ರಾಜ್ಯ

ಸತೀಶ್ ಜಾರಕಿಹೊಳಿ ಸಹಾಯ ಹಸ್ತ: 1 ಸಾವಿರ ಮಂದಿಗೆ ಅತಿಥಿ ಗೃಹದಲ್ಲಿ ಉಳಿದುಕೊಳ್ಳಲು ವ್ಯವಸ್ಥೆ

Shilpa D

ಬೆಳಗಾವಿ: ಯಮನಕರಡಿ ಶಾಸಕ ಸತೀಶ್ ಜಾರಕಿಹೊಳಿ ವಲಸೆ ಕಾರ್ಮಿಕರ ಸಹಾಯಕ್ಕೆ ಮುಂದಾಗಿದ್ದಾರೆ. ಕಳೆದ ಮೂರು ದಿನಗಳ ಹಿಂದೆ ಮುಂಬಯಿಯಿಂದ  ಬೆಳಗಾವಿಗೆ ಆಗಮಿಸಿದ 1 ಸಾವಿರ ವಲಸೆ ಕಾರ್ಮಿಕರನ್ನು ಮಹಾರಾಷ್ಟ್ರ -ಕರ್ನಾಟಕ ಗಡಿ ಭಾಗದಲ್ಲಿರುವ ಕುನಗೋಳಿಯಲ್ಲಿ ಸ್ವಾಗತಿಸಿದ ಸತೀಶ್, ಅವರಿಗೆಲ್ಲಾ ತಮ್ಮ ಅತಿಥಿ ಗೃಹದಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದ್ದಾರೆ.

ತಮ್ಮ ಕ್ಷೇತ್ರದ ವಲಸೆ ಕಾರ್ಮಿಕರಿಗೆ ಕ್ವಾರಂಟೈನ್ ಮಾಡಲು ಸರ್ಕಾರದಿಂದ ಅನುಮತಿ ಪಡೆದು, ತಮ್ಮ ವಾಹನದಲ್ಲೇ ಅವರನ್ನೆಲ್ಲಾ ಅತಿಥಿ ಗೃಹಕ್ಕೆ ಕರೆತಂದಿದ್ದಾರೆ, ಅಲ್ಲಿರುವ ಎಲ್ಲಾ ವಲಸೆ ಕಾರ್ಮಿಕರಿಗೂ ಮೂರು ಹೊತ್ತಿನ ಊಟದ ವ್ಯವಸ್ಥೆ ಮಾಡಿದ್ದು, ಊಟಕ್ಕೆ ಮತ್ತು ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ ಎಂದು ಸತೀಶ್ ಜಾರಕಿ ಹೊಳಿ ಸ್ನೇಹಿತ ಮುನ್ನಾ ಭಗವಾನ್ ತಿಳಿಸಿದ್ದಾರೆ.

SCROLL FOR NEXT