800 ರೂಪಾಯಿಗೆ ಬೌನ್ಸ್ ಬೈಸಿಕಲ್, 500 ದ್ವಿಚಕ್ರ ವಾಹನಗಳ ಮಾರಾಟ! 
ರಾಜ್ಯ

800 ರೂಪಾಯಿಗೆ ಬೌನ್ಸ್ ಬೈಸಿಕಲ್, 500 ದ್ವಿಚಕ್ರ ವಾಹನಗಳ ಮಾರಾಟ!

ಬೆಂಗಳೂರು ಮೂಲದ ಸ್ಕೂಟರ್ ರೆಂಟಲ್ ಸ್ಟಾರ್ಟ್ ಅಪ್ ಬೌನ್ಸ್ ರೂಪಾಂತರಗೊಳ್ಳುತ್ತಿದ್ದು, ಎಲೆಕ್ಟ್ರಿಕ್ ವಾಹನಗಳ ಮೇಲೆ ಹೆಚ್ಚಿನ ಹೂಡಿಕೆ ಮಾಡಲು ನಿರ್ಧರಿಸಿದೆ. 

ಬೆಂಗಳೂರು: ಬೆಂಗಳೂರು ಮೂಲದ ಸ್ಕೂಟರ್ ರೆಂಟಲ್ ಸ್ಟಾರ್ಟ್ ಅಪ್ ಬೌನ್ಸ್ ರೂಪಾಂತರಗೊಳ್ಳುತ್ತಿದ್ದು, ಎಲೆಕ್ಟ್ರಿಕ್ ವಾಹನಗಳ ಮೇಲೆ ಹೆಚ್ಚಿನ ಹೂಡಿಕೆ ಮಾಡಲು ನಿರ್ಧರಿಸಿದೆ. 

ಬದಲಾವಣೆಗೆ ತೆರೆದುಕೊಳ್ಳುತ್ತಿರುವ ಬೌನ್ಸ್ ತನ್ನಲ್ಲಿರುವ ಬೆಂಗಳೂರು-ಹೈದರಾಬಾದ್ ನಾದ್ಯಂತ 1,500 ಬೈಸಿಕಲ್ ಗಳನ್ನು 800 ರೂಪಾಯಿಗಳಿಗೆ ಮಾರಾಟ ಮಾಡಲು ನಿರ್ಧರಿಸಿದೆ. 

ಸ್ಕೂಟರ್ ಶೇರಿಂಗ್ ಉದ್ಯಮದತ್ತ ಬೌನ್ಸ್ ಹೆಚ್ಚಿನ ಗಮನ ಹರಿಸುತ್ತಿದ್ದು, ಎಲೆಕ್ಟ್ರಿಕ್ ವೆಹಿಕಲ್ ಗಳ ಮೇಲೆ ಹೂಡಿಕೆ ಮಾಡಲು ನಿರ್ಧರಿಸಿದೆ. ಕಡಿಮೆ ದೂರದ ಟ್ರಿಪ್ ಗಳಿಗೆ ಮಾತ್ರ ದ್ವಿಚಕ್ರವಾಹನಗಳು ಉತ್ತಮ ಎಂಬುದನ್ನು ಅರಿತೆವು, ಆದ ಕಾರಣ ಇಂಧನ ಚಾಲಿತ 500 ಸ್ಕೂಟರ್ ಗಳನ್ನು ಮಾರಾಟ ಮಾಡುತ್ತಿದ್ದೇವೆ ಎಂದು ಬೌನ್ಸ್ ವಕ್ತಾರರು ತಿಳಿಸಿದ್ದಾರೆ. 

ಬೌನ್ಸ್ ನ ಸಹ ಸಂಸ್ಥಾಪಕ ವಿವೇಕಾನಂದ ಹಳ್ಳೆಕೆರೆ ಟ್ವಿಟರ್ ನಲ್ಲಿ ಬರೆದಿದ್ದು, "ವಾಟ್ಸ್ ಆಪ್ ಗ್ರೂಪ್ ಗಳಲ್ಲಿ ಏನು ಬೇಕಾದರೂ ವೈರಲ್ ಮಾಡಬಹುದು, ಕೆಲವು ಬಳಕೆಯಾದ ಸ್ಕೂಟರ್ ಗಳನ್ನು ಮಾರಾಟ ಮಾಡಲು ಮುಂದಾಗಿದ್ದೆವೆ, ಆದರೆ ಇದು ಅದರದ್ದೇ ಆದ ಸ್ವರೂಪದಲ್ಲಿ ವೈರಲ್ ಆಗತೊಡಗಿ ಸಂಸ್ಥೆಯನ್ನೇ ಮುಚ್ಚುತ್ತಿದ್ದೇವೆ ಎಂಬ ಪ್ರಚಾರ ಪಡೆಯಿತು. ಪ್ರಚಾರದಲ್ಲಿ ಕೆಟ್ಟ ಪ್ರಚಾರ ಎಂಬುದೇನಿಲ್ಲ ಎಂದು ಹೇಳಿದ್ದಾರೆ. 

ಇದೇ ವೇಳೆ ಕೊರೋನಾ ಸಂದರ್ಭದಲ್ಲಿ ಬೌನ್ಸ್ ದ್ವಿಚಕ್ರ ವಾಹನಗಳ ಬಗ್ಗೆ ಗ್ರಾಹಕರಲ್ಲಿ ಆತಂಕ ಇರುತ್ತದೆ. ಈ ಹಿನ್ನೆಲೆಯಲ್ಲಿ ವಾಹನಗಳಿಗೆ ಕ್ರಿಮಿನಾಶಕ ಸಿಂಪಡಿಸಲಾಗಿದ್ದು, ಮೂರು ತಿಂಗಳ ಕಾಲ ಕ್ರಿಮಿನಾಶಕದ ಕೋಟಿಂಗ್ ಹಾಗೆಯೇ ಇರಲಿದೆ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

NICE ವಿವಾದ: ದೇವೇಗೌಡರು ಬೇಕಿದ್ರೆ ಕೋರ್ಟ್‌ಗೆ ಹೋಗಲಿ, ಉಪವಾಸ ಮಾಡಲಿ; ಮಾಜಿ ಪ್ರಧಾನಿ ಪತ್ರಕ್ಕೆ CM ಡಿಕೆಶಿ ತಿರುಗೇಟು

ಸಾಕು ಮಾಡಿ: ಸೇವಾಶ್ರಯ ಪ್ರಕರಣದಲ್ಲಿ ಕೊನೆಗೂ ಅಭಿಷೇಕ್ ಬ್ಯಾನರ್ಜಿಗೆ ಹೈಕೋರ್ಟ್‌ನಿಂದ ಬಿಗ್ ರಿಲೀಫ್, ಬಂಧನಕ್ಕೆ ತಡೆ!

ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್‌; ಶೇ. 7.5 ರಷ್ಟು ಮೀಸಲಾತಿ – ಕರಡು ನಿಯಮ ಪ್ರಕಟ

ಸ್ವಚ್ಛ ವಾಯು ಸರ್ವೇಕ್ಷಣ 2026: ಬೆಂಗಳೂರು, ಶ್ರೀನಗರ ಹಿಂದಿಕ್ಕಿದ ದೆಹಲಿ; ಅತ್ಯಂತ ಸ್ವಚ್ಛ ಗಾಳಿ ಯಾವ ನಗರದಲ್ಲಿದೆ ಗೊತ್ತಾ?

ಸತ್ಯ ನಿಕೇತನ ಪಿಜಿ ಕುಸಿತದ ಬಗ್ಗೆ ಉನ್ನತ ಮಟ್ಟದ ತನಿಖೆಗೆ ದೆಹಲಿ ಹೈಕೋರ್ಟ್ ಆದೇಶ; ದುರಂತಕ್ಕೆ ಮಾಲೀಕನಷ್ಟೇ ಅಲ್ಲ MCD, DU ಸಹ ಹೊಣೆ!