ಈರುಳ್ಳಿ ಖರೀದಿ ಮಾಡಿದ ತಹಸಿಲ್ದಾರ್ ವಿಜಯಕುಮಾರ್ 
ರಾಜ್ಯ

ಈರುಳ್ಳಿ ಖರೀದಿಸಿ ರೈತ ಮಹಿಳೆ ನೆರವಿಗೆ ನಿಂತ ಹೂವಿನಹಡಗಲಿ ತಹಸಿಲ್ದಾರ್

ಇಡೀ ದೇಶವೇ ಕೊರೋನಾ ವೈರಸ್ ಲಾಕ್ ಡೌನ್ ನಲ್ಲಿದ್ದು, ಅತ್ತ ರೈತರು ಮಾತ್ರ ತಾವು ಬೆಳೆದ ಬೆಳೆಯನ್ನು ಜನರಿಗೆ ತಲುಪಿಸಲಾಗದೇ ಸಂಕಷ್ಟ ಎದುರಿಸುತ್ತಿರುವ ಈ ಹೊತ್ತಿನಲ್ಲಿ ಹೂವಿನಹಡಗಲಿ ತಹಸಿಲ್ದಾರ್ ರೈತ ಮಹಿಳೆಯ ಈರುಳ್ಳಿ ಖರೀದಿಸಿ ಆತನ ಬೆನ್ನಿಗೆ  ನಿಲ್ಲುವ ಕೆಲಸ ಮಾಡಿದ್ದಾರೆ.

ಹೊಸಪೇಟೆ: ಇಡೀ ದೇಶವೇ ಕೊರೋನಾ ವೈರಸ್ ಲಾಕ್ ಡೌನ್ ನಲ್ಲಿದ್ದು, ಅತ್ತ ರೈತರು ಮಾತ್ರ ತಾವು ಬೆಳೆದ ಬೆಳೆಯನ್ನು ಜನರಿಗೆ ತಲುಪಿಸಲಾಗದೇ ಸಂಕಷ್ಟ ಎದುರಿಸುತ್ತಿರುವ ಈ ಹೊತ್ತಿನಲ್ಲಿ ಹೂವಿನಹಡಗಲಿ ತಹಸಿಲ್ದಾರ್ ರೈತ ಮಹಿಳೆಯ ಈರುಳ್ಳಿ ಖರೀದಿಸಿ ಆತನ ಬೆನ್ನಿಗೆ  ನಿಲ್ಲುವ ಕೆಲಸ ಮಾಡಿದ್ದಾರೆ.

ಹೌದು.. ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಹಸಿಲ್ದಾರ್ ವಿಜಯಕುಮಾರ್ ಇಲ್ಲಿನ ರೈತರು ಬೆಳೆದಿದ್ದ ಈರುಳ್ಳಿ ಬೆಳೆಯನ್ನು ಖರೀದಿ ಮಾಡಿ ಅವರ ಬೆನ್ನಿಗೆ ನಿಲ್ಲುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಬೆಳೆದ ಈರುಳ್ಳಿ ಬೆಳೆಗೆ ಸರಿಯಾದ ಬೆಲೆ ಸಿಗದೆ ಸೂಕ್ತ ಮಾರುಕಟ್ಟೆಯೂ  ಕಂಗಾಲಾಗಿದ್ದ ಇಬ್ಬರು ರೈತರ ಈರುಳ್ಳಿಯನ್ನು ಹೂವಿನಹಡಗಲಿ ತಹಸಿಲ್ದಾರ್ ವಿಜಯಕುಮಾರ್ ಖರೀದಿ ಮಾಡಿದ್ದಾರೆ. 

ತಾಲೂಕಿನ ಕೊಯಿಲಾರಗಟ್ಟಿ ತಾಂಡದ ರತ್ನಾಬಾಯಿ ಎಂಬ ರೈತ ಮಹಿಳೆ, ತಾನು ಬೆಳೆದ ಈರುಳ್ಳಿಯಿಂದ ಬಂದ ಆದಾಯದಿಂದ ಮಗಳ ಮದುವೆ ಮಾಡಲು ಸಿದ್ದತೆ ನಡೆಸಿದ್ದರು. ಆದರೆ ಸರಿಯಾದ ಬೆಲೆ ಸಿಗದೆ ಆತ್ಮಹತ್ಯೆಗೆ ಮುಂದಾಗಿದ್ದರು. ಈ ವಿಚಾರ ತಿಳಿದ ತಹಸಿಲ್ದಾರ್ ವಿಜಯ್  ಕುಮಾರ್ ಅವರು ರೈತ ಮಹಿಳೆ ರತ್ನಾಬಾಯಿ ಅವರಿಗೆ ಧೈರ್ಯ ತುಂಬಿದ್ದಾರೆ. ಅಲ್ಲದೆ ಕೊಯಿಲಾರ ಗಟ್ಟಿ ತಾಂಡದ ರತ್ನಾ ಬಾಯಿ ಮತ್ತು ಮೇಟ್ಯಾನಾಯ್ಕ್ ಎಂಬ ರೈತ ಮಹಿಳೆಯರಿಂದ ಈರುಳ್ಳಿ ಖರೀದಿ ಮಾಡಿದ್ದಾರೆ. ಈರುಳ್ಳಿ ಲಾರಿಯನ್ನು ಕಛೇರಿಗೆ ಕರೆಸಿ 80 ಚೀಲ ಈರುಳ್ಳಿಯನ್ನು  ತಲಾ 350ರೂಪಾಯಿಂತೆ ತಾವೇ ಖರೀದಿಸಿದ್ದಾರೆ. ಅಲ್ಲದೆ ಹೀಗೆ ಖರೀದಿ ಮಾಡಿದ ಈರುಳ್ಳಿಯನ್ನು ತಮ್ಮ ಕಛೇರಿಯ ಪ್ರತಿ ಸಿಬ್ಬಂದಿಗೆ ಹಂಚಿಕೆ ಮಾಡಿದ್ದಲ್ಲದೆ ಇನ್ನುಳಿದ ಮೂರು ಇಲಾಖೆಗೆ ಹಂಚಿಕೆ ಮಾಡಿ ಹಣ ಸಂಗ್ರಹಿಸಿ ರೈತರಿಗೆ ನೀಡಿದ್ದಾರೆ.

ಕಳೆದ ಎರಡು ತಿಂಗಳಿನಿಂದ ರೈತ ಬೆಳೆದ ಈರುಳ್ಳಿ ಬೆಳೆಗೆ ಸರಿಯಾದ ಬೆಲೆ ಸಿಗದೆ ಕಂಗಾಲಾಗಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆಯೇ Maria Corina Machado ವಿವಾದಕ್ಕೆ ಗುರಿ; ಭುಗಿಲೆದ್ದ ಅಶಾಂತಿ!

Aligarh Businessman Murder: ಹಿಂದೂ ಮಹಾಸಭಾ ನಾಯಕಿ ಪೂಜಾ ಶಕುನ್ ಪಾಂಡೆ ಬಂಧನ! ಉದ್ಯಮಿಗೆ ಲೈಂಗಿಕ ಕಿರುಕುಳ ನೀಡಿದ್ರಾ?

'China isn't afraid': ಅಮೆರಿಕದ ಶೇ.100 ರಷ್ಟು ಸುಂಕದ ಬಗ್ಗೆ ಚೀನಿಯರ ಪ್ರತಿಕ್ರಿಯೆ!

ಲಾಲ್ ಬಾಗ್ ಅಭಿವೃದ್ಧಿಗೆ 10 ಕೋಟಿ ರೂ; ಸುರಂಗ ರಸ್ತೆ ಯೋಜನೆಯಿಂದ ಸಸ್ಯೋದ್ಯಾನದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ: ಡಿ.ಕೆ ಶಿವಕುಮಾರ್; Video

SCROLL FOR NEXT