ಜಿರಾಫೆ ಮರಿ 
ರಾಜ್ಯ

ಕೊರೋನಾ ಭೀತಿ ನಡುವಲ್ಲೇ ಜಿರಾಫೆ ಮರಿ ದತ್ತು ಪಡೆದ ವಿಂಗ್ ಕಮಾಂಡರ್ ಜಿಬಿ ಅತ್ರಿ

ಸಾಕು ಪ್ರಾಣಿಗಳು, ಬೀದಿ ನಾಯಿಗಳನ್ನು ತೆಗೆದುಕೊಳ್ಳುವುದು ಸಾಮಾನ್ಯ ಆದರೆ, ವಿಂಗ್ ಕಮಾಂಡರ್ (ನಿವೃತ್ತ) ಜಿಬಿ ಅತ್ರಿಯವರು ವಿಭಿನ್ನ ರೀತಿಯಲ್ಲಿ ಜಿರಾಫೆ ಮರಿಯೊಂದನ್ನು ದತ್ತು ತೆಗೆದುಕೊಳ್ಳುವ ಮೂಲಕ ಪ್ರಶಂಸೆಗೆ ಪಾತ್ರರಾಗಿದ್ದಾರೆ. 

ಬೆಂಗಳೂರು: ಸಾಕು ಪ್ರಾಣಿಗಳು, ಬೀದಿ ನಾಯಿಗಳನ್ನು ತೆಗೆದುಕೊಳ್ಳುವುದು ಸಾಮಾನ್ಯ ಆದರೆ, ವಿಂಗ್ ಕಮಾಂಡರ್ (ನಿವೃತ್ತ) ಜಿಬಿ ಅತ್ರಿಯವರು ವಿಭಿನ್ನ ರೀತಿಯಲ್ಲಿ ಜಿರಾಫೆ ಮರಿಯೊಂದನ್ನು ದತ್ತು ತೆಗೆದುಕೊಳ್ಳುವ ಮೂಲಕ ಪ್ರಶಂಸೆಗೆ ಪಾತ್ರರಾಗಿದ್ದಾರೆ. 

18 ತಿಂಗಳ ಜಿರಾಫೆ ಯದುನಂದನ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದದಲ್ಲಿದ್ದು, ಈ ಜಿರಾಫೆಯನ್ನು ಅತ್ರಿಯವರು ದತ್ತು ತೆಗೆದುಕೊಂಡಿದ್ದಾರೆ. 

ನಾನು ಮಾರಕ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದು, ಈಗಾಗಲೇ 19 ಸುತ್ತಿನ ಕೀಮೋಥೆರಪಿಯನ್ನು ಪಡೆದುಕೊಂಡಿದ್ದೇನೆ. ಮತ್ತೊಂದು ಸುತ್ತಿನ ಚಿಕಿತ್ಸೆ ಪಡೆಯಬೇಕಿದೆ. ನನ್ನ ಕೊನೆಯ ದಿನಗಳ ಏಣಿಕೆ ಆರಂಬವಾಗಿದೆ. ಬಾಯಿ ಇಲ್ಲದ ಪ್ರಾಣಿಗಳಿಗಾಗಿ ಏನನ್ನಾದರೂ ಮಾಡಬೇಕೆಂದು ಕೊಂಡಿದ್ದೆ. ನನ್ನ 2 ವರ್ಷದ ಮೊಮ್ಮಗನೇ ಜಿರಾಫೆ ದತ್ತು ತೆಗೆದುಕೊಳ್ಳಲು ಪ್ರೇರಣೆಯಾಗಿದ್ದ. ಈ ಬಗ್ಗೆ ನಾನು ಕುಟುಂಬ ಸದಸ್ಯರೊಂದಿಗೆ ಮಾತನಾಡಿದ್ದೆ. ಎಲ್ಲರೂ ಒಪ್ಪಿಗೆ ನೀಡಿದ್ದರು. ಕುಟುಂಬದ ಸಾಕಷ್ಟು ಮಂದಿ ಹುಲಿ ಹಾಗೂ ಸಿಂಹಕ್ಕೆ ಮತ ನೀಡಿದ್ದರು. ಆದರೆ, ನನ್ನ ಮೊಮ್ಮಗ ಜಿರಾಫೆ ಪರವಾಗಿ ಮತ ನೀಡಿದ್ದ. ದುರ್ಬಲವೆಂದು ಘೋಷಿಸಲ್ಪಟ್ಟ ಒಂದು ಜಾತಿಯ ಪ್ರಾಣಿ ಇದಾಗಿದ್ದು, ಅವುಗಳ ರಕ್ಷಣೆ ಅಗತ್ಯವಿದೆ ಎಂಬುದು ಈ ವೇಳೆ ನನಗೆ ಅರ್ಥವಾಯಿತು. ಇಂತಹ ಪ್ರಾಣಿಗಳಿಗೆ ಸಹಾಯ ಮಾಡಬೇಕೆಂದು ನಿರ್ಧರಿಸಿದೆ. ಹೀಗಾಗಿ ಜಿರಾಫೆ ಮರಿ ದತ್ತು ಪಡೆದು, ಅದರ ಸಂರಕ್ಷಣೆಗ ರೂ.1 ಲಕ್ಷ ನೀಡಲು ಮುಂದಾದೆ ಎಂದು ಅತ್ರಿ ತಿಳಿಸಿದ್ದಾರೆ. 

ಇದು ನಮ್ಮ ಮದು, ನಾನು ಬದುಕಿರುವವರೆಗೂ ಜಿರಾಫೆ ಖರ್ಚಾಗಿ ರೂ.1 ಲಕ್ಷ ನೀಡುತ್ತೇನೆ. ನನ್ನ ಮರಣದ ಬಳಿಕ ನನ್ನ ಕುಟುಂಬಸ್ಥರು ನನ್ನ ಇಚ್ಛೆಯನ್ನು ಈಡೇರಿಸುತ್ತಾರೆಂಬ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರು ಎಟಿಎಂ ದರೋಡೆ: ಮತ್ತೋರ್ವ ಪ್ರಮುಖ ಆರೋಪಿ Xavier ತಮಿಳುನಾಡಿನಲ್ಲಿ ಬಂಧನ!

New Labour Codes- ಕೇಂದ್ರ ಸರ್ಕಾರದಿಂದ ಐತಿಹಾಸಿಕ 4 ಕಾರ್ಮಿಕ ಸಂಹಿತೆ ಜಾರಿ, ಯೂನಿಯನ್‌ ಗಳ ವಿರೋಧ, ಎಚ್ಚರಿಕೆ ಹೆಜ್ಜೆಯಿಡಲು ಕಂಪೆನಿಗಳ ನಿರ್ಧಾರ

ಸಿಎಂ ಹುದ್ದೆಗಾಗಿ ಮುಂದುವರಿದ ಹಗ್ಗಜಗ್ಗಾಟ: ದೆಹಲಿಯಲ್ಲಿ ಡಿಕೆ ಶಿವಕುಮಾರ್ ಬಣದ ಮೇಲಾಟ; ಕುರ್ಚಿ ಉಳಿಸಿಕೊಳ್ಳಲು ಸಿದ್ದರಾಮಯ್ಯ ಹೋರಾಟ!

ಇಂದು ಸಿಎಂ ಆಗಿರುವ ಮಹಾನುಭಾವರೇ ಅಂದು ಕುಮಾರಸ್ವಾಮಿ ಸರ್ಕಾರ ಕೆಡವಿದ್ರು: ಎಚ್.ಡಿ ದೇವೇಗೌಡ

ಬಣ ಬಡಿದಾಟ, ಅಧಿಕಾರ ಗುದ್ದಾಟ: ಇಂದು ಸಿದ್ದರಾಮಯ್ಯ- ಡಿಕೆಶಿ ಜೊತೆ ಮಲ್ಲಿಕಾರ್ಜುನ ಖರ್ಗೆ ಮುಖಾಮುಖಿ ಚರ್ಚೆ ಸಾಧ್ಯತೆ, ತೆರೆ ಎಳೆಯುತ್ತಾರೆಯೇ ಗೊಂದಲಕ್ಕೆ?

SCROLL FOR NEXT