ಜಿರಾಫೆ ಮರಿ 
ರಾಜ್ಯ

ಕೊರೋನಾ ಭೀತಿ ನಡುವಲ್ಲೇ ಜಿರಾಫೆ ಮರಿ ದತ್ತು ಪಡೆದ ವಿಂಗ್ ಕಮಾಂಡರ್ ಜಿಬಿ ಅತ್ರಿ

ಸಾಕು ಪ್ರಾಣಿಗಳು, ಬೀದಿ ನಾಯಿಗಳನ್ನು ತೆಗೆದುಕೊಳ್ಳುವುದು ಸಾಮಾನ್ಯ ಆದರೆ, ವಿಂಗ್ ಕಮಾಂಡರ್ (ನಿವೃತ್ತ) ಜಿಬಿ ಅತ್ರಿಯವರು ವಿಭಿನ್ನ ರೀತಿಯಲ್ಲಿ ಜಿರಾಫೆ ಮರಿಯೊಂದನ್ನು ದತ್ತು ತೆಗೆದುಕೊಳ್ಳುವ ಮೂಲಕ ಪ್ರಶಂಸೆಗೆ ಪಾತ್ರರಾಗಿದ್ದಾರೆ. 

ಬೆಂಗಳೂರು: ಸಾಕು ಪ್ರಾಣಿಗಳು, ಬೀದಿ ನಾಯಿಗಳನ್ನು ತೆಗೆದುಕೊಳ್ಳುವುದು ಸಾಮಾನ್ಯ ಆದರೆ, ವಿಂಗ್ ಕಮಾಂಡರ್ (ನಿವೃತ್ತ) ಜಿಬಿ ಅತ್ರಿಯವರು ವಿಭಿನ್ನ ರೀತಿಯಲ್ಲಿ ಜಿರಾಫೆ ಮರಿಯೊಂದನ್ನು ದತ್ತು ತೆಗೆದುಕೊಳ್ಳುವ ಮೂಲಕ ಪ್ರಶಂಸೆಗೆ ಪಾತ್ರರಾಗಿದ್ದಾರೆ. 

18 ತಿಂಗಳ ಜಿರಾಫೆ ಯದುನಂದನ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದದಲ್ಲಿದ್ದು, ಈ ಜಿರಾಫೆಯನ್ನು ಅತ್ರಿಯವರು ದತ್ತು ತೆಗೆದುಕೊಂಡಿದ್ದಾರೆ. 

ನಾನು ಮಾರಕ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದು, ಈಗಾಗಲೇ 19 ಸುತ್ತಿನ ಕೀಮೋಥೆರಪಿಯನ್ನು ಪಡೆದುಕೊಂಡಿದ್ದೇನೆ. ಮತ್ತೊಂದು ಸುತ್ತಿನ ಚಿಕಿತ್ಸೆ ಪಡೆಯಬೇಕಿದೆ. ನನ್ನ ಕೊನೆಯ ದಿನಗಳ ಏಣಿಕೆ ಆರಂಬವಾಗಿದೆ. ಬಾಯಿ ಇಲ್ಲದ ಪ್ರಾಣಿಗಳಿಗಾಗಿ ಏನನ್ನಾದರೂ ಮಾಡಬೇಕೆಂದು ಕೊಂಡಿದ್ದೆ. ನನ್ನ 2 ವರ್ಷದ ಮೊಮ್ಮಗನೇ ಜಿರಾಫೆ ದತ್ತು ತೆಗೆದುಕೊಳ್ಳಲು ಪ್ರೇರಣೆಯಾಗಿದ್ದ. ಈ ಬಗ್ಗೆ ನಾನು ಕುಟುಂಬ ಸದಸ್ಯರೊಂದಿಗೆ ಮಾತನಾಡಿದ್ದೆ. ಎಲ್ಲರೂ ಒಪ್ಪಿಗೆ ನೀಡಿದ್ದರು. ಕುಟುಂಬದ ಸಾಕಷ್ಟು ಮಂದಿ ಹುಲಿ ಹಾಗೂ ಸಿಂಹಕ್ಕೆ ಮತ ನೀಡಿದ್ದರು. ಆದರೆ, ನನ್ನ ಮೊಮ್ಮಗ ಜಿರಾಫೆ ಪರವಾಗಿ ಮತ ನೀಡಿದ್ದ. ದುರ್ಬಲವೆಂದು ಘೋಷಿಸಲ್ಪಟ್ಟ ಒಂದು ಜಾತಿಯ ಪ್ರಾಣಿ ಇದಾಗಿದ್ದು, ಅವುಗಳ ರಕ್ಷಣೆ ಅಗತ್ಯವಿದೆ ಎಂಬುದು ಈ ವೇಳೆ ನನಗೆ ಅರ್ಥವಾಯಿತು. ಇಂತಹ ಪ್ರಾಣಿಗಳಿಗೆ ಸಹಾಯ ಮಾಡಬೇಕೆಂದು ನಿರ್ಧರಿಸಿದೆ. ಹೀಗಾಗಿ ಜಿರಾಫೆ ಮರಿ ದತ್ತು ಪಡೆದು, ಅದರ ಸಂರಕ್ಷಣೆಗ ರೂ.1 ಲಕ್ಷ ನೀಡಲು ಮುಂದಾದೆ ಎಂದು ಅತ್ರಿ ತಿಳಿಸಿದ್ದಾರೆ. 

ಇದು ನಮ್ಮ ಮದು, ನಾನು ಬದುಕಿರುವವರೆಗೂ ಜಿರಾಫೆ ಖರ್ಚಾಗಿ ರೂ.1 ಲಕ್ಷ ನೀಡುತ್ತೇನೆ. ನನ್ನ ಮರಣದ ಬಳಿಕ ನನ್ನ ಕುಟುಂಬಸ್ಥರು ನನ್ನ ಇಚ್ಛೆಯನ್ನು ಈಡೇರಿಸುತ್ತಾರೆಂಬ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಮೋದಿಯವರು ಅವಮಾನ ಸಹಿಸುವುದಿಲ್ಲ, ಅವರು ಬುದ್ಧಿವಂತ ನಾಯಕ, ತಲೆಬಾಗಿಕೊಂಡು ಹೋಗುವವರಲ್ಲ': US tariffs ಮಧ್ಯೆ ಪುಟಿನ್ ಪ್ರಶಂಸೆ ಮಾತು!

ಲಡಾಖ್: ಪತಿಯ ಬಿಡುಗಡೆ ಕೋರಿ ಸುಪ್ರೀಂ ಕೋರ್ಟ್ ಮೊರೆ ಹೋದ ವಾಂಗ್ಚುಕ್ ಪತ್ನಿ ಗೀತಾಂಜಲಿ

ರಾಜ್ಯಕ್ಕೆ 3,705 ಕೋಟಿ ರೂ. ತೆರಿಗೆ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ..!

ಪೇಸ್‌ಮೇಕರ್‌ ಅಳವಡಿಕೆ ಯಶಸ್ವಿ: ಮಲ್ಲಿಕಾರ್ಜುನ ಖರ್ಗೆ ಆರೋಗ್ಯ ಸ್ಥಿರ, ಆಸ್ಪತ್ರೆಯಿಂದ ಡಿಸ್‌ಚಾರ್ಜ್

Karur stampede: ನಟ ಮತ್ತು ಟಿವಿಕೆ ಅಧ್ಯಕ್ಷ ವಿಜಯ್ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯ

SCROLL FOR NEXT