾವುದೇ ಬಸ್ಸುಗಳು ನಗರದಿಂದ ಯಾವುದೇ ಊರುಗಳಿಗೆ ಕಾರ್ಯಚರಣೆ ನಡೆಸುವುದಿಲ್ಲ. ದರ ವಿಧಿಸಿ ಕಾರ್ಯಾಚರಣೆ ಮಾಡುವ ಬಸ್ಸುಗಳು ಸಹ ಸಂಚಾರ ಮಾಡುವುದಿಲ್ಲ ಎಂದು ಕೆಎಸ್ ಆರ್ ಟಿಸಿ ಸ್ಪಷ್ಟಪಡಿಸಿದೆ.

SCROLL FOR NEXT