ಈರುಳ್ಳಿ ಖರೀದಿ ಮಾಡಿದ ತಹಸಿಲ್ದಾರ್ ವಿಜಯಕುಮಾರ್ 
ರಾಜ್ಯ

ಈರುಳ್ಳಿ ಖರೀದಿಸಿ ರೈತ ಮಹಿಳೆ ನೆರವಿಗೆ ನಿಂತ ಹೂವಿನಹಡಗಲಿ ತಹಸಿಲ್ದಾರ್

ಇಡೀ ದೇಶವೇ ಕೊರೋನಾ ವೈರಸ್ ಲಾಕ್ ಡೌನ್ ನಲ್ಲಿದ್ದು, ಅತ್ತ ರೈತರು ಮಾತ್ರ ತಾವು ಬೆಳೆದ ಬೆಳೆಯನ್ನು ಜನರಿಗೆ ತಲುಪಿಸಲಾಗದೇ ಸಂಕಷ್ಟ ಎದುರಿಸುತ್ತಿರುವ ಈ ಹೊತ್ತಿನಲ್ಲಿ ಹೂವಿನಹಡಗಲಿ ತಹಸಿಲ್ದಾರ್ ರೈತ ಮಹಿಳೆಯ ಈರುಳ್ಳಿ ಖರೀದಿಸಿ ಆತನ ಬೆನ್ನಿಗೆ  ನಿಲ್ಲುವ ಕೆಲಸ ಮಾಡಿದ್ದಾರೆ.

ಹೊಸಪೇಟೆ: ಇಡೀ ದೇಶವೇ ಕೊರೋನಾ ವೈರಸ್ ಲಾಕ್ ಡೌನ್ ನಲ್ಲಿದ್ದು, ಅತ್ತ ರೈತರು ಮಾತ್ರ ತಾವು ಬೆಳೆದ ಬೆಳೆಯನ್ನು ಜನರಿಗೆ ತಲುಪಿಸಲಾಗದೇ ಸಂಕಷ್ಟ ಎದುರಿಸುತ್ತಿರುವ ಈ ಹೊತ್ತಿನಲ್ಲಿ ಹೂವಿನಹಡಗಲಿ ತಹಸಿಲ್ದಾರ್ ರೈತ ಮಹಿಳೆಯ ಈರುಳ್ಳಿ ಖರೀದಿಸಿ ಆತನ ಬೆನ್ನಿಗೆ  ನಿಲ್ಲುವ ಕೆಲಸ ಮಾಡಿದ್ದಾರೆ.

ಹೌದು.. ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಹಸಿಲ್ದಾರ್ ವಿಜಯಕುಮಾರ್ ಇಲ್ಲಿನ ರೈತರು ಬೆಳೆದಿದ್ದ ಈರುಳ್ಳಿ ಬೆಳೆಯನ್ನು ಖರೀದಿ ಮಾಡಿ ಅವರ ಬೆನ್ನಿಗೆ ನಿಲ್ಲುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಬೆಳೆದ ಈರುಳ್ಳಿ ಬೆಳೆಗೆ ಸರಿಯಾದ ಬೆಲೆ ಸಿಗದೆ ಸೂಕ್ತ ಮಾರುಕಟ್ಟೆಯೂ  ಕಂಗಾಲಾಗಿದ್ದ ಇಬ್ಬರು ರೈತರ ಈರುಳ್ಳಿಯನ್ನು ಹೂವಿನಹಡಗಲಿ ತಹಸಿಲ್ದಾರ್ ವಿಜಯಕುಮಾರ್ ಖರೀದಿ ಮಾಡಿದ್ದಾರೆ. 

ತಾಲೂಕಿನ ಕೊಯಿಲಾರಗಟ್ಟಿ ತಾಂಡದ ರತ್ನಾಬಾಯಿ ಎಂಬ ರೈತ ಮಹಿಳೆ, ತಾನು ಬೆಳೆದ ಈರುಳ್ಳಿಯಿಂದ ಬಂದ ಆದಾಯದಿಂದ ಮಗಳ ಮದುವೆ ಮಾಡಲು ಸಿದ್ದತೆ ನಡೆಸಿದ್ದರು. ಆದರೆ ಸರಿಯಾದ ಬೆಲೆ ಸಿಗದೆ ಆತ್ಮಹತ್ಯೆಗೆ ಮುಂದಾಗಿದ್ದರು. ಈ ವಿಚಾರ ತಿಳಿದ ತಹಸಿಲ್ದಾರ್ ವಿಜಯ್  ಕುಮಾರ್ ಅವರು ರೈತ ಮಹಿಳೆ ರತ್ನಾಬಾಯಿ ಅವರಿಗೆ ಧೈರ್ಯ ತುಂಬಿದ್ದಾರೆ. ಅಲ್ಲದೆ ಕೊಯಿಲಾರ ಗಟ್ಟಿ ತಾಂಡದ ರತ್ನಾ ಬಾಯಿ ಮತ್ತು ಮೇಟ್ಯಾನಾಯ್ಕ್ ಎಂಬ ರೈತ ಮಹಿಳೆಯರಿಂದ ಈರುಳ್ಳಿ ಖರೀದಿ ಮಾಡಿದ್ದಾರೆ. ಈರುಳ್ಳಿ ಲಾರಿಯನ್ನು ಕಛೇರಿಗೆ ಕರೆಸಿ 80 ಚೀಲ ಈರುಳ್ಳಿಯನ್ನು  ತಲಾ 350ರೂಪಾಯಿಂತೆ ತಾವೇ ಖರೀದಿಸಿದ್ದಾರೆ. ಅಲ್ಲದೆ ಹೀಗೆ ಖರೀದಿ ಮಾಡಿದ ಈರುಳ್ಳಿಯನ್ನು ತಮ್ಮ ಕಛೇರಿಯ ಪ್ರತಿ ಸಿಬ್ಬಂದಿಗೆ ಹಂಚಿಕೆ ಮಾಡಿದ್ದಲ್ಲದೆ ಇನ್ನುಳಿದ ಮೂರು ಇಲಾಖೆಗೆ ಹಂಚಿಕೆ ಮಾಡಿ ಹಣ ಸಂಗ್ರಹಿಸಿ ರೈತರಿಗೆ ನೀಡಿದ್ದಾರೆ.

ಕಳೆದ ಎರಡು ತಿಂಗಳಿನಿಂದ ರೈತ ಬೆಳೆದ ಈರುಳ್ಳಿ ಬೆಳೆಗೆ ಸರಿಯಾದ ಬೆಲೆ ಸಿಗದೆ ಕಂಗಾಲಾಗಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

US ವಲಸೆ ನೀತಿ ಮತ್ತಷ್ಟು ಕಠಿಣ: ಅರ್ಜಿದಾರರಿಗೆ ಟ್ರಂಪ್‌ ಸರ್ಕಾರ ಶಾಕ್‌: ವಿಶ್ವದಾದ್ಯಂತ VISA ಸಂದರ್ಶನಗಳಿಗೆ ಬ್ರೇಕ್‌!

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಡವರ ಬದುಕಿಗೆ ಬೆಲೆ ಏರಿಕೆ ಬರೆ: ‘ಅಚ್ಛೇ ದಿನ್ ಆಯ್ತು ದುಬಾರಿ ದಿನ್: ಅಗತ್ಯ ವಸ್ತುಗಳ ಬೆಲೆ ಏರಿಕೆ ಬೆನ್ನಲ್ಲೇ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!