ರಾಜ್ಯ

ಕೋಲಾರ: ಜೆಡಿಎಸ್ ನಗರಸಭೆ ಸದಸ್ಯನ ಮೇಲೆ ಹಲ್ಲೆ

Nagaraja AB

ಕೋಲಾರ: ನಗರಸಭಾ ಸದಸ್ಯನ ಮೇಲೆ ಲಾಂಗ್‌ನಿಂದ ಹಲ್ಲೆ ಮಾಡಿರುವ ಘಟನೆ ಕೋಲಾರ ಜಿಲ್ಲೆಯ ಮುಳಬಾಗಿಲು ಪಟ್ಟಣದಲ್ಲಿ‌ ಜರುಗಿದೆ.

ಭಾನುವಾರ ರಾತ್ರಿ ಜೆಡಿಎಸ್ ಮುಖಂಡರ ಎರಡು ಬಣಗಳ ಮಧ್ಯೆ ಗಲಾಟೆ, ಕೊಲೆ ಯತ್ನ ನಡೆದಿದ್ದು, ಮಾರಣಾಂತಿಕ ಹಲ್ಲೆಯಿಂದ ನಾಗರಾಜ್ ಸ್ಥಿತಿ ಗಂಭೀರವಾಗಿದೆ.

ಮಾರಣಾಂತಿಕ ಹಲ್ಲೆಗೊಳಗಾದ ನಾಗರಾಜ್ ಮುಳಬಾಗಿಲು ನಗರಸಭೆ ಜೆಡಿಎಸ್ ಸದಸ್ಯನಾಗಿದ್ದು, ತಾಲೂಕು ಜೆಡಿಎಸ್ ಅಧ್ಯಕ್ಷ್ಯ ಕಾಡೇನಳ್ಳಿ ನಾಗರಾಜ್ ಬೆಂಬಲಿಗರಿಂದ ಹಲ್ಲೆ ನಡೆಸಿದ್ದಾರೆಂಬ ಆರೋಪ ಕೇಳಿಬಂದಿದೆ.

ಆಹಾರ ವಿತರಣೆ ಕಾರ್ಯಕ್ರಮ ಸಂಬಂಧ ಚರ್ಚೆ ಮಾಡುವಾಗ ಪರಸ್ಪರ ಗಲಾಟೆ ನಡೆದಿದ್ದು, ಗಂಭೀರವಾಗಿ ಗಾಯಗೊಳಾಗಿರುವ ನಾಗರಾಜ್ ರನ್ನು ಬೆಂಗಳೂರಿನ ಹಾಸ್ ಮ್ಯಾಟ್ ಆಸ್ಪತ್ರೆಗೆ ದಾಖಲಿಸಲಾಗಿದೆ.ಮುಳಬಾಗಿಲು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ.

SCROLL FOR NEXT