ರಾಜ್ಯ

ಶಿವಮೊಗ್ಗ: ತಾಯಿಯ ಶವದೊಂದಿಗೆ 5 ದಿನ ಕಳೆದ ಮಗಳು, ಅಸಹಾಯಕ ಕಣ್ಣೀರು!

Vishwanath S

ಶಿವಮೊಗ್ಗ: ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಅನ್ನ ಆಹಾರವಿಲ್ಲದೆ ಜನರು, ಪ್ರಾಣಿಗಳು ಸಂಕಷ್ಟಕ್ಕೆ ಸಿಲುಕಿತ್ತು. ಇನ್ನು ಶಿವಮೊಗ್ಗದಲ್ಲಿ ತಾಯಿ ತೀರಿಕೊಂಡು ಐದು ದಿನ ಕಳೆದರೂ ಭಯದಿಂದ ಮಗಳು ಐದು ದಿನ ಶವದೊಂದಿಗೆ ಕಾಲ ಕಳೆದಿದ್ದಾಳೆ. 

ಬಸವನಗುಡಿಯ ನಿವಾಸಿ ನಿವೃತ್ತ ಶಿಕ್ಷಕಿಯಾಗಿದ್ದ ರಾಜೇಶ್ವರಿ ಎಂಬುವರು ಮೃತಪಟ್ಟಿದ್ದರು. ಮಾನಸಿಕ ಅಸ್ವಸ್ಥೆಯಾಗಿದ್ದ ಮಗಳು ಶಾಂಭವಿಗೆ ಮುಂದೆ ಏನು ಮಾಡಬೇಕು ಎಂದು ತೋಚದೆ ತಾಯಿಯ ಶವದೊಂದಿಗೆ ಕಾಲ ಕಳೆದಿದ್ದಾಳೆ. 

ಮೃತ ರಾಜೇಶ್ವರಿ ಅವರು ಕ್ಯಾನ್ಸರ್ ನಿಂದ ಬಳಲುತ್ತಿದ್ದು ಅತಿಯಾಗಿ ಔಷದಿ ಸೇವಿಸಿದ್ದರಿಂದ ಮೃತಪಟ್ಟಿದ್ದಾರೆ ಎಂದು ಶಂಕಿಸಿದ್ದಾರೆ. 

ಶವ ಕೊಳೆತ ವಾಸನೆ ಬಂದಿದ್ದರಿಂದ ಅಕ್ಕಪಕ್ಕದ ಮನೆಯವರು ಬಂದು ನೋಡಿದ್ದಾರೆ. ಬಳಿಕ ಜಯನಗರ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಬಂದ ಪೊಲೀಸರು ಶವವನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಿದ್ದಾರೆ. 

SCROLL FOR NEXT